ಆ್ಯಪ್ನಗರ

ದಾಸ್ನಾ ಜೈಲಿನಿಂದ ಹೊರಬಂದ ತಲ್ವಾರ್‌ ದಂಪತಿ

ಆರುಷಿ-ಹೇಮರಾಜ್ ಕೊಲೆ ಪ್ರಕರಣದ ಆರೋಪದಲ್ಲಿ ಖಲಾಸೆಗೊಂಡಿರುವ ತಲ್ವಾರ್‌ ದಂಪತಿಗಳು ಕೊನೆಗೂ ದಾಸ್ನಾ ಜೈಲಿನಿಂದ ಹೊರಬಂದಿದ್ದಾರೆ

TNN 16 Oct 2017, 7:40 pm
ಅಲಹಾಬಾದ್‌: ಆರುಷಿ-ಹೇಮರಾಜ್ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ತಲ್ವಾರ್‌ ದಂಪತಿಗಳು ಕೊನೆಗೂ ದಾಸ್ನಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
Vijaya Karnataka Web rajesh and nupur talwar walk out of dasna jail
ದಾಸ್ನಾ ಜೈಲಿನಿಂದ ಹೊರಬಂದ ತಲ್ವಾರ್‌ ದಂಪತಿ


2008ರಲ್ಲಿ ಮಗಳು ಆರುಷಿ ತಲ್ವಾರ್‌ ಮತ್ತು ಮನೆಗೆಲಸದಾಳು ಹೇಮರಾಜ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೂಪುರ್‌ ತಲ್ವಾರ್‌ ಮತ್ತು ರಾಜೇಶ್‌ ತಲ್ವಾರ್‌ ದಂಪತಿಗಳನ್ನು ಪೊಲೀಸರು ಬಂಧಿಸಿದ್ದರು. ಸುದೀರ್ಘ ನಾಲ್ಕು ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಹೈಕೋರ್ಟ್‌ ದಂಪತಿಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಆದೇಶಿಸಿತ್ತು.

ಮಾಹಿತಿಗಳ ಪ್ರಕಾರ ಇನ್ನು ಮುಂದೆ ದಂಪತಿಗಳು ನೋಯ್ಡಾದ ಜಲ್ವಾಯು ವಿಹಾರ್‌ನಲ್ಲಿರುವ ತಮ್ಮ ಮನೆಯಲ್ಲಿ ವಾಸ ಮಾಡುವುದಿಲ್ಲ ಎನ್ನಲಾಗಿದೆ. ಇದೇ ವೇಳೆ ಮಾಧ್ಯಮದವರೂ ಕೂಡಾ ತಮ್ಮನ್ನು ಶಾಂತಿಯಿಂದ ಜೀವಿಸುವಂತೆ ಅವಕಾಶ ಕಲ್ಪಿಸಿ ಎಂದು ದಂಪತಿ ಕೇಳಿಕೊಂಡಿದ್ದಾರೆ.

ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದ ತಲ್ವಾರ್‌ ದಂಪತಿ 2013ರಿಂದಲೂ ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿದ್ದರು.

rajesh and nupur talwar walk out of dasna jail

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ