ಆ್ಯಪ್ನಗರ

ರಾಮಮಂದಿರ ಟ್ರಸ್ಟ್‌ ಮೊದಲ ಸಭೆ ಪೂರ್ಣ; ನೃತ್ಯ ಗೋಪಾಲ್‌ದಾಸ್‌ ಅಧ್ಯಕ್ಷ, ಮೋದಿ ಮಾಜಿ ಸಲಹೆಗಾರ ನಿರ್ಮಾಣ ಸಮಿತಿ ಮುಖ್ಯಸ್ಥ, 15 ದಿನದಲ್ಲಿ ನಿರ್ಮಾಣ ದಿನಾಂಕ ಪ್ರಕಟ

ಮಂದಿರ ನಿರ್ಮಾಣ ಉಸ್ತುವಾರಿಗಾಗಿ ‘ನಿರ್ಮಾಣ ಸಮಿತಿ’ಯನ್ನೂ ರಚಿಸಲಾಗಿದ್ದು ನಿವೃತ್ತ ಐಎಎಸ್‌ ಅಧಿಕಾರಿ, ಪ್ರಧಾನಿ ಮೋದಿ ಅವರ ಮಾಜಿ ಸಲಹೆಗಾರ ನೃಪೇಂದ್ರ ಮಿಶ್ರಾ ಅವರಿಗೆ ಈ ಸಮಿತಿಯ ಮುಖ್ಯಸ್ಥರ ಹೊಣೆಗಾರಿಕೆ ನೀಡಲಾಗಿದೆ.

Vijaya Karnataka Web 19 Feb 2020, 9:16 pm
ಹೊಸದಿಲ್ಲಿ: ಅಯೋಧ್ಯೆಯಲ್ಲಿರಾಮ ಮಂದಿರ ನಿರ್ಮಾಣ ಉದ್ದೇಶಕ್ಕಾಗಿ ಕೇಂದ್ರ ಸರಕಾರ ರಚಿಸಿರುವ ‘ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌’ ಅಧ್ಯಕ್ಷರನ್ನಾಗಿ ರಾಮ ಜನ್ಮಭೂಮಿ ನ್ಯಾಸ್‌ ಮುಖ್ಯಸ್ಥ ಮಹಾಂತ್‌ ನೃತ್ಯ ಗೋಪಾಲ್‌ ದಾಸ್‌ ಅವರನ್ನು ಆಯ್ಕೆ ಮಾಡಲಾಗಿದೆ.
Vijaya Karnataka Web ಟ್ರಸ್ಟ್‌ ಸಭೆ
ಟ್ರಸ್ಟ್‌ ಸಭೆ


ಹೊಸದಿಲ್ಲಿಯಲ್ಲಿಬುಧವಾರ ನಡೆದ ಚೊಚ್ಚಲ ಸಭೆಯಲ್ಲಿಚಂಪತ್‌ ರಾಯ್‌ ಅವರನ್ನು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿಯನ್ನಾಗಿ ಹಾಗೂ ಗೋವಿಂದ್‌ ಗಿರಿ ಅವರನ್ನು ಖಜಾಂಚಿಯಾಗಿ ನೇಮಿಸಲಾಗಿದೆ.

ನಿರ್ಮಾಣ ಸಮಿತಿ ರಚನೆ

ಮಂದಿರ ನಿರ್ಮಾಣ ಉಸ್ತುವಾರಿಗಾಗಿ ‘ನಿರ್ಮಾಣ ಸಮಿತಿ’ಯನ್ನೂ ರಚಿಸಲಾಗಿದ್ದು ನಿವೃತ್ತ ಐಎಎಸ್‌ ಅಧಿಕಾರಿ, ಪ್ರಧಾನಿ ಮೋದಿ ಅವರ ಮಾಜಿ ಸಲಹೆಗಾರ ನೃಪೇಂದ್ರ ಮಿಶ್ರಾ ಅವರಿಗೆ ಈ ಸಮಿತಿಯ ಮುಖ್ಯಸ್ಥರ ಹೊಣೆಗಾರಿಕೆ ನೀಡಲಾಗಿದೆ.

ಅಯೋಧ್ಯೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿದೇಣಿಗೆ ಸಂಗ್ರಹಕ್ಕೆ ಖಾತೆ ತೆರೆಯಲು ನಿರ್ಧರಿಸಲಾಗಿದೆ. 15 ದಿನಗಳ ನಂತರ ನಡೆಯಲಿರುವ ಮತ್ತೊಂದು ಸಭೆಯಲ್ಲಿ ಮಂದಿರ ನಿರ್ಮಾಣ ದಿನಾಂಕ ಪ್ರಕಟವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ