ಆ್ಯಪ್ನಗರ

ರಾಜಸ್ಥಾನದಲ್ಲಿ ಸೆಗಣಿಯಿಂದ ಪೇಪರ್‌ ತಯಾರಿ

ರಾಜಸ್ಥಾನದಲ್ಲಿ ಗೋಪಾಲನ ಇಲಾಖೆಯು ಸೆಗಣಿಯಿಂದ ಪೇಪರ್‌ ತಯಾರಿಸಲು ಮುಂದಾಗಿದೆ.

TIMESOFINDIA.COM 13 Sep 2018, 2:13 pm
ಜೈಪುರ: ಜೈಪುರ: ರಾಜಸ್ಥಾನದಲ್ಲಿ ಹಸುವಿನ ಸೆಗಣಿ ಮತ್ತು ಮೂತ್ರವನ್ನು ಸಾವಯವ ಗೊಬ್ಬರ, ಗ್ರಾಮೀಣ ಪ್ರದೇಶಗಳಲ್ಲಿ ಇಂಧನವಾಗಿ ಬಳಸುವುದು , ಬಯೋಗ್ಯಾಸ್‌ ಪ್ಲಾಂಟ್‌ಗಳಿಗೆ ಸಾಮಾನ್ಯವಾಗಿದೆ. ಈಗ ಅಲ್ಲಿನ ಗೋಪಾಲನ ಇಲಾಖೆಯು ಸೆಗಣಿಯಿಂದ ಪೇಪರ್‌ ತಯಾರಿಸಲು ಮುಂದಾಗಿದ್ದು, ಈ ಮೂಲಕ ಗೋಶಾಲೆಗಳಿಗೆ ಆದಾಯ ಬರಲಿದೆ ಎಂದು ಇಲಾಖೆ ಹೇಳಿದೆ.
Vijaya Karnataka Web 1


ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಘಟಕವಾಗಿರುವ ಕುಮಾರಪ್ಪ ನ್ಯಾಷನಲ್‌ ಹ್ಯಾಂಡ್‌ಲೂಂ ಪೇಪರ್‌ ಇನ್ಸ್ಟಿಟ್ಯೂಟ್‌ ಸೆಗಣಿಯಿಂದ ಪೇಪರ್‌ ತಯಾರಿಸಲಿದ್ದು, ಇದಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಗಿರಿರಾಜ್‌ ಸಿಂಗ್‌ ಚಾಲನೆ ನೀಡಿದರು.

ಬಯೋಗ್ಯಾಸ್‌ ಪ್ಲಾಂಟ್‌ಗೆ ಬಳಕೆಯಾಗಿ ಉಳಿಯುವ ಸೆಗಣಿ ತ್ಯಾಜ್ಯ ಸಾರಜನಕದ ಆಗರ. ಈ ಯೋಜನೆಯಿಂದ ರೈತರಿಗೆ ಲಾಭವಾಗುವ ಜತೆಗೆ ಬೀದಿಗಳು ಸ್ವಚ್ಛವಾಗಲಿವೆ. ರಾಜ್ಯದಲ್ಲಿ 5 ಲಕ್ಷ ಹಸುಗಳಿದ್ದು, 1,160 ನೋಂದಾಯಿತ ಗೋಶಾಲೆಗಳಿವೆ. ಉತ್ಪನ್ನಗಳ ಉತ್ಪಾದನೆ ಮತ್ತು ಮೌಲ್ಯ ಸೇರ್ಪಡೆ ಹೆಚ್ಚಿಸುವ ಮೂಲಕ ಹಸು ಸಾಕಣೆಯ ಸಮಗ್ರ ಮತ್ತು ಆರ್ಥಿಕ ಮಹತ್ವವನ್ನು ಮರು ಸ್ಥಾಪಿಸುವ ಪ್ರಯತ್ನ ನಡೆಸುವುದಾಗಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯದಲ್ಲಿ ಖಾಸಗಿ ಗೋ ಶಾಲೆಗಳಿಗೂ ಸರಕಾರ ಅನುದಾನ ನೀಡುತ್ತಿದ್ದು, ಗೋ ಮೂತ್ರದಿಂದ ಸೋಂಕು ನಿವಾರಕಗಳನ್ನು ಉತ್ಪಾದಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ