ಆ್ಯಪ್ನಗರ

ಸಿಬಿಐ ಸಮನ್ಸ್‌ಗೂ ಸೊಪ್ಪು ಹಾಕದ ರಾಜೀವ್‌ಕುಮಾರ್‌ ವಿಚಾರಣೆಗೆ ಗೈರು

ಈ ನಡುವೆ, ರಾಜೀವ್‌ಕುಮಾರ್‌ ಅವರು ನ್ಯಾಯಾಲಯದಿಂದ ರಕ್ಷಣೆ ಪಡೆಯಲು ಮುಂದಾಗಬಹುದು ಎಂಬ ಸಂಶಯದಿಂದ ಸಿಬಿಐ ಅಧಿಕಾರಿಗಳು ಬರಾಸತ್‌ ನ್ಯಾಯಾಲಯದ ಬಳಿ ಮಾರುವೇಷದಲ್ಲಿ ಕಾದು ಕುಳಿತಿದ್ದರು.

PTI 28 May 2019, 5:00 am
ಕೋಲ್ಕೊತಾ: ಬಹುಕೋಟಿ ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್‌ ನೀಡಿದ್ದರೂ ಹಿರಿಯ ಐಪಿಎಸ್‌ ಅಧಿಕಾರಿ ರಾಜೀವ್‌ ಕುಮಾರ್‌ ಅದಕ್ಕೆ ಸೊಪ್ಪು ಹಾಕಿಲ್ಲ. ರಜೆಯ ನೆಪ ಹೇಳಿ ವಿಚಾರಣೆಗೆ ಗೈರು ಹಾಜರಾಗಿದ್ದಲ್ಲದೇ, ಮೂರು ದಿನಗಳ ಹೆಚ್ಚುವರಿ ಸಮಯ ಕೇಳಿರುವುದು ಸಿಬಿಐ ಅಧಿಕಾರಿಗಳನ್ನು ಕೆರಳಿಸಿದೆ.
Vijaya Karnataka Web Kolkata: Kolkata Police commissioner Rajeev Kumar during the Joint Investiture C...
Kolkata Police commissioner Rajeev Kumar during the Joint Investiture Ceremony of West Bengal Police and Kolkata Police, in Kolkata.Photo/Swapan Mahapatra) (


ದೇಶಬಿಟ್ಟು ಪರಾರಿಯಾಗಲು ಸಿದ್ಧತೆ ನಡೆಸಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಸಿಬಿಐ ಭಾನುವಾರವಷ್ಟೇ ರಾಜೀವ್‌ ಕುಮಾರ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿತ್ತು. ಇದರ ಮಧ್ಯೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಕೂಡ ನೀಡಿತ್ತು. ಈ ಬೆಳವಣಿಗೆಯ ಮಧ್ಯೆಯೇ ಪಶ್ಚಿಮ ಬಂಗಾಳ ಸರಕಾರ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯೇ ರಾಜೀವ್‌ ಕುಮಾರ್‌ ಅವರನ್ನು ಸಿಐಡಿಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಹುದ್ದೆಗೆ ಮರು ನಿಯೋಜಿಸಿ ಆದೇಶ ಹೊರಡಿಸಿತ್ತು.

''ಮೂರು ದಿನ ರಜೆಯಲ್ಲಿದ್ದೇನೆ. ಹೀಗಾಗಿ ಆ ನಂತರವಷ್ಟೇ ವಿಚಾರಣೆಗೆ ಹಾಜರಾಗಲು ಸಾಧ್ಯ,'' ಎಂದು ರಾಜೀವ್‌ಕುಮಾರ್‌ ಬರೆದಿರುವ ಪತ್ರವನ್ನು ಸಿಐಡಿ ಅಧಿಕಾರಿಗಳು ಸೋಮವಾರ ಕೋಲ್ಕೊತಾದ ಸಿಬಿಐ ಕಚೇರಿಗೆ ತಲುಪಿಸಿದ್ದಾರೆ. ಈ ನಡುವೆ, ರಾಜೀವ್‌ಕುಮಾರ್‌ ಅವರು ನ್ಯಾಯಾಲಯದಿಂದ ರಕ್ಷಣೆ ಪಡೆಯಲು ಮುಂದಾಗಬಹುದು ಎಂಬ ಸಂಶಯದಿಂದ ಸಿಬಿಐ ಅಧಿಕಾರಿಗಳು ಬರಾಸತ್‌ ನ್ಯಾಯಾಲಯದ ಬಳಿ ಮಾರುವೇಷದಲ್ಲಿ ಕಾದು ಕುಳಿತಿದ್ದರು.

2500 ಕೋಟಿ ರೂ. ಮೊತ್ತದ ಈ ಚಿಟ್‌ಫಂಡ್‌ ಹಗರಣ ಸಂಬಂಧ ರಾಜ್ಯ ಸರಕಾರ ನೇಮಿಸಿದ್ದ ಎಸ್‌ಐಟಿ ತನಿಖೆಯ ನೇತೃತ್ವ ವಹಿಸಿದ್ದ ರಾಜೀವ್‌ಕುಮಾರ್‌ ವಿರುದ್ಧ ಸಿಬಿಐ ಸಾಕ್ಷ್ಯನಾಶದ ಆರೋಪ ಹೊರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ