ಆ್ಯಪ್ನಗರ

Rajasthan Political Crisis: ಪೈಲಟ್‌ರಂತಹ ದ್ರೋಹಿ ಸಿಎಂ ಆಗುವುದಕ್ಕಿಂತ ಮಧ್ಯಂತರ ಚುನಾವಣೆ ಲೇಸು: ಕೈ ಸಚಿವರ ಗುಡುಗು

Rajasthan Political Crisis: ಬಂಡಾಯ ಬಣದ ಶಾಸಕರ ನಾಯಕ ಸಚಿನ್ ಪೈಲಟ್ ಅವರನ್ನು ಸಿಎಂ ಎಂದು ಒಪ್ಪಿಕೊಳ್ಳುವುದಕ್ಕಿಂತ ಮಧ್ಯಂತರ ಚುನಾವಣೆಗೆ ಹೋಗುವುದು ಉತ್ತಮ ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಬೆಂಬಲಿಗರು ಹೇಳಿದ್ದಾರೆ.

Edited byಅಮಿತ್ ಎಂ.ಎಸ್ | TIMESOFINDIA.COM 30 Sep 2022, 11:46 am

ಹೈಲೈಟ್ಸ್‌:

  • ಸಚಿನ್ ಪೈಲಟ್ ಅವರನ್ನು ದ್ರೋಹಿ ಎಂದ ಗೆಹ್ಲೋಟ್ ಬೆಂಬಲಿಗರು
  • ದ್ರೋಹಿಯೊಬ್ಬ ಸಿಎಂ ಆಗುವುದಕ್ಕಿಂತ ಮಧ್ಯಂತರ ಚುನಾವಣೆ ಉತ್ತಮ
  • ಕಾಂಗ್ರೆಸ್ ನಾಯಕತ್ವಕ್ಕೆ ಮುಜುಗರ ಉಂಟುಮಾಡಿದ ಶಾಸಕರ ಬಂಡಾಯ


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Pilot gehlot
ಜೈಪುರ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಿಂದೆ ಸರಿದಿದ್ದಾರೆ. ಆದರೆ ರಾಜ್ಯದಲ್ಲಿನ ಗೊಂದಲ ಮುಂದುವರಿದಿದೆ. ಮುಂದಿನ ನಡೆಯ ಬಗ್ಗೆ ಒಂದೆರಡು ದಿನಗಳಲ್ಲಿ ಸೋನಿಯಾ ಗಾಂಧಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆ ತೀವ್ರಗೊಂಡಿದೆ. ಆದರೆ ಅಶೋಕ್ ಗೆಹ್ಲೋಟ್ ಅವರಿಗೆ ನಿಷ್ಠರಾಗಿರುವ ಸಚಿವರು ಮತ್ತು ಶಾಸಕರು "ದ್ರೋಹಿಗಳ ಬಣದ" ಹೊಸ ಮುಖ್ಯಮಂತ್ರಿಯೊಂದಿಗೆ ಹೊಂದಿಕೊಳ್ಳುವುದಕ್ಕಿಂತ, ರಾಜೀನಾಮೆ ನೀಡಿ ಮಧ್ಯಂತರ ಚುನಾವಣೆ ಎದುರಿಸುವುದು ಲೇಸು ಎಂದು ಘೋಷಣೆ ಮಾಡಿದ್ದಾರೆ. ಇದು ಕಾಂಗ್ರೆಸ್‌ ನಾಯಕತ್ವಕ್ಕೆ ಮತ್ತಷ್ಟು ಇರಿಸುಮುರುಸು ಉಂಟುಮಾಡಿದೆ.
Rajasthan Politics: ಪೈಲಟ್ ಬಣದ ಶಾಸಕರಿಗೆ ಬಿಜೆಪಿ ನಂಟು: ಗೆಹ್ಲೋಟ್ ಆಪ್ತರ ವಿಡಿಯೋ ಬಾಂಬ್!

ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ರಾಜಸ್ಥಾನದಲ್ಲಿನ ಬೆಳವಣಿಗೆಗಳಿಗೆ ನೈತಿಕ ಹೊಣೆ ಹೊತ್ತುಕೊಂಡಿದ್ದರು. ಹಾಗೆಯೇ ಸೋನಿಯಾ ಅವರ ಕ್ಷಮೆ ಕೋರಿದ್ದರು. ಆದರೆ, ಪಕ್ಷದ ರಾಜ್ಯ ಮುಖಂಡರ ಬಂಡಾಯ ನಿಂತಿಲ್ಲ.

ಹಾಲಿ ಸಿಎಂ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಅವರ ಜಾಗಕ್ಕೆ ಸಚಿನ್ ಪೈಲಟ್ ಅವರನ್ನು ನೇಮಿಸುವ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಆದರೆ ಕಳೆದ ಭಾನುವಾರ 92 ಶಾಸಕರು, ಪೈಲಟ್ ಅವರನ್ನು ಬೆಂಬಲಿಸುವ ಬದಲು ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಗೆಹ್ಲೋಟ್ ಅವರ ಸಂಪುಟದ ಸಚಿವ ಗೋವಿಂದ್ ರಾಮ್ ಮೇಘವಾಲ್ ಅವರು ಮತ್ತೆ ಈ ಬೆದರಿಕೆ ಒಡ್ಡಿದ್ದಾರೆ. 'ದ್ರೋಹಿ'ಯನ್ನು ಸಚಿವರನ್ನಾಗಿ ಮಾಡಿದರೆ, 92 ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
Congress President Poll: ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸೊಲ್ಲ: ಸೋನಿಯಾ ಗಾಂಧಿ ಕ್ಷಮೆ ಕೋರಿದ ಗೆಹ್ಲೋಟ್

ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಈ ಹಿಂದೆ ಬಂಡಾಯ ಎದ್ದಿದ್ದಾಗ, ಅವರ ಪರ ಬಣದಲ್ಲಿದ್ದ ಯಾರನ್ನೂ ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ಪರ್ಸಾದಿ ಲಾಲ್ ಮೀನಾ ಹೇಳಿದ್ದಾರೆ. 2020ರ ಜುಲೈನಲ್ಲಿ 18 ಶಾಸಕರ ಜತೆ ಪೈಲಟ್ ಅವರು ಸಿಎಂ ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದರು.

"ಮೀನಾ ಅವರು ಹಿರಿಯ ನಾಯಕ. ಯಾವುದೇ ವಿಷಯದ ಸಂಕೀರ್ಣತೆ ವಿಶ್ಲೇಷಿಸದೆ ಅವರು ಏನನ್ನೂ ಹೇಳುವುದಿಲ್ಲ. ನನ್ನದೂ ಅದೇ ಅಭಿಪ್ರಾಯವಾಗಿದೆ. ಪೈಲಟ್ ಅವರಂತಹ ದ್ರೋಹಿಯನ್ನು ಸಿಎಂ ಆಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸೋನಿಯಾ, ರಾಹುಲ್ ಮತ್ತು ಗೆಹ್ಲೋಟ್ ಅವರು ಮಾತ್ರ ನಮ್ಮ ನಾಯಕರು" ಎಂದು ಮೇಘವಾಲ್ ತಿಳಿಸಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ