ರಜನಿ ರಾಜಕೀಯಕ್ಕೆ: ಸ್ವಾಗತಿಸಿದ ಕಮಲ್
ಸೂಪರ್ ಸ್ಟಾರ್ ರಜನಿಕಾಂತ್ ಅವರ ರಜಕೀಯ ಪ್ರವೇಶವನ್ನು ನಟ ಕಮಲ್ ಹಾಸನ್ ಅವರು ಸ್ವಾಗತಿಸಿದ್ದಾರೆ.
Vijaya Karnataka Web 31 Dec 2017, 12:19 pm
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶವನ್ನು ನಟ ಕಮಲ್ ಹಾಸನ್ ಅವರು ಸ್ವಾಗತಿಸಿದ್ದಾರೆ.
ರಜನಿಕಾಂತ್ ಅವರು ಚೆನ್ನೈನ ರಾಘವೇಂದ್ರ ಹಾಲ್ನಲ್ಲಿ ಅಭಿಮಾನಿಗಳ ಜತೆ ಸಂವಾದ ನಡೆಸಿ, 'ನಾನು ಸ್ವಂತ ಪಕ್ಷ ಸ್ಥಾಪಿಸುತ್ತಿದ್ದೇನೆ. ತಮಿಳುನಾಡಿನ ಎಲ್ಲ 234 ಕ್ಷೇತ್ರಗಳಲ್ಲಿಯೂ ಚುನಾವಣೆ ಎದುರಿಸುತ್ತೇವೆ. ಲೋಕಸಭೆ ಚುನಾವಣಾ ಅಖಾಡಕ್ಕೂ ಇಳಿಯುತ್ತೇನೆ,' ಎಂದು ಘೋಷಿಸಿದ್ದಾರೆ.
ಸಹೋದರ ರಜನಿ ಅವರು ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಪ್ರವೇಶವನ್ನು ಅಭಿನಂದಿಸುವುದಾಗಿ ಕಮಲ್ ಟ್ವೀಟ್ ಮಾಡಿದ್ದಾರೆ.
ಕಮಲ್ ಹಾಸನ್ ಅವರು ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ನವೆಂಬರ್ನಲ್ಲೇ ಪ್ರಕಟಿಸಿದ್ದು, ಜನವರಿಯಲ್ಲಿ ಪಕ್ಷ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದರು.
'ಹಣ ಮತ್ತು ಹೆಸರಿಗಾಗಿ ರಾಜಕೀಯಕ್ಕೆ ಬರುತ್ತಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಮಯ ಬಂದಿದೆ. ತಮಿಳಿಗರಿಗಾಗಿ ಹೋರಾಟ ಮುಂದುವರಿಸುತ್ತೇನೆ' ಎಂದು ರಜನಿಕಾಂತ್ ಹೇಳಿದ್ದಾರೆ.
ರಜನಿಕಾಂತ್ ಅವರು ಚೆನ್ನೈನ ರಾಘವೇಂದ್ರ ಹಾಲ್ನಲ್ಲಿ ಅಭಿಮಾನಿಗಳ ಜತೆ ಸಂವಾದ ನಡೆಸಿ, 'ನಾನು ಸ್ವಂತ ಪಕ್ಷ ಸ್ಥಾಪಿಸುತ್ತಿದ್ದೇನೆ. ತಮಿಳುನಾಡಿನ ಎಲ್ಲ 234 ಕ್ಷೇತ್ರಗಳಲ್ಲಿಯೂ ಚುನಾವಣೆ ಎದುರಿಸುತ್ತೇವೆ. ಲೋಕಸಭೆ ಚುನಾವಣಾ ಅಖಾಡಕ್ಕೂ ಇಳಿಯುತ್ತೇನೆ,' ಎಂದು ಘೋಷಿಸಿದ್ದಾರೆ.
ಸಹೋದರ ರಜನಿ ಅವರು ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಪ್ರವೇಶವನ್ನು ಅಭಿನಂದಿಸುವುದಾಗಿ ಕಮಲ್ ಟ್ವೀಟ್ ಮಾಡಿದ್ದಾರೆ.
ಕಮಲ್ ಹಾಸನ್ ಅವರು ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ನವೆಂಬರ್ನಲ್ಲೇ ಪ್ರಕಟಿಸಿದ್ದು, ಜನವರಿಯಲ್ಲಿ ಪಕ್ಷ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದರು.
'ಹಣ ಮತ್ತು ಹೆಸರಿಗಾಗಿ ರಾಜಕೀಯಕ್ಕೆ ಬರುತ್ತಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಮಯ ಬಂದಿದೆ. ತಮಿಳಿಗರಿಗಾಗಿ ಹೋರಾಟ ಮುಂದುವರಿಸುತ್ತೇನೆ' ಎಂದು ರಜನಿಕಾಂತ್ ಹೇಳಿದ್ದಾರೆ.