ಆ್ಯಪ್ನಗರ

3 ವರ್ಷದಲ್ಲಿ ನಕ್ಸಲಿಸಂ ಮಾಯ: ರಾಜನಾಥ್ ಸಿಂಗ್

ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳಿಕ ಅವರ ಪ್ರಾಬಲ್ಯ ಕುಂಠಿತಗೊಂಡಿದ್ದು, ಮುಂದಿನ ಮೂರು ವರ್ಷದೊಳಗಾಗಿ ದೇಶದಿಂದ ನಕ್ಸಲರನ್ನು ಸಂಪೂರ್ಣ ತೊಡೆದುಹಾಕಲಾಗುತ್ತದೆ ಎಂದು ಸಚಿವ ಸಿಂಗ್ ತಿಳಿಸಿದ್ದಾರೆ.

Vijaya Karnataka Web 7 Oct 2018, 4:04 pm
ಲಕ್ನೋ: ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿರುವ ನಕ್ಸಲ್‌ ವಾದವನ್ನು ಮೂರು ವರ್ಷದಲ್ಲಿ ಸಂಪೂರ್ಣವಾಗಿ ತೊಲಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Vijaya Karnataka Web New Delhi: Home Minister Rajnath Singh speaks during Defence & Homeland Securit...


ಉತ್ತರ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ 26ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲಸಮಯದ ಹಿಂದೆ ನಕ್ಸಲ್ ಪೀಡಿತ ಜಿಲ್ಲೆಗಳಸಂಖ್ಯೆ 126 ಇತ್ತು. ಆದರೆ ಈಗ ಅದು 10-12ಕ್ಕೆ ಇಳಿಕೆಯಾಗಿದೆ.

ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳಿಕ ಅವರ ಪ್ರಾಬಲ್ಯ ಕುಂಠಿತಗೊಂಡಿದ್ದು, ಮುಂದಿನ ಮೂರು ವರ್ಷದೊಳಗಾಗಿ ದೇಶದಿಂದ ನಕ್ಸಲರನ್ನು ಸಂಪೂರ್ಣ ತೊಡೆದುಹಾಕಲಾಗುತ್ತದೆ ಎಂದಿದ್ದಾರೆ.

ಪ್ರಸಕ್ತ ವರ್ಷದಲ್ಲಿ 131 ಮಾವೋವಾದಿಗಳು ಮತ್ತು ಕೆಂಪು ಉಗ್ರರನ್ನು ಸೇನೆ ಹತ್ಯೆಗೈದಿದೆ. 1,278 ಮಂದಿಯನ್ನು ಭದ್ರತಾ ಪಡೆಗಳು ಬಂಧಿಸಿದ್ದು, 58 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಅವರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಸಚಿವ ಸಿಂಗ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ