ಹೊಸದಿಲ್ಲಿ: ಭಾರತೀಯ ವಾಯುಪಡೆಯ Mi17V5 ಹೆಲಿಕಾಪ್ಟರ್ ಫೆ.27ರಂದು ಶ್ರೀನಗರ ಸಮೀಪ ಪತನವಾಗಿ ಆರು ಮಂದಿ ವಾಯುಪಡೆ ಯೋಧರು ಮತ್ತು ಕೆಳಗಿದ್ದ ನಾಗರಿಕರೊಬ್ಬರು ಮೃತಪಟ್ಟಿರುವ ಘಟನೆಗೆ ಕಾರಣಗಳ ಬಗ್ಗೆ ತನಿಖಾ ತಂಡವು ತನಿಖೆ ತೀವ್ರಗೊಳಿಸಿದೆ. ಗಡಿ ನಿಯಂತ್ರಣ ರೇಖೆಯಿಂದ 100 ಕಿ.ಮೀ. ದೂರದಲ್ಲಿ ನೌಶೇರಾ ಸೆಕ್ಟರ್ನ ಬಡ್ಗಾಂನಲ್ಲಿ ಪಾಕಿಸ್ತಾನಿ ವಾಯು ಪಡೆಯ ವಿಮಾನಗಳೊಂದಿಗೆ ಭಾರತೀಯ ವಾಯುಪಡೆಯ ಸಮರ ವಿಮಾನಗಳು ಹೋರಾಟದಲ್ಲಿ ತೊಡಗಿರುವಾಗ ಕೇವಲ ಹತ್ತೇ ನಿಮಿಷದಲ್ಲಿ ಈ ಎಂಐ-17 ಹೆಲಿಕಾಪ್ಟರ್ ಉರಿದು ನಾಶವಾಯಿತು. ಯುದ್ಧದ ಕಾರ್ಮೋಡ ಇದ್ದುದರಿಂದ ವಾಯು ರಕ್ಷಣಾ ಪಡೆಯ ಎಲ್ಲ ಸಿಸ್ಟಂಗಳು ಕಟ್ಟೆಚ್ಚರದ ಕಾರ್ಯದಲ್ಲಿ ನಿರತವಾಗಿದ್ದವು ಮತ್ತು ಕಮಾಂಡ್ ಹಾಗೂ ನಿಯಂತ್ರಣ ವ್ಯವಸ್ಥೆಗಳು ಸಾಕಷ್ಟು ಒತ್ತಡದಲ್ಲಿದ್ದವು.
ಪಾಕಿಸ್ತಾನದ ಜತೆಗಿನ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ, ಈ ಹೆಲಿಕಾಪ್ಟರ್ ಪತನಗೊಂಡಿರುವುದು ಅತ್ಯಂತ ದೊಡ್ಡ ದುರಂತವೇ ಆಗಿತ್ತು. ಭಾರತೀಯ ರೇಡಾರ್ಗಳು ಪಾಕಿಸ್ತಾನಿ ಜೆಟ್ಗಳನ್ನು ಪತ್ತೆ ಹಚ್ಚಿದ ಬಳಿಕ ವಾಯು ದಾಳಿಯಾಗುತ್ತಿರುವ ಬಗ್ಗೆ ಎಚ್ಚರಿಕೆ ರವಾನಿಸಿದ ನಂತರವೂ, ಈ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಲಾಗಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಧಿಕೃತ ಹೇಳಿಕೆಯ ಪ್ರಕಾರ, ಈ ಹೆಲಿಕಾಪ್ಟರ್ ತನ್ನ ದೈನಂದಿನ ಕರ್ತವ್ಯದಲ್ಲಿ ತೊಡಗಿತ್ತು.
ಎಲ್ಲ ಕೋನಗಳಲ್ಲಿಯೂ ತನಿಖೆ ಮಾಡಲಾಗುತ್ತಿದೆ. ಆದರೆ, ಹೆಲಿಕಾಪ್ಟರ್ ಪತನ ಹೇಗಾಯಿತು ಎಂದು ಈಗಲೇ ಹೇಳುವುದು ಕಷ್ಟ. 10-15 ದಿನಗಳೊಳಗೆ ಕಾಪ್ಟರ್ ಪತನದ ಕಾರಣಗಳು ತಿಳಿಯಲಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ ಪತನಾಗಿದ್ದನ್ನು ಭಾರತೀಯ ವಾಯುಪಡೆ ದೃಢಪಡಿಸಿದ್ದರೂ, ಪಾಕಿಸ್ತಾನದ ಜತೆ ವೈಮಾನಿಕ ಹೋರಾಟಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬುದರ ಬಗ್ಗೆ ಖಚಿತವಾಗಿ ಏನನ್ನೂ ಹೇಳಿಲ್ಲ. ಅಲ್ಲದೆ, ನೌಶೇರಾದಲ್ಲಿ ವೈಮಾನಿಕ ಯುದ್ಧವನ್ನು ಪಾಕಿಸ್ತಾನವೂ ಖಚಿತಪಡಿಸಿದ್ದರೂ, ಹೆಲಿಕಾಪ್ಟರ್ ಪತನದಲ್ಲಿ ತನ್ನ ಸೈನಿಕರ ಕೈವಾಡವಿಲ್ಲ ಎಂದಿತ್ತು.
ಗಡಿಯಲ್ಲಿ ಪಾಕಿಸ್ತಾನದ ಜತೆ ವಾಯುಪಡೆ ಸೈನಿಕರು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೇ, ಕಾಕತಾಳೀಯ ಎಂಬಂತೆ, ಬೆಳಗ್ಗೆ 10ಕ್ಕೆ ಗಗನಕ್ಕೆ ನೆಗೆದಿದ್ದ ಹೆಲಿಕಾಪ್ಟರ್, 10.10ಕ್ಕೆ ಉರಿದು ಭಸ್ಮವಾಗಿ ಕೆಳಗೆ ಬಿದ್ದಿತ್ತು. ಅಷ್ಟೊತ್ತಿಗಾಗಲೇ ವಾಯುಪಡೆಯ ಸುಖೋಯ್, ಮಿರಾಜ್ ಹಾಗೂ ಮಿಗ್ ವಿಮಾನಗಳು ಪಾಕಿಸ್ತಾನದ ಎಫ್-16 ವಿಮಾನವನ್ನು ಕೆಡವಿದ್ದವು. ರಕ್ಷಣಾ ವ್ಯವಸ್ಥೆಗಳು ಕಾರ್ಯಾಚರಿಸುತ್ತಿರುವಾಗ, ದೇಶದೊಳಗೆ ಧಾವಿಸಿ ಬರುತ್ತಿರುವ ವಿಮಾನಗಳತ್ತ ಕ್ಷಿಪ್ರ ಪ್ರತಿಕ್ರಿಯೆ ತೋರಿಸುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ಜತೆಗೆ, ಅವುಗಳಲ್ಲಿ ಯುದ್ಧದ ಸಂದರ್ಭದಲ್ಲಿ ಐಎಫ್ಎಫ್ (ಅಂದರೆ ಶತ್ರು ಅಥವಾ ಮಿತ್ರನನ್ನು ಗುರುತಿಸುವ ವ್ಯವಸ್ಥೆ) ಸುರಕ್ಷಾ ತಂತ್ರಜ್ಞಾನವೂ ಅಂತರ್ನಿರ್ಮಿತವಾಗಿವೆ. ನಮ್ಮವರಿಂದಲೇ ಹೆಲಿಕಾಪ್ಟರ್ ಮೇಲೆ ಕಣ್ತಪ್ಪಿ ದಾಳಿಯಾಯಿತು ಎಂದಾದರೆ, ಅದು ಹಲವು ಹಂತದ ಸುರಕ್ಷತಾ ಕ್ರಮಗಳ ಸ್ಪಷ್ಟ ವೈಫಲ್ಯ ಎನ್ನಿಸಬಹುದು. ಅಥವಾ ಶತ್ರು ರಾಷ್ಟ್ರದವರೇನಾದರೂ ಹೊಡೆದು ಉರುಳಿಸಿದರೇ ಎಂಬುದರ ಸಾಧ್ಯತೆಯ ಬಗ್ಗೆಯೂ ತನಿಖೆ ಮುಂದುವರಿದಿದೆ.
ಪಾಕಿಸ್ತಾನದ ಜತೆಗಿನ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ, ಈ ಹೆಲಿಕಾಪ್ಟರ್ ಪತನಗೊಂಡಿರುವುದು ಅತ್ಯಂತ ದೊಡ್ಡ ದುರಂತವೇ ಆಗಿತ್ತು. ಭಾರತೀಯ ರೇಡಾರ್ಗಳು ಪಾಕಿಸ್ತಾನಿ ಜೆಟ್ಗಳನ್ನು ಪತ್ತೆ ಹಚ್ಚಿದ ಬಳಿಕ ವಾಯು ದಾಳಿಯಾಗುತ್ತಿರುವ ಬಗ್ಗೆ ಎಚ್ಚರಿಕೆ ರವಾನಿಸಿದ ನಂತರವೂ, ಈ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಲಾಗಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಧಿಕೃತ ಹೇಳಿಕೆಯ ಪ್ರಕಾರ, ಈ ಹೆಲಿಕಾಪ್ಟರ್ ತನ್ನ ದೈನಂದಿನ ಕರ್ತವ್ಯದಲ್ಲಿ ತೊಡಗಿತ್ತು.
ಎಲ್ಲ ಕೋನಗಳಲ್ಲಿಯೂ ತನಿಖೆ ಮಾಡಲಾಗುತ್ತಿದೆ. ಆದರೆ, ಹೆಲಿಕಾಪ್ಟರ್ ಪತನ ಹೇಗಾಯಿತು ಎಂದು ಈಗಲೇ ಹೇಳುವುದು ಕಷ್ಟ. 10-15 ದಿನಗಳೊಳಗೆ ಕಾಪ್ಟರ್ ಪತನದ ಕಾರಣಗಳು ತಿಳಿಯಲಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ ಪತನಾಗಿದ್ದನ್ನು ಭಾರತೀಯ ವಾಯುಪಡೆ ದೃಢಪಡಿಸಿದ್ದರೂ, ಪಾಕಿಸ್ತಾನದ ಜತೆ ವೈಮಾನಿಕ ಹೋರಾಟಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬುದರ ಬಗ್ಗೆ ಖಚಿತವಾಗಿ ಏನನ್ನೂ ಹೇಳಿಲ್ಲ. ಅಲ್ಲದೆ, ನೌಶೇರಾದಲ್ಲಿ ವೈಮಾನಿಕ ಯುದ್ಧವನ್ನು ಪಾಕಿಸ್ತಾನವೂ ಖಚಿತಪಡಿಸಿದ್ದರೂ, ಹೆಲಿಕಾಪ್ಟರ್ ಪತನದಲ್ಲಿ ತನ್ನ ಸೈನಿಕರ ಕೈವಾಡವಿಲ್ಲ ಎಂದಿತ್ತು.
ಗಡಿಯಲ್ಲಿ ಪಾಕಿಸ್ತಾನದ ಜತೆ ವಾಯುಪಡೆ ಸೈನಿಕರು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೇ, ಕಾಕತಾಳೀಯ ಎಂಬಂತೆ, ಬೆಳಗ್ಗೆ 10ಕ್ಕೆ ಗಗನಕ್ಕೆ ನೆಗೆದಿದ್ದ ಹೆಲಿಕಾಪ್ಟರ್, 10.10ಕ್ಕೆ ಉರಿದು ಭಸ್ಮವಾಗಿ ಕೆಳಗೆ ಬಿದ್ದಿತ್ತು. ಅಷ್ಟೊತ್ತಿಗಾಗಲೇ ವಾಯುಪಡೆಯ ಸುಖೋಯ್, ಮಿರಾಜ್ ಹಾಗೂ ಮಿಗ್ ವಿಮಾನಗಳು ಪಾಕಿಸ್ತಾನದ ಎಫ್-16 ವಿಮಾನವನ್ನು ಕೆಡವಿದ್ದವು. ರಕ್ಷಣಾ ವ್ಯವಸ್ಥೆಗಳು ಕಾರ್ಯಾಚರಿಸುತ್ತಿರುವಾಗ, ದೇಶದೊಳಗೆ ಧಾವಿಸಿ ಬರುತ್ತಿರುವ ವಿಮಾನಗಳತ್ತ ಕ್ಷಿಪ್ರ ಪ್ರತಿಕ್ರಿಯೆ ತೋರಿಸುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ಜತೆಗೆ, ಅವುಗಳಲ್ಲಿ ಯುದ್ಧದ ಸಂದರ್ಭದಲ್ಲಿ ಐಎಫ್ಎಫ್ (ಅಂದರೆ ಶತ್ರು ಅಥವಾ ಮಿತ್ರನನ್ನು ಗುರುತಿಸುವ ವ್ಯವಸ್ಥೆ) ಸುರಕ್ಷಾ ತಂತ್ರಜ್ಞಾನವೂ ಅಂತರ್ನಿರ್ಮಿತವಾಗಿವೆ. ನಮ್ಮವರಿಂದಲೇ ಹೆಲಿಕಾಪ್ಟರ್ ಮೇಲೆ ಕಣ್ತಪ್ಪಿ ದಾಳಿಯಾಯಿತು ಎಂದಾದರೆ, ಅದು ಹಲವು ಹಂತದ ಸುರಕ್ಷತಾ ಕ್ರಮಗಳ ಸ್ಪಷ್ಟ ವೈಫಲ್ಯ ಎನ್ನಿಸಬಹುದು. ಅಥವಾ ಶತ್ರು ರಾಷ್ಟ್ರದವರೇನಾದರೂ ಹೊಡೆದು ಉರುಳಿಸಿದರೇ ಎಂಬುದರ ಸಾಧ್ಯತೆಯ ಬಗ್ಗೆಯೂ ತನಿಖೆ ಮುಂದುವರಿದಿದೆ.