ಆ್ಯಪ್ನಗರ

'ಒನ್‌ ಟೈಮ್‌ ಸೆಟ್ಲ್‌ಮೆಂಟ್‌'ಗೆ ಸಿದ್ಧ ಎಂದ ಮಲ್ಯ

ಏಕಕಾಲದಲ್ಲೇ ತನ್ನ ಸಾಲವನ್ನು ವಿಲೇವಾರಿ ಮಾಡುವುದಾಗಿ ಹೇಳಿ ಟ್ವೀಟ್‌ ಮಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 10 Mar 2017, 4:49 pm
ಹೊಸದಿಲ್ಲಿ: ಉದ್ದೇಶಪೂರ್ವಕ ಸುಸ್ತಿದಾರ, ಮದ್ಯದ ದೊರೆ ವಿಜಯ್‌ ಮಲ್ಯ ವಿರುದ್ಧದ ಬ್ಯಾಂಕ್‌ಗಳ ಹೋರಾಟಕ್ಕೆ ಕೊನೆಗೂ ಜಯ ಕಾಣುವ ಸಂಭವವಿದ್ದು, ಏಕಕಾಲದಲ್ಲೇ ತನ್ನ ಸಾಲವನ್ನು ವಿಲೇವಾರಿ ಮಾಡುವುದಾಗಿ ಹೇಳಿ ಟ್ವೀಟ್‌ ಮಾಡಿದ್ದಾರೆ.
Vijaya Karnataka Web ready to talk to banks for one time settlement vijay mallya tweets
'ಒನ್‌ ಟೈಮ್‌ ಸೆಟ್ಲ್‌ಮೆಂಟ್‌'ಗೆ ಸಿದ್ಧ ಎಂದ ಮಲ್ಯ


ಬ್ಯಾಂಕ್‌ಗಳ ವಿರುದ್ಧ ಕಿಡಿಕಾರಿರುವ ಮಲ್ಯ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಈ ವರೆಗೆ ಹಲವಾರು ಸಾಲಗಾರರಿಗೆ ಒಂದೇ ಕಂತಿನಲ್ಲಿ ಸಾಲ ಮರು ಪಾವತಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ನಮ್ಮ ಪ್ರಕರಣದಲ್ಲಿ ಇವರು ಈ ಒಪ್ಪಂದಕ್ಕೆ ಒಪ್ಪುತ್ತಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿ ಒಪ್ಪಂದಕ್ಕೆ ಅನುವು ಮಾಡಿಕೊಡಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿರುವ ಮಲ್ಯ, 'ಸರಕಾರ ನ್ಯಾಯಯುತ ವಿಚಾರಣೆಯಿಲ್ಲದೆಯೇ ನನ್ನನ್ನು ತಪ್ಪಿತಸ್ಥನಾಗಿಸುವ ಪ್ರಯತ್ನ ಮಾಡುತ್ತಿದೆ. ಸುಪ್ರೀಂ ಕೋರ್ಟ್‌ನ ಮುಂದೆ ಅಟಾರ್ನಿ ಜನರಲ್‌ ಅವರ ಆರೋಪಗಳೇ ಸರಕಾರ ತನ್ನ ವಿರುದ್ಧ ಹೊಂದಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಆದರೆ ತಾನು ಸುಪ್ರೀಂ ಕೋರ್ಟ್‌ನ ಎಲ್ಲಾ ಆದೇಶಗಳನ್ನು ಪಾಲಿಸಲು ಸಿದ್ಧವಿದ್ದು ಏಕಕಾಲದಲ್ಲೇ ಸಾಲವನ್ನು ಮರುಪಾವತಿಸಲು ಸಿದ್ಧಿವಿದ್ದೇನೆ' ಎಂದು ಹೇಳಿದ್ದಾರೆ.

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಸರಿ ಸುಮಾರು 9,000 ಕೋಟಿ ರು ಸಾಲ ಪಡೆದು ಉದ್ದೇಶ ಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ವಿಜಯ್ ಮಲ್ಯ ಅವರು ಸದ್ಯ ಯುಕೆಯಲ್ಲಿ ನೆಲೆಸಿದ್ದಾರೆ.

ವಿಭಾಗೀಯ ಪೀಠದಿಂದ ವಾರೆಂಟ್‌ ಜಾರಿ
ಸಾಲ ವಸೂಲಾತಿ ನ್ಯಾಯಾಧಿಕರಣದ ಆದೇಶ ಪಾಲನೆ ಮಾಡದ ಹಿನ್ನೆಲೆ ವಿಜಯ್ ಮಲ್ಯ ವಿರುದ್ದ ಹೈಕೋರ್ಟ್‌ ವಿಭಾಗೀಯ ಪೀಠ ವಾರೆಂಟ್ ಮಾಡಿದೆ.
ಕೇಂದ್ರ ಗೃಹ ಇಲಾಖೆ ಮೂಲಕ ವಾರೆಂಟ್ ಜಾರಿಗೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿರುವ ಹೈಕೋರ್ಟ್‌ ವಿಭಾಗೀಯ ಪೀಠ, ಜೂನ್ 1 ರಂದು ಮಲ್ಯರನ್ನು ಹಾಜರುಪಡಿಸುವಂತೆ ವಾರೆಂಟ್ ಜಾರಿ ಮಾಡಿದೆ. ವಿಜಯ್ ಮಲ್ಯ ಹೊರದೇಶದಲ್ಲಿದ್ದಾರೆಂದು ಕೇಂದ್ರ ಸರಕಾರ ಹೇಳಿಕೆ ನೀಡಿತ್ತು. ಹೀಗಾಗಿ ಮಲ್ಯರಿಂದ 50 ಲಕ್ಷ ಮುಚ್ಚಳಿಕೆ ಪಡೆಯಲು ಸೂಚನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ