ಆ್ಯಪ್ನಗರ

ಅಂತಿಮ ಘಟ್ಟದಲ್ಲಿ ಅಯೋಧ್ಯೆ ತೀರ್ಪು, ಡಿ.10ರವರೆಗೆ ಸೆಕ್ಷನ್ 144 ಜಾರಿ!

ರಾಮ ಜನ್ಮಭೂಮಿ ವಿವಾದಿತ 2.77 ಎಕರೆ ಜಾಗ ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಡಿ.10 ವರೆಗೆ ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಕುತೂಹಲ ಮನೆ ಮಾಡಿದೆ.

Vijaya Karnataka Web 14 Oct 2019, 2:53 pm
ಹೊಸ ದೆಹಲಿ: ರಾಜಕೀಯವಾಗಿ ಸೂಕ್ಷ್ಮವಾಗಿರುವ ದಶಕಗಳ ಹಳೆಯ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅಂತಿಮ ಘಟ್ಟಕ್ಕೆ ತಲುಪಲಿದೆ. ಅಂತಿಮ ವಿಚಾರಣೆ ಮುಗಿಸಲು ಸುಪ್ರೀಂ ಕೋರ್ಟ್‌ ವಿಧಿಸಿಕೊಂಡಿರುವ ಆಕ್ಟೋಬರ್‌ 17ರ ಗಡುವು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಕುತೂಹಲ ಮನೆ ಮಾಡಿದೆ.
Vijaya Karnataka Web babairi


ರಾಮ ಮಂದಿರ ನಿರ್ಮಾಣಕ್ಕೆ ಜಾಗದ ಜತೆಗೆ ಚಿನ್ನದ ಇಟ್ಟಿಗೆ ನೀಡುತ್ತೇನೆ: ಮೊಘಲ್‌ ವಂಶಸ್ಥ

ಸಂಧಾನ ವಿಫಲವಾದ ಬಳಿಕ ಆಗಸ್ಟ್‌ 6ರಿಂದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ, ಪ್ರಕರಣವನ್ನು ನಿತ್ಯ ವಿಚಾರಣೆ ನಡೆಸುತ್ತಿದೆ. ಸೋಮವಾರ 38ನೇ ದಿನದ ವಿಚಾರಣೆ ನಡೆಯಲಿದ್ದು, ಗುರುವಾರ ಅದು ಅಂತ್ಯಗೊಳ್ಳುವ ನಿರೀಕ್ಷೆಯಿದೆ.

ಬಾಬರ್‌ ಅಯೋಧ್ಯೆಗೆ ಭೇಟಿ ನೀಡಿರಲೇ ಇಲ್ಲ!

ವಿವಾದಿತ 2.77 ಎಕರೆ ಜಾಗವನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಮತ್ತು ರಾಮ್‌ ಲಲ್ಲಾ ನಡುವೆ ಸಮಾನವಾಗಿ ಹಂಚಬೇಕೆಂದು 2010ರಲ್ಲಿಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 14 ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.

ತಾಕತ್ತಿದ್ದರೆ ಬಾಬರಿ ಮಸೀದಿ ಕಟ್ಟಿ : ಕಲ್ಲಡ್ಕ ಪ್ರಭಾಕರ್ ಭಟ್ ಚಾಲೆಂಜ್

ಈ ಮಧ್ಯೆ, ಕಕ್ಷಿದಾರರಲ್ಲಿಒಂದಾಗಿರುವ ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿಯು ಸಂಧಾನ ಪ್ರಸ್ತಾಪವನ್ನು ತಿರಸ್ಕರಿಸಿ, ಕೋರ್ಟ್‌ ತೀರ್ಪಿಗೆ ಬದ್ಧವಾಗಿರಲು ನಿರ್ಣಯ ಕೈಗೊಂಡಿದೆ. ವಿವಾದಿತ ಜಾಗವನ್ನು ಹಿಂದೂಗಳಿಗೆ ಒಪ್ಪಿಸುವಂತೆ ಮುಸ್ಲಿಂ ಸಮುದಾಯದ ಹಲವು ಬುದ್ಧಿಜೀವಿಗಳು ಮಾಡಿದ ಮನವಿಯನ್ನು ಮಂಡಳಿ ಶನಿವಾರ ನಡೆದ ಸಭೆಯಲ್ಲಿತಿರಸ್ಕರಿಸಿದೆ.

ಅಯೋಧ್ಯೆಯಲ್ಲಿ ಸಿಕ್ಕ ಗೋಡೆ, ಕಂಬಗಳು ಮಂದಿರದ ಅವಶೇಷ: 'ರಾಮನ ಪರ ವಕೀಲ'ರ ವಾದ

ಇನ್ನೊಂದೆಡೆ ರಾಮ ಜನ್ಮ ಭೂಮಿ ಬಗ್ಗೆ ಅಂತಿಮ ತೀರ್ಪು ಬರಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಡಿ.10 ವರೆಗೆ ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ.

ಅಕ್ಟೋಬರ್ 17ರೊಳಗೆ ಅಯೋಧ್ಯೆ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ನಿರ್ಧಾರ

ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಜು ಕುಮಾರ್ ಝಾ ಈ ಬಗ್ಗೆ ತಿಳಿದಿದ್ದು, ಜನರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡ್ರೋಣ್ ಬಳಕೆ, ಚಿತ್ರೀಕರಣ ಮಾಡುವುದು, ಪಟಾಕಿ ಮಾರಾಟ, ಖರೀದಿ, ಮಾನವ ರಹಿತ ವೈಮಾನಿಕ ವಾಹನಗಳನ್ನು ದಂಡಾಧಿಕಾರಿ ಅನುಮತಿ ಇಲ್ಲದೇ ಬಳಸುವುದಕ್ಕೆ ಕೂಡ ನಿಷೇಧ ಹೇರಲಾಗಿದೆ. ಜೊತೆಗೆ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಲು ಕೂಡ ನಿರ್ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ