ಆ್ಯಪ್ನಗರ

ಬುಂದೇಲ್‌ಖಂಡದಿಂದ ವೈದ್ಯಕೀಯ ಮೂಲಿಕೆ ಖರೀದಿ: ರಾಮ್‌ದೇವ್‌

ಉತ್ತರ ಪ್ರದೇಶದ ಪ್ರವಾಹಪೀಡಿತ ಬುಂದೇಲ್‌ಖಂಡದ ರೈತರಿಂದ ಔಷಧ, ಸುಗಂಧದ್ರವ್ಯ ಗಿಡ ಮೂಲಿಕೆ ಮತ್ತು ಸಾವಯವ ಉತ್ಪನ್ನಗಳನ್ನು ಖರೀದಿಸುವುದಾಗಿ ಯೋಗ ಗುರು ರಾಮ್‌ದೇವ್ ಭರವಸೆ ನೀಡಿದ್ದಾರೆ.

ಏಜೆನ್ಸೀಸ್ 25 May 2016, 6:06 pm
ಲಖನೌ: ಉತ್ತರ ಪ್ರದೇಶದ ಪ್ರವಾಹಪೀಡಿತ ಬುಂದೇಲ್‌ಖಂಡದ ರೈತರಿಂದ ಔಷಧ, ಸುಗಂಧದ್ರವ್ಯ ಗಿಡ ಮೂಲಿಕೆ ಮತ್ತು ಸಾವಯವ ಉತ್ಪನ್ನಗಳನ್ನು ಖರೀದಿಸುವುದಾಗಿ ಯೋಗ ಗುರು ರಾಮ್‌ದೇವ್ ಭರವಸೆ ನೀಡಿದ್ದಾರೆ.
Vijaya Karnataka Web ramdev to buy medicinal plants from up
ಬುಂದೇಲ್‌ಖಂಡದಿಂದ ವೈದ್ಯಕೀಯ ಮೂಲಿಕೆ ಖರೀದಿ: ರಾಮ್‌ದೇವ್‌


ರಾಮ್‌ದೇವ್ ವರು ಇತ್ತೀಚೆಗೆ ಲಖನೌಗೆ ಭೇಟಿ ನೀಡಿದ್ದ ವೇಳೆ ಈ ಕುರಿತಂತೆ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಹಿರಿಯ ಸಚಿವ ಶಿವಪಾಲ್ ಯಾದವ್, ಮುಖ್ಯ ಕಾರ್ಯದರ್ಶಿ ಅಲೋಕ್ ರಂಜನ್ ಅವರ ಜತೆ ಚರ್ಚೆ ನಡೆಸಿದ್ದರು.

ಸಂಕಷ್ಟಕ್ಕೆ ಈಡಾಗಿರುವ ರೈತರಿಗೆ ಈ ಮೂಲಕ ನೆರವು ನೀಡಲು ರಾಮ್‌ದೇವ್ ಮುಂದಾಗಿದ್ದು, ಇಲ್ಲಿ ಆಹಾರ ಸಂಸ್ಕರಣೆ ಘಟಕ ಆರಂಭಿಸಿಲು ಆಸಕ್ತಿ ವಹಿಸಿದ್ದಾರೆ.

ಔಷಧಿ ಮತ್ತು ಸುಗಂಧದ್ರವ್ಯ ಗಿಡ ಮೂಲಿಕೆಬೆಳೆದು ರೈತರ ಉತ್ಪಾದನೆ ಮತ್ತು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಕೃಷಿ ನೀತಿ ರೂಪಿಸಲು ಕರಡು ರೂಪಿಸಿದ್ದು, ಸಂಪುಟದ ಎದುರು ಮಂಡನೆಯಾಗಲಿದೆ ಎಂದು ರಾಜ್ಯ ಕೃಷಿ ಉತ್ಪಾದನಾ ಆಯುಕ್ತ ಪ್ರವಿರ್ ಕುಮಾರ್ ಹೇಳಿದ್ದಾರೆ.

ಕರಡು ನಿತಿಯಲ್ಲಿ ಹೇಳಲಾಗಿರುವ ಬಹು ಹಂತದ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಹೆಚ್ಚಿನ ಆದಾಯ ಪಡೆಯುವುದಕ್ಕೆ ಅನುಕೂಲವಾಗಲಿದೆ. ಮುಖ್ಯ ಜಮೀನಿನ ಸುತ್ತ ಪುಷ್ಪೋದ್ಯಮ, ಮೀನುಗಾರಿಕೆಗಳನ್ನು ಉತ್ತೇಜಿಸಲಾಗುತ್ತದೆ.

ಸ್ಥಳೀಯ ಭೌಗೋಳಿಕತೆಯಲ್ಲಿ ಔಷಧ ಮತ್ತು ಸುಗಂದದ್ರವ್ಯ ಮೂಲಿಕೆ ಬೆಳೆಸುವುದು ಸೂಕ್ತ ಎಂದು ಕೃಷಿ ಇಲಾಖೆ ಕೂಡ ಹೇಳಿದೆ. ಸಾಫ್ರದಾಯಿಕ ಬೆಳೆಗಳು ಇಲ್ಲಿ ಹಾನಿಗೊಂಡಾಗ ಈ ಬೆಳೆಗಳ ಮೂಲಕ ನಷ್ಟ ತುಂಬಿಕೊಳ್ಳಲು ರೈತರಿಗೆ ಅವಕಾಶವಾಗಲಿದೆ ಎಂದು ಕೃಷಿ ಆಯುಕ್ತ ಪ್ರವಿರ್‌ ಕುಮಾರ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ