ಆ್ಯಪ್ನಗರ

ಗಡಿ ಜನರ ವಲಸೆ ಸಲ್ಲ: ರಾಜನಾಥ್‌ ಸಿಂಗ್‌

ಭಾರತ-ಚೀನಾ ಗಡಿಯಲ್ಲಿ ವಾಸಿಸುತ್ತಿರುವ ಜನ ಯಾವುದೇ ಕಾರಣಕ್ಕೂ ವಲಸೆ ಹೋಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಗೃಹಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

TNN 30 Sep 2017, 11:25 pm
ಜೋಶಿಮಠ (ಉತ್ತರಾಖಂಡ): ಭಾರತ-ಚೀನಾ ಗಡಿಯಲ್ಲಿ ವಾಸಿಸುತ್ತಿರುವ ಜನ ಯಾವುದೇ ಕಾರಣಕ್ಕೂ ವಲಸೆ ಹೋಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಗೃಹಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಗಡಿ ಜನರು ವಲಸೆ ಹೋಗಿದ್ದೇ ಆದಲ್ಲಿ ಅದರಿಂದ ಭಾರತದ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಆದ್ದರಿಂದ ಅವರೆಂದೂ ವಲಸೆ ಹೋಗದಂತೆ ನೋಡಿಕೊಳ್ಳಿ ಎಂದು ಪ್ರಮುಖ ಕಾವಲು ಪಡೆ ಐಟಿಬಿಪಿ(ಇಂಡೊ-ಟಿಬೆಟನ್‌ ಬಾರ್ಡರ್‌ ಪೊಲೀಸ್‌)ಗೆ ಸಿಂಗ್‌ ನಿರ್ದೇಶನ ನೀಡಿದ್ದಾರೆ.
Vijaya Karnataka Web rajnath singh says people living at india china border are strategic assets urges them not to migrate
ಗಡಿ ಜನರ ವಲಸೆ ಸಲ್ಲ: ರಾಜನಾಥ್‌ ಸಿಂಗ್‌


ಶನಿವಾರ ಇಲ್ಲಿನ 'ಫಸ್ಟ್‌ ಬೆಟಾಲಿಯನ್‌ ಕ್ಯಾಂಪ್‌'ನಲ್ಲಿ ಐಟಿಬಿಪಿ ಪಡೆಗಳು ಹಾಗೂ ಸ್ಥಳೀಯರನ್ನುದ್ದೇಶಿಸಿ ರಾಜನಾಥ್‌ ಸಿಂಗ್‌ ಮಾತನಾಡುತ್ತಿದ್ದರು. ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರ ಮೇಲೆ ಸರಕಾರಕ್ಕೆ 'ಪೂರ್ಣ ನಂಬಿಕೆ ಹಾಗೂ ವಿಶ್ವಾಸ' ಇರುವುದರಿಂದ ಗಡಿ ಜನರಿಗೆ ತುಂಬಾನೇ ಮಹತ್ವ ನೀಡಬೇಕಿದೆ ಎಂದು ಸಿಂಗ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ