ಆ್ಯಪ್ನಗರ

ಮಾರ್ಚ್ 10ಕ್ಕೆ ರಾಮಾಯಣ ಎಕ್ಸ್‌ಪ್ರೆಸ್‌ ಹಳಿಗೆ; ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ

ರಾಮಾಯಣದಲ್ಲಿ ಪ್ರಸ್ತಾಪವಾಗಿರುವ ಶ್ರೀರಾಮನಿಗೆ ಸಂಬಂಧಿಸಿರುವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಹೊಸ 'ರಾಮಾಯಣ ಎಕ್ಸ್‌ಪ್ರೆಸ್‌' ರೈಲು ಸೇವೆ ಮಾರ್ಚ್ 10ಕ್ಕೆ ಆರಂಭವಾಗಲಿದೆ

Vijaya Karnataka Web 15 Feb 2020, 10:05 am
ಹೊಸದಿಲ್ಲಿ: ರಾಮಾಯಣದಲ್ಲಿ ಪ್ರಸ್ತಾಪವಾಗಿರುವ ಶ್ರೀರಾಮನಿಗೆ ಸಂಬಂಧಿಸಿರುವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಹೊಸ 'ರಾಮಾಯಣ ಎಕ್ಸ್‌ಪ್ರೆಸ್‌' ರೈಲು ಸೇವೆ ಮಾರ್ಚ್ 10ಕ್ಕೆ ಆರಂಭವಾಗುವ ಸಾಧ್ಯತೆಯಿದೆ.
Vijaya Karnataka Web ರೈಲು
ರೈಲು


ರಾಮಾಯಣದಿಂದ ಪ್ರೇರಣೆ ಪಡೆದು ಸಿದ್ಧಪಡಿಸಿದ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ, ಸ್ಪೀಕರ್‌ನಲ್ಲಿ ಮೊಳಗುವ ಭಜನೆಗಳು, ಭಕ್ತಿಯ ವಾತಾವರಣವನ್ನು ಈ ರೈಲು ಒಳಗೊಂಡಿರಲಿದ್ದು, ಅಕ್ಷರಶಃ ದೇಗುಲದಲ್ಲಿರುವ ಭಾವನೆಯನ್ನು ಪ್ರಯಾಣಿಕರಿಗೆ ನೀಡಲಿದೆ. ಇದೊಂದು ಚಲಿಸುವ ದೇಗುಲದಂತೆ ಭಾಸವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದ ವಿವಿಧ ಸ್ಥಳಗಳಿಂದ ಈ ರೈಲು ಪ್ರಯಾಣ ಆರಂಭಿಸಲಿದೆ. ಹೀಗಾಗಿ ದೇಶದ ಎಲ್ಲಾಭಾಗಗಳ ಜನರೂ ಇದರ ಪ್ರಯೋಜನ ಪಡೆಯಬಹುದು. ಸದ್ಯದಲ್ಲೇ ಪ್ರಯಾಣ ಪ್ಯಾಕೇಜ್‌ಗಳು ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕಳೆದ ನವೆಂಬರ್‌ನಲ್ಲೇ ರೈಲ್ವೆ ಇಲಾಖೆಯು ರಾಮನ ಹೆಸರಿನಲ್ಲಿ ವಿಶೇಷ ರೈಲು ಸೇವೆಯನ್ನು ಆರಂಭಿಸಿತ್ತು. 800 ಪ್ರಯಾಣಿಕರನ್ನು ಕೊಂಡೊಯ್ಯಬಲ್ಲ ಈ ರೈಲು ರಾಮನಿಗೆ ಸಂಬಂಧಿಸಿದ ನಂದಿಗ್ರಾಮ, ಜನಕ್‌ಪುರ, ವಾರಾಣಸಿ, ಪ್ರಯಾಗ, ಚಿತ್ರಕೂಟ, ನಾಸಿಕ್‌, ಹಂಪಿ, ಅಯೋಧ್ಯೆ, ರಾಮೇಶ್ವರಂಗೆ ಸಂಪರ್ಕ ಕಲ್ಪಿಸುತ್ತಿತ್ತು. ಆದರೆ, ಹೊಸ ರಾಮಾಯಣ ಎಕ್ಸ್‌ಪ್ರೆಸ್‌ ಸಂಪರ್ಕಿಸಲಿರುವ ಸ್ಥಳಗಳ ಬಗ್ಗೆ ಇಲಾಖೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ