ಆ್ಯಪ್ನಗರ

ಚಂದ್ರಯಾನ 2 : ಬೆಂಬಲಕ್ಕೆ ನಿಂತ ರಾಜಕೀಯ ನಾಯಕರು

ಚಂದ್ರಯಾನ 2ರ ಯಶಸ್ಸಿನ ಸಂಭ್ರಮಾಚರಣೆಗೆ ಕೆಲವೇ ಕ್ಷಣಗಳಿರುವಂತೆ ವಿಕ್ರಂ ಲ್ಯಾಂಡರ್‌ ಸಂಪರ್ಕ ಕಳೆದುಕೊಂಡು ವಿಘ್ನ ಎದುರಾಗಿದೆ. ಈ ಬೆನ್ನಲ್ಲೇ ದೇಶದ ಪ್ರಮುಖ ರಾಜಕೀಯ ನಾಯಕರು ಇಸ್ರೋ ವಿಜ್ಞಾನಿಗಳ ಬೆಂಬಲಕ್ಕೆ ನಿಂತು, ಅವರ ಶ್ರಮಕ್ಕೆ ಹೆಮ್ಮೆಪಟ್ಟಿದ್ದಾರೆ.

TIMESOFINDIA.COM 7 Sep 2019, 12:38 pm
ಹೊಸದಿಲ್ಲಿ: ವಿಕ್ರಂ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಷಿಸುವ ರೋಮಾಂಚಕ ಕ್ಷಣಗಳನ್ನು ಇನ್ನೇನು ಸಂಭ್ರಮಿಸಬೇಕು ಎನ್ನುವಷ್ಟರಲ್ಲೇ ಲ್ಯಾಂಡರ್‌ ಸಂಪರ್ಕ ಕಳೆದುಕೊಂಡಿತು. ಕಾತರದಿಂದ ಕಾದಿದ್ದ ದೇಶದ ಸಮಸ್ತ ಜನತೆಯ ಮುಖದಲ್ಲಿದ್ದ ಸಂತಸ ಕ್ಷಣದಲ್ಲೇ ಮಾಯವಾಗಿತ್ತು. ಇದರಿಂದ ಬೇಸರಗೊಂಡಿದ್ದ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮೈದಡವಿ ಸಂತೈಸಿದ್ದರು. ಈ ಬೆನ್ನಲ್ಲೇ ಚಂದ್ರಯಾನ 2 ಕುರಿತು ದೇಶದ ಅನೇಕ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಸ್ರೋ ವಿಜ್ಞಾನಿಗಳ ಬೆಂಬಲಕ್ಕೆ ನಿಂತಿದ್ದಾರೆ.
Vijaya Karnataka Web isro comments


"ನಮ್ಮ ವಿಜ್ಞಾನಿಗಳ ಕುರಿತು ಭಾರತೀಯರು ಹೆಮ್ಮೆಪಡಬೇಕು. ಅವರು ಯಾವಾಗಲೂ ದೇಶದ ಉನ್ನತಿಗಾಗಿಯೇ ಶ್ರಮಪಡುತ್ತಾರೆ. ಇಸ್ರೋ ಅಧ್ಯಕ್ಷರು ಚಂದ್ರಯಾನದ-2 ಮಿಷನ್‌ನ ಬೆಳವಣಿಗೆಗಳ ಮಾಹಿತಿ ನೀಡುತ್ತಿದ್ದಾರೆ. ವಿಜ್ಞಾನಿಗಳು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುವ ಭರವಸೆಯಲ್ಲಿಯೇ ಅವಿರತ ಶ್ರಮಪಡುತ್ತಿದ್ದಾರೆ," ಪ್ರಧಾನಿ ಮೋದಿ



"ಇಸ್ರೋದ ಚಂದ್ರುಯಾನ 2ರ ಪರಿಶ್ರಮ ಇಡೀ ದೇಶದ ಜನತೆ ಹೆಮ್ಮೆಪಡುವಂಥದ್ದು. ದೇಶಕ್ಕಾಗಿ ಶ್ರಮಪಡುತ್ತಿರುವ, ತಮ್ಮ ಕೆಲಸದಲ್ಲಿ ಬದ್ಧತೆ ಹೊಂದಿರುವ ನಮ್ಮ ವಿಜ್ಞಾನಿಗಳ ಬೆಂಬಲಕ್ಕೆ ಭಾರತವಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳಿವೆ," ಅಮಿತ್‌ ಷಾ, ಕೇಂದ್ರ ಗೃಹ ಮಂತ್ರಿ


'ಚಂದ್ರಯಾನ 2 ಮಿಷನಲ್ಲಿ ಸಾಟಿಯಿಲ್ಲದ ಶ್ರಮ ಹಾಕಿರುವ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳು. ನಿಮ್ಮ ಕರ್ತವ್ಯದ ಮೇಲಿನ ಒಲವು ಮತ್ತು ಬದ್ಧತೆ ಪ್ರತಿಯೊಬ್ಬ ಭಾರತೀಯನಿಗೆ ಪ್ರೇರಣೆಯಾಗಿಬೇಕು. ನಿಮ್ಮ ಯಾವ ಶ್ರಮವೂ ವ್ಯರ್ಥವಾಗುವುದಿಲ್ಲ. ಇದು ಮುಂದಿನ ಬಾಹ್ಯಾಕಾಶ ಸಂಶೋಧನೆಗಳಿಗೆ ಬುನಾದಿ ಇದ್ದಂತೆ', - ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ.


'ಎಂಥಹ ಅಸಾಧಾರಣ ಸಾಧನೆ!!!, ನಾವಿದ್ದೇವೆ, ಆಶಾಭಾವನೆ ಕಳೆದುಕೊಳ್ಳದೆ ಧೈರ್ಯದಿಂದಿರೋಣ. ಶೀಘ್ರದಲ್ಲೇ ಮಿಷನ್‌ನ ಕೊನೇ ಮೈಲಿಗಲ್ಲು ತಲುಪುವುದರಲ್ಲಿ ಯಾವುದೇ ಅನುಮಾನ ಬೇಡ', - ಪಿಯೂಷ್‌ ಗೋಯಲ್‌, ಕೇಂದ್ರ ರೈಲ್ವೆ ಮಂತ್ರಿ.


"ಇಸ್ರೋ,,,, ನಾವು ನಿಮ್ಮೊಂದಿಗಿದ್ದೇವೆ. ಇದುವರೆಗೂ ಯಾರೂ ಪ್ರಯತ್ನಿಸದಿರುವ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲು ಪ್ರಯತ್ನಿಸಿದ ನಿಮ್ಮ ಧೈರ್ಯಕ್ಕೆ ಹೆಮ್ಮೆಯಿದೆ. ನಿಮ್ಮ ಸಾಮರ್ಥ್ಯ ಮತ್ತು ಸಾಧನೆಗಳು ಯಾವಾಗಲೂ ದೇಶ ತಲೆಎತ್ತಿ ನಿಲ್ಲುವಂತೆ ಮಾಡಿವೆ. ಇದು ಕೇವಲ ಯಶಸ್ಸನ್ನು ಮುಂದೂಡಿದೆ ಅಷ್ಟೆ," ಯಡಿಯೂರಪ್ಪ, ಮುಖ್ಯಮಂತ್ರಿ.



ಕೇವಲ ಕೆಲವೇ ರಾಷ್ಟ್ರಗಳಿಂದ ಸಾಧ್ಯವಾಗುವಂಥಹ ಚಂದ್ರಯಾನ -2 ರ ಸಾಧನೆಗಳಿಗೆ ನಮ್ಮ ವಿಜ್ಞಾನಿಗಳ ಕುರಿತು ಹೆಮ್ಮೆ ಇದೆ. ವಿಶ್ವದ ರಾಷ್ಟ್ರಗಳ ಪೈಕಿ ನಮ್ಮನ್ನು ಮೊದಲ ಸಾಲಿಗೆ ತಂದಿರುವ ಇವರಿಗೆ ನನ್ನ ಸೆಲ್ಯೂಟ್‌. ಚಂದ್ರನ ಮೇಲೆ ಲ್ಯಾಂಡಿಂಗ್‌ ಆಗಲು ಇನ್ನು ಒಂದು ಹೆಜ್ಜೆ ಇದೆ ಅಷ್ಟೆ", ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.


ಇಸ್ರೋ ಅಧ್ಯಕ್ಷರಿಂದ ಉತ್ತಮ ಮನೋಭಿಲಾಷೆಯನ್ನು ನಿರೀಕ್ಷಿಸುತ್ತೇನೆ. ಸೋಲುಗಳು ಸಂಭವಿಸುತ್ತವೆ ಮತ್ತು ಮುಂದಿನ ಗೆಲುವಿಗೆ ಮೆಟ್ಟಿಲಾಗುತ್ತವೆ. ಇಸ್ರೋದ ಸಾಧನೆಗೆ ಇಡೀ ವಿಶ್ವವೇ ಶ್ಲಾಘಿಸಿದೆ. ಕೊರತೆಗಳು ಬಂದಾಗ ಮಗುವಂತೆ ಅಳುವುದು ಮೂರ್ಖತನದಂತೆ ಕಾಣುತ್ತಿದೆ," ಗೌರವ್‌ ಪಾಂಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ