ಆ್ಯಪ್ನಗರ

ಸಂಸತ್ತು ಬಯಸಿದರೆ, ಪಿಒಕೆ ನಮ್ಮದಾಗಲಿ: ಆದೇಶ ನೀಡಿದರೆ ದಾಳಿಗೆ ಸಿದ್ಧ ಎಂದ ಸೇನಾ ವರಿಷ್ಠ ನರಾವಣೆ

ಈ ಸಮನ್ವಯತೆ ಅಥವಾ ಸಂಯೋಜನೆ ಪ್ರಕ್ರಿಯೆಯಲ್ಲಿ ನಾವು ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಾಗಿದೆ. ಈ ವಿಷಯದಲ್ಲಿ ಯಾರನ್ನೂ ಹಿಂದೆ ಬಿಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಮನೋಜ್‌ ಮುಕುಂದ್ ನರಾವಣೆ ತಿಳಿಸಿದ್ದಾರೆ.

Vijaya Karnataka Web 11 Jan 2020, 2:27 pm
Vijaya Karnataka Web ಮನೋಜ್‌ ಮುಕುಂದ್‌ ನರಾವಣೆ
ಮನೋಜ್‌ ಮುಕುಂದ್‌ ನರಾವಣೆ
ಹೊಸದಿಲ್ಲಿ: ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ಭಾಗದಲ್ಲಿ ಪಾಕಿಸ್ತಾನ ತಂಟೆ ಮಾಡಿದರೆ ಸುಮ್ಮನೆ ಇರುವುದಿಲ್ಲ. ಪಾಕ್‌ ಆಕ್ರಮಿತ ಕಾಶ್ಮೀರ ಮೇಲೆ ದಾಳಿ ನಡೆಸಿ ಎಂದು ಸರಕಾರ ಆದೇಶಿಸಿದರೆ ಒಂದು ಕ್ಷಣವೂ ವ್ಯಯಿಸದೆ ಸನ್ನದ್ಧರಾಗುತ್ತೇವೆ ಎಂದು ಸೇನಾ ವರಿಷ್ಠ ಜನರಲ್‌ ಮನೋಜನ್‌ ಮುಕುಂದ್‌ ನರಾವಣೆ ಎಚ್ಚರಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನೋಜ್‌ ಮುಕುಂದ್‌ ನರಾವಣೆ ಮಾತನಾಡಿದರು.

ಜಮ್ಮು ಕಾಶ್ಮೀರ ಸೇರಿದಂತೆ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ನಾವು ಸಜ್ಜಾಗಿದ್ದೇವೆ. ಈ ಕುರಿತು ಸಂಸತ್ತಿನಲ್ಲಿ ನಿರ್ಣಯವಾಗಬೇಕು. ಸಂಸತ್‌ ಬಯಸಿದರೆ ಪಿಒಕೆ ಭಾರತಕ್ಕೆ ಸೇರಬೇಕು. ಇದನ್ನು ಸಾಧಿಸುತ್ತೇವೆ ಎಂದು ಹೇಳಿದರು.

ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದರೆ ಸಾಕು ಪಿಒಕೆ ಮೇಲೆ ದಾಳಿ ಮಾಡಲು ನಾವು ಒಕೆ ಎನ್ನುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮೂರು ರಕ್ಷಣಾ ಪಡೆಗಳಿಗೆ ಒಬ್ಬರೇ ಮುಖ್ಯಸ್ಥರನ್ನು ನೇಮಿಸಿದ್ದು ಬಹು ದೊಡ್ಡ ನಿರ್ಣಯವಾಗಿದೆ. ಇದು ಭಾರತೀಯ ಸೇನೆಯನ್ನು ಮತ್ತೊಂದು ಯಶಸ್ಸಿನತ್ತ ಕೊಂಡೊಯ್ಯುವ ನಿರೀಕ್ಷೆ ಎಂದು ನರಾವಣೆ ವಿಶ್ವಾಸ ವ್ಯಕ್ತಪಡಿಸಿದರು.

ಗಡಿಭಾಗದಲ್ಲಿ ಸದಾ ಯುದ್ಧ ಸನ್ನದ್ಧತೆಯಲ್ಲಿದ್ದೇವೆ. ಯಾವುದೇ ಪರಿಸ್ಥಿತ ಬಂದರೂ ಎದುರಿಸಲು ಸಜ್ಜಾಗಿರುತ್ತೇವೆ. ಇದಕ್ಕೆ ಮೂರು ಪಡೆಗಳ ನಡುವೆ ಸಮನ್ವಯ, ಸಂಯೋಜಿತ ಯೋಜನೆಯೂ ಹಾಕಿಕೊಳ್ಳಲಾಗಿದೆ ಎಂದು ಸೇನಾ ವರಿಷ್ಠ ಮನೋಜ್‌ ಮುಕುಂದ್ ನರಾವಣೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ