ಆ್ಯಪ್ನಗರ

ರಾಹುಲ್‌ ನಾಟಕಕಾರ ಬಾಲಿವುಡ್‌ಗೆ ಹೋಗಬಹುದು: ರಾಜನಾಥ್ ಸಿಂಗ್

ರಾಹುಲ್ ಗಾಂಧಿಗೆ ರಾಜಕೀಯವಾಗಿ ದ್ವೇಷ ಹೊರತುಪಡಿಸಿದರೆ, ಸೂಕ್ತ ದಾಖಲೆ ಇಟ್ಟುಕೊಂಡು ಆರೋಪ ಮಾಡಲು ಬರುವುದಿಲ್ಲ. ಅವರ ಆರೋಪಗಳಿಂದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹಾನಿಯಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Vijaya Karnataka Web 20 Jul 2018, 5:11 pm
ಹೊಸದಿಲ್ಲಿ: ರಾಹುಲ್ ಗಾಂಧಿಗೆ ರಾಜಕೀಯವಾಗಿ ದ್ವೇಷ ಹೊರತುಪಡಿಸಿದರೆ, ಸೂಕ್ತ ದಾಖಲೆ ಇಟ್ಟುಕೊಂಡು ಆರೋಪ ಮಾಡಲು ಬರುವುದಿಲ್ಲ. ಅವರ ಆರೋಪಗಳಿಂದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹಾನಿಯಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Vijaya Karnataka Web Rajnath Singh


ಸಂಸತ್‌ನಲ್ಲಿ ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಂದರ್ಭ ರಾಹುಲ್ ಮಾಡಿದ ಟೀಕಾಪ್ರಹಾರಕ್ಕೆ ಪ್ರತ್ಯುತ್ತರ ನೀಡಿದ ರಾಜನಾಥ್ ಸಿಂಗ್, ಸಂಸತ್‌ನಲ್ಲಿ ರಾಹುಲ್ ನಾಟಕ ಮಾಡುತ್ತಾರೆ. ಪ್ರಧಾನಿ ಮೋದಿಯನ್ನು ಆಲಂಗಿಸುತ್ತಾರೆ. ಮುಂದೆ ಅವರು ಬಾಲಿವುಡ್ ಪ್ರವೇಶಿಸುವ ಸಾಧ್ಯತೆಯಿದೆ. ರಾಹುಲ್ ವರ್ತನೆ ತೀರಾ ಮಕ್ಕಳಂತೆ ಇದೆ. ರಾಹುಲ್‌ಗೆ ವಯಸ್ಸಾಗಿದೆ, ಆದರೆ ಬೌದ್ಧಿಕ ಬೆಳವಣಿಗೆಯಾಗಿಲ್ಲ. ಅಂತಹ ವ್ಯಕ್ತಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಹೊಂದಿರುವುದು ದುರಾದೃಷ್ಟ ಎಂದಿದ್ದಾರೆ.

ರಾಷ್ಟ್ರೀಯತೆಯ ಬಗ್ಗೆ ನೀವು ಹೇಳುತ್ತಿದ್ದೀರಿ. ಆದರೆ ಎಲ್ಲರೂ ಭಾರತೀಯರೇ ಎನ್ನುವವರು ಮಾತ್ರ ನಿಜವಾದ ರಾಷ್ಟ್ರೀಯವಾದಿಗಳು, ಒಡೆದು ಆಳುವವರು ರಾಷ್ಟ್ರವಿರೋಧಿಗಳು ಎಂದು ರಾಹುಲ್‌ರನ್ನು ಟೀಕಿಸಿದ ರಾಜನಾಥ್ ಸಿಂಗ್, ಬಿಜೆಪಿ ಸರಕಾರ ತನ್ನ ಅಧಿಕಾರಾವಧಿಯಲ್ಲಿ ಏನು ಅಭಿವೃದ್ಧಿ ಕೈಗೊಂಡಿದೆ ಎನ್ನುವುದನ್ನು ಪಟ್ಟಿ ಮಾಡಿ ಸಂಸತ್‌ನಲ್ಲಿ ತಿಳಿಸಿದರು. ಇದರ ಜತೆಗೆ ರಾಹುಲ್ ಭಾಷಣದ ಬೆನ್ನಲ್ಲೇ, ಸಂಸತ್ತು ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ