ಆ್ಯಪ್ನಗರ

ಕೇಂದ್ರ ಸರಕಾರದ ಮೌನದ ಹಿಂದೆ ದೊಡ್ಡ ಪಿತೂರಿ!

ಸರಕಾರ ಏನೇ ಕಠಿಣ ಕ್ರಮ ಕೈಗೊಂಡರೂ ರೈತರು ಹೆದರುವುದಿಲ್ಲ. ಕಾಯಿದೆಗಳ ರದ್ದು ಬೇಡಿಕೆ ಈಡೇರಿದರೆ ಮಾತ್ರ ಪ್ರತಿಭಟನಾ ಸ್ಥಳ ತೆರವುಗೊಳಿಸಲು ಸಾಧ್ಯ. ಏನೇ ಪರಿಸ್ಥಿತಿ ಎದುರಾ-ದರೂ ಎದುರಿಸಲು ಸಿದ್ಧರಿದ್ದೇವೆ

Vijaya Karnataka Web 1 Mar 2021, 11:44 pm
ಲಖನೌ: ಕೃಷಿ ಕಾಯಿದೆಗಳನ್ನು ವಿರೋಧಿಸಿ ಮೂರು ತಿಂಗಳಿಂದ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿರುವ ರೈತರ ವಿರುದ್ಧ ಕೇಂದ್ರ ಸರಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಕಿಸಾನ್‌ ಯುನಿಯನ್ ‌(ಬಿಕೆಯು) ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.
Vijaya Karnataka Web ರೈತರ ಪ್ರತಿಭಟನೆ
ರೈತರ ಪ್ರತಿಭಟನೆ


ವಿವಿಧ ರಾಜ್ಯಗಳನ್ನು ಸುತ್ತಿ ಪ್ರತಿಭಟನೆಗೆ ರೈತರನ್ನು ಸಂಘಟಿಸುತ್ತಿರುವ ಟಿಕಾಯತ್‌, ಸೋಮವಾರ ಉತ್ತರಾಖಂಡದ ಉಧಮ್‌ಸಿಂಗ್‌ ನಗರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

''ಕೇಂದ್ರ ಸರಕಾರ ಈಗ ಮಾತುಕತೆಯ ಪ್ರಸ್ತಾಪ ಮಾಡುತ್ತಿಲ್ಲ. ಕಳೆದ 15-20 ದಿನಗಳಿಂದ ಮೌನಕ್ಕೆ ಶರಣಾಗಿದೆ. ಸರಕಾರ ಈ ರೀತಿ ಮೌನ ವಹಿಸಿದೆ ಎಂದರೆ ರೈತರ ವಿರುದ್ಧ ಏನೋ ಕಠಿಣ ಕ್ರಮಕ್ಕೆ ತಯಾರಿ ನಡೆಸಿದೆ ಎಂದೇ ಅರ್ಥ,'' ಎಂದರು.

''ಸರಕಾರ ಏನೇ ಕಠಿಣ ಕ್ರಮ ಕೈಗೊಂಡರೂ ರೈತರು ಹೆದರುವುದಿಲ್ಲ. ಕಾಯಿದೆಗಳ ರದ್ದು ಬೇಡಿಕೆ ಈಡೇರಿದರೆ ಮಾತ್ರ ಪ್ರತಿಭಟನಾ ಸ್ಥಳ ತೆರವುಗೊಳಿಸಲು ಸಾಧ್ಯ. ಏನೇ ಪರಿಸ್ಥಿತಿ ಎದುರಾ-ದರೂ ಎದುರಿಸಲು ಸಿದ್ಧರಿದ್ದೇವೆ'' ಎಂದು ರಮೇಶ್‌ ಟಿಕಾಯತ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ