ಆ್ಯಪ್ನಗರ

ರಾಮ ಮಂದಿರಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ: ಉಮಾ ಭಾರತಿ

ಅಯೋಧ್ಯೆಯ ರಾಮ ಮಂದಿರ ನಂಬಿಕೆಯ ಪ್ರಶ್ನೆಯಾಗಿದ್ದು, ಇದಕ್ಕಾಗಿ ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 8 Apr 2017, 6:45 pm
ಲಖನೌ: ಅಯೋಧ್ಯೆಯ ರಾಮ ಮಂದಿರ ನಂಬಿಕೆಯ ಪ್ರಶ್ನೆಯಾಗಿದ್ದು, ಇದಕ್ಕಾಗಿ ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
Vijaya Karnataka Web ready to go to jail for ram temple in ayodhya uma bharti
ರಾಮ ಮಂದಿರಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ: ಉಮಾ ಭಾರತಿ


'ರಾಮ ಮಂದಿರ ನನ್ನ ಪಾಲಿಗೆ ನಂಬಿಕೆಯ ವಿಷಯ. ನನಗೆ ಆ ಬಗ್ಗೆ ಅಪಾರ ಹೆಮ್ಮೆಯಿದೆ... ಈ ನಂಬಿಕೆಗಾಗಿ ನಾನು ಜೈಲಿಗೆ ಹೋಗಬೇಕೆಂದು ಹೇಳುವುದಾದರೆ ನಾನು ಅದಕ್ಕೆ ಸಿದ್ಧ. ನಾನು ನೇಣಿಗೇರಬೇಕೆಂದು ನೀವು ಹೇಳುವುದಾದರೆ ನಾನು ಅದಕ್ಕೂ ಸಿದ್ಧ' ಎಂದು ಅಯೋಧ್ಯಾ ಆಂದೋಲನದಲ್ಲಿ ಭಾಗಿಯಾಗಿದ್ದ ಬಿಜೆಪಿಯ 'ಬೆಂಕಿ ಚೆಂಡು' ನುಡಿದರು. ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜತೆ ಭೇಟಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಯೋಗಿ ಜತೆ ಮಾತುಕತೆಯಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಪ್ರಸ್ತಾಪವಾಯಿತೆ ಎಂಬ ಪ್ರಶ್ನೆಗೆ, 'ನಾವು ರಾಮ ಮಂದಿರದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ನಾವಿಬ್ಬರೂ ಈ ವಿಷಯಕ್ಕೆ ಹೊಸಬರಲ್ಲ. ಯೋಗೀಜಿ ಅವರ ಗುರು ಮಹಂತ ಅವೈದ್ಯನಾಥ್ ಮಂದಿರ ಆಂದೋಲನದ ಪ್ರಮುಖರಾಗಿದ್ದರು' ಎಂದು ಉಮಾ ಭಾರತಿ ನುಡಿದರು.

ತಮ್ಮ ವಿರುದ್ಧದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿಇರುವುದರಿಂದ ಈ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಆದರೆ ಇಡೀ ಮಂದಿರ ವಿವಾದವನ್ನೇ ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಕೋರ್ಟ್‌ ಹೇಳಿರುವುದು ಗಮನಾರ್ಹ ಎಂದು ಸಚಿವೆ ಹೇಳಿದರು.

ಬಾಬ್ರಿ ಮಸೀದಿ ಧ್ವಂಸ ವಿಚಾರದಲ್ಲಿ ಉಮಾ ಭಾರತಿ ಹಾಗೂ ಇತರ ಹಿರಿಯ ಮುಖಂಡರಾದ ಎಲ್‌.ಕೆ ಆಡ್ವಾಣಿ ಮತ್ತು ಎಂ.ಎಂ ಜೋಷಿ ವಿರುದ್ಧದ ಸಂಚಿನ ಪ್ರಕರಣದ ಮರುವಿಚಾರಣೆ ನಡೆಯಬೇಕೆಂಬ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ಕಾಯ್ದಿರಿಸಿತ್ತು.

Ready to go to jail for Ram Temple in Ayodhya: Uma Bharti

LUCKNOW: Union water resources minister Uma Bharti on Saturday said Ram temple in Ayodhya was a matter of belief for her and she was ready to go to jail for it.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ