ಆ್ಯಪ್ನಗರ

ಬಿಎಸ್‌ಎಫ್‌ ಯೋಧರೊಂದಿಗೆ ರಾಜನಾಥ್‌ ದಸರಾ ಆಚರಣೆ

ರಾಜಸ್ಥಾನದ ಬಿಕನೇರ್‌ನಲ್ಲಿರುವವ ಬಿಎಸ್‌ಎಫ್‌ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಶುಕ್ರವಾರ ಆಯುಧ ಪೂಜೆ ನೆರವೇರಿಸಿದರು.

Vijaya Karnataka 19 Oct 2018, 10:09 pm
ಬಿಕನೇರ್‌: ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರೊಂದಿಗೆ ಶುಕ್ರವಾರ ದಸರಾ ಆಚರಿಸಿದರು. ಇದೇ ವೇಳೆ ಅವರು 'ಆಯುಧ ಪೂಜೆ' ಸಹ ನೆರವೇರಿಸಿದರು.
Vijaya Karnataka Web rajnath-singh-dasara


ಸೇನಾ ನೆಲೆಯಲ್ಲಿ ಕೇಂದ್ರ ಹಿರಿಯ ಸಚಿವರೊಬ್ಬರು ಆಯುಧ ಪೂಜೆ ನೆರವೇರಿಸಿದ್ದು ಇದೇ ಮೊದಲು. ರಾಜಸ್ಥಾನದ ಬಿಕನೇರ್‌ನಲ್ಲಿರುವ ಬಿಎಸ್‌ಎಫ್‌ ಕಚೇರಿಗೆ ಗುರುವಾರ ಸಂಜೆಯೇ ತೆರಳಿದ ರಾಜನಾಥ್‌ ಸಿಂಗ್‌ ಅವರು ಬಿಎಸ್‌ಎಫ್‌ ಸಿಬ್ಬಂದಿಯ ಕುಟುಂಬದವರೊಂದಿಗೆ ಸಂವಾದ ನಡೆಸಿದರು. ಯೋಧರೊಂದಿಗೆ ಹಬ್ಬದೂಟ ಸವಿದರು.

ಶುಕ್ರವಾರ ಗಡಿ ಪರಿಸ್ಥಿತಿಯನ್ನು ಅವಲೋಕಿಸಿ, ವಿವಿಧ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲಿಸಿದರು. ಕಳೆದ ವರ್ಷ ಚೀನಾ-ಭಾರತ ಗಡಿಯ ಉತ್ತರಾಖಂಡದ ಜೋಶಿಮಠದಲ್ಲಿ ಗೃಹ ಸಚಿವರು ದಸರಾ ಆಚರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ