ಆ್ಯಪ್ನಗರ

740 ಕೋಟಿ ರೂ. ಅವ್ಯವಹಾರ: ರಾನ್‌ಬಾಕ್ಸಿ ಮಾಜಿ ಪ್ರವರ್ತಕ ಶಿವಿಂದರ್‌ ಸಿಂಗ್‌ ಸೇರಿ ಮೂವರ ಬಂಧನ

ಶಿವಿಂದರ್‌ ಸಿಂಗ್‌ ಹಾಗೂ ಕುಟುಂಬ ಸದಸ್ಯರ ಅವ್ಯವಹಾರದಿಂದ ಕೋಟ್ಯಂತರ ರೂ. ವಂಚನೆ ನಡೆದಿದೆ ಎಂಬ ದೂರಿನ ಮೇರೆಗೆ ತನಿಖೆ ನಡೆಸಲಾಗಿದೆ. ಇದರಿಂದ ಭಾರಿ ನಷ್ಟ ಉಂಟಾಗಿದೆ.

Vijaya Karnataka Web 10 Oct 2019, 7:18 pm
ಹೊಸದಿಲ್ಲಿ: ರಾನ್‌ಬಾಕ್ಸಿ ಲ್ಯಾಬೊರೇಟರೀಸ್‌ನ ಮಾಜಿ ಪ್ರವರ್ತಕ ಹಾಗೂ ಫೋಟೀಸ್‌ ಹೆಲ್ತ್‌ಕೇರ್‌ನ ಸಹ ಸಂಸ್ಥಾಪಕ ಶಿವಿಂದರ್‌ ಸಿಂಗ್‌ ಸೇರಿದಂತೆ ಇತರೆ ಮೂವರನ್ನು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web ಶಿವಿಂದರ್‌ ಸಿಂಗ್‌
ಶಿವಿಂದರ್‌ ಸಿಂಗ್‌


740 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ ಆರೋಪದ ಮೇರೆಗೆ ಶಿವಿಂದರ್‌ ಸಿಂಗ್ ಹಾಗೂ ಇತರೆ ಮೂವರನ್ನು ಹೊಸದಿಲ್ಲಿಯ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

ಕವಿ ಅರೋರಾ, ಅನಿಲ್‌ ಸಕ್ಸೇನಾ, ರೆಲಿಗೇರ್‌ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುನಿಲ್‌ ಗೋದ್ವಾನಿ ಅವರನ್ನು ಬಂಧಿಸಲಾಗಿದೆ.

ಕುಟುಂಬದ ವ್ಯವಹಾರದಲ್ಲಿ ಭಾರಿ ಅವ್ಯವಹಾರ ನಡೆಸಿದ್ದಾರೆ ಎಂದು ಶಿವೇಂದರ್‌ ಸಿಂಗ್‌ ಅವರು ತಮ್ಮ ಹಿರಿಯ ಸಹೋದರ ಮಾಲ್ವಿಂದರ್‌ ಸಿಂಗ್‌ ಹೆಸರನ್ನು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾನ್‌ಬಾಕ್ಸಿಯ ಹಲವು ಕಚೇರಿ ಹಾಗೂ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ