ಹೊಸದಿಲ್ಲಿ: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡೆಸಿದ 'ಅಸಮಾಧಾನ ಶಮನ ಕಾರ್ಯಾಚರಣೆ' ಫಲ ನೀಡಿದೆ. ಹೀಗಾಗಿ ಕಾಂಗ್ರೆಸ್ನ 'ಜಿ-23' ಗುಂಪಿನ ನಾಯಕರು ಸದ್ಯಕ್ಕೆ ಮೌನ ತಳೆಯಲು ನಿರ್ಧರಿಸಿದ್ದಾರೆ. ''ನಮ್ಮ ಸಲಹೆಗಳನ್ನು ಸೋನಿಯಾ ಗಾಂಧಿ ಸ್ವೀಕರಿಸಿರುವುದರಿಂದ ಬಿಕ್ಕಟ್ಟು ಬಗೆಹರಿದಿದೆ,'' ಎಂದು ಭಿನ್ನ ಬಣದ ಮುಖಂಡ ಗುಲಾಂ ನಬಿ ಆಜಾದ್ ಶನಿವಾರ ಹೇಳಿದ್ದಾರೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗುಲಾಂ ನಬಿ ಆಜಾದ್ ಶುಕ್ರವಾರ ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಪಂಚ ರಾಜ್ಯ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಹೀನಾಯ ಸೋಲಿನ ಕಾರಣಗಳ ಕುರಿತು ಆಜಾದ್ ಪ್ರಸ್ತಾಪ ಮಾಡಿದ್ದರು.
ಪಕ್ಷದಲ್ಲಿಆಗಬೇಕಾದ ಬದಲಾವಣೆಗಳ ಬಗ್ಗೆಯೂ ಅವರು ಸಲಹೆ ನೀಡಿದ್ದರು. ಅದೆಲ್ಲವನ್ನೂ ಸೋನಿಯಾ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಲಿಗೆ ಗಾಂಧಿ ಕುಟುಂಬವನ್ನು ಮಾತ್ರ ದೂರುವುದು ಸಲ್ಲ: ಮಲ್ಲಿಕಾರ್ಜುನ ಖರ್ಗೆ
''ಪಕ್ಷದಲ್ಲಿ ಸದ್ಯಕ್ಕೆ ಯಾವುದೇ ಗೊಂದಲ ಇಲ್ಲ. ಇದ್ದ ಸಮಸ್ಯೆಗಳಿಗೆ ಪರಿಹಾರ ಲಭಿಸಿದೆ. ಸಂಘಟನೆ ಬಲವರ್ಧನೆ ಮತ್ತು ಪಕ್ಷದಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತು ನಾವು ನೀಡಿದ ಸಲಹೆಗೆ ಸೋನಿಯಾ ಗಾಂಧಿ ಸಮ್ಮತಿ ನೀಡಿದ್ದಾರೆ. ನಿಧಾನವಾಗಿ ಎಲ್ಲವನ್ನೂ ಸರಿಪಡಿಸುವುದಾಗಿ ತಿಳಿಸಿದ್ದಾರೆ,'' ಎಂದು ಆಜಾದ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಪಕ್ಷದೊಳಗೆ ಅಪಸ್ವರ ಎತ್ತಿರುವ 23 ಹಿರಿಯ ನಾಯಕರು, ''ಈಗಿನ ನಾಯಕತ್ವ ಸರಿಯಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡ ಮುನ್ನಡೆಸುವ ಉದಾರ ಧೋರಣೆಯ ಮುಖಂಡರು ಮುಂಚೂಣಿಯಲ್ಲಿರಬೇಕು,'' ಎಂದು ಆಗ್ರಹಿಸಿದ್ದರು.
ಇದೇ ಗುಂಪಿನ ಇನ್ನೊಬ್ಬ ಫೈರ್ಬ್ರಾಂಡ್ ನಾಯಕ ಕಪಿಲ್ ಸಿಬಲ್, ನೇರ ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.
''ಸೋನಿಯಾ ಗಾಂಧಿ ಅವರು ಅನಾರೋಗ್ಯದ ನಡುವೆಯೂ ಪಕ್ಷದ ಸೂತ್ರ ಹಿಡಿದು ಕೂರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ವರ್ಚಸ್ಸಿನ ಯುವ ನಾಯಕರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟರೆ ಮಾತ್ರ ಪಕ್ಷ ಉಳಿದು ಬೆಳೆಯಲು ಸಾಧ್ಯ. ಆದರೆ, ಸೋನಿಯಾ ಗಾಂಧಿ ನಿಷ್ಠರಿಗೆ ನಾವು ಹೇಳುವ ಕಠೋರ ವಾಸ್ತವ ಕಹಿಯಾಗಿ ಕಾಣುತ್ತಿರುವುದು ವಿಪರ್ಯಾಸ,'' ಎಂದು ಛೇಡಿಸಿದ್ದರು.
ಅಧ್ಯಕ್ಷರ ಬದಲಾವಣೆಯ ಪ್ರಮುಖ ವಿಷಯ ಕುರಿತು ಪ್ರತಿಕ್ರಿಯಿಸಿರುವ ಆಜಾದ್, ''ಸದ್ಯಕ್ಕೆ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಸೋನಿಯಾ ಗಾಂಧಿ ಅವರು ಕಳೆದ ಕಾರ್ಯಾಕಾರಿಣಿ ಸಭೆಯಲ್ಲಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಅದನ್ನು ನಾವು ಒಮ್ಮತದಿಂದ ನಿರಾಕರಿಸಿದ್ದೇವೆ. ಮುಂದಿನ ತೀರ್ಮಾನದವರೆಗೆ ಮುಂದುವರಿಯುವಂತೆ ಅವರನ್ನು ಕೋರಿದ್ದೇವೆ.
ಈಗ ನಾಯಕತ್ವದ ಸಮಸ್ಯೆ ಇಲ್ಲ. ಸಂಘಟನಾತ್ಮಕ ಬದಲಾವಣೆ ಆಗಬೇಕಿದೆ. ಅದಕ್ಕೆ ಸೋನಿಯಾ ಅವರು ಸಮ್ಮತಿಸಿದ್ದಾರೆ. ಜಿ-23 ಕಾಂಗ್ರೆಸ್ ಹೊರಗಿರುವ ಬಣವಲ್ಲ, ನಾವೂ ಪಕ್ಷದೊಳಗೇ ಇದ್ದೇವೆ. ಪಕ್ಷದ ಬಲವರ್ಧನೆಯೇ ನಮ್ಮ ಗುರಿ,'' ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಬಳಿಕ ಮರು ಸ್ಫೋಟಗೊಂಡಿದ್ದ ಭಿನ್ನರ ಆಕ್ರೋಶ ಶಮನಕ್ಕೆ ರಾಹುಲ್ ಗಾಂಧಿ ಕೂಡ ಕಸರತ್ತು ನಡೆಸಿದ್ದರು. ಹರಿಯಾಣ ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಅವರನ್ನು ರಾಹುಲ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಬಳಿಕ ಆಜಾದ್ ಅವರು ಸೋನಿಯಾ ಜತೆಗೆ ಮಾತುಕತೆ ನಡೆಸಿದ್ದರು.
ಪಕ್ಷದಲ್ಲಿಆಗಬೇಕಾದ ಬದಲಾವಣೆಗಳ ಬಗ್ಗೆಯೂ ಅವರು ಸಲಹೆ ನೀಡಿದ್ದರು. ಅದೆಲ್ಲವನ್ನೂ ಸೋನಿಯಾ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಲಿಗೆ ಗಾಂಧಿ ಕುಟುಂಬವನ್ನು ಮಾತ್ರ ದೂರುವುದು ಸಲ್ಲ: ಮಲ್ಲಿಕಾರ್ಜುನ ಖರ್ಗೆ
''ಪಕ್ಷದಲ್ಲಿ ಸದ್ಯಕ್ಕೆ ಯಾವುದೇ ಗೊಂದಲ ಇಲ್ಲ. ಇದ್ದ ಸಮಸ್ಯೆಗಳಿಗೆ ಪರಿಹಾರ ಲಭಿಸಿದೆ. ಸಂಘಟನೆ ಬಲವರ್ಧನೆ ಮತ್ತು ಪಕ್ಷದಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತು ನಾವು ನೀಡಿದ ಸಲಹೆಗೆ ಸೋನಿಯಾ ಗಾಂಧಿ ಸಮ್ಮತಿ ನೀಡಿದ್ದಾರೆ. ನಿಧಾನವಾಗಿ ಎಲ್ಲವನ್ನೂ ಸರಿಪಡಿಸುವುದಾಗಿ ತಿಳಿಸಿದ್ದಾರೆ,'' ಎಂದು ಆಜಾದ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಪಕ್ಷದೊಳಗೆ ಅಪಸ್ವರ ಎತ್ತಿರುವ 23 ಹಿರಿಯ ನಾಯಕರು, ''ಈಗಿನ ನಾಯಕತ್ವ ಸರಿಯಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡ ಮುನ್ನಡೆಸುವ ಉದಾರ ಧೋರಣೆಯ ಮುಖಂಡರು ಮುಂಚೂಣಿಯಲ್ಲಿರಬೇಕು,'' ಎಂದು ಆಗ್ರಹಿಸಿದ್ದರು.
ಇದೇ ಗುಂಪಿನ ಇನ್ನೊಬ್ಬ ಫೈರ್ಬ್ರಾಂಡ್ ನಾಯಕ ಕಪಿಲ್ ಸಿಬಲ್, ನೇರ ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.
''ಸೋನಿಯಾ ಗಾಂಧಿ ಅವರು ಅನಾರೋಗ್ಯದ ನಡುವೆಯೂ ಪಕ್ಷದ ಸೂತ್ರ ಹಿಡಿದು ಕೂರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ವರ್ಚಸ್ಸಿನ ಯುವ ನಾಯಕರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟರೆ ಮಾತ್ರ ಪಕ್ಷ ಉಳಿದು ಬೆಳೆಯಲು ಸಾಧ್ಯ. ಆದರೆ, ಸೋನಿಯಾ ಗಾಂಧಿ ನಿಷ್ಠರಿಗೆ ನಾವು ಹೇಳುವ ಕಠೋರ ವಾಸ್ತವ ಕಹಿಯಾಗಿ ಕಾಣುತ್ತಿರುವುದು ವಿಪರ್ಯಾಸ,'' ಎಂದು ಛೇಡಿಸಿದ್ದರು.
ಅಧ್ಯಕ್ಷರ ಬದಲಾವಣೆಯ ಪ್ರಮುಖ ವಿಷಯ ಕುರಿತು ಪ್ರತಿಕ್ರಿಯಿಸಿರುವ ಆಜಾದ್, ''ಸದ್ಯಕ್ಕೆ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಸೋನಿಯಾ ಗಾಂಧಿ ಅವರು ಕಳೆದ ಕಾರ್ಯಾಕಾರಿಣಿ ಸಭೆಯಲ್ಲಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಅದನ್ನು ನಾವು ಒಮ್ಮತದಿಂದ ನಿರಾಕರಿಸಿದ್ದೇವೆ. ಮುಂದಿನ ತೀರ್ಮಾನದವರೆಗೆ ಮುಂದುವರಿಯುವಂತೆ ಅವರನ್ನು ಕೋರಿದ್ದೇವೆ.
ಈಗ ನಾಯಕತ್ವದ ಸಮಸ್ಯೆ ಇಲ್ಲ. ಸಂಘಟನಾತ್ಮಕ ಬದಲಾವಣೆ ಆಗಬೇಕಿದೆ. ಅದಕ್ಕೆ ಸೋನಿಯಾ ಅವರು ಸಮ್ಮತಿಸಿದ್ದಾರೆ. ಜಿ-23 ಕಾಂಗ್ರೆಸ್ ಹೊರಗಿರುವ ಬಣವಲ್ಲ, ನಾವೂ ಪಕ್ಷದೊಳಗೇ ಇದ್ದೇವೆ. ಪಕ್ಷದ ಬಲವರ್ಧನೆಯೇ ನಮ್ಮ ಗುರಿ,'' ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಬಳಿಕ ಮರು ಸ್ಫೋಟಗೊಂಡಿದ್ದ ಭಿನ್ನರ ಆಕ್ರೋಶ ಶಮನಕ್ಕೆ ರಾಹುಲ್ ಗಾಂಧಿ ಕೂಡ ಕಸರತ್ತು ನಡೆಸಿದ್ದರು. ಹರಿಯಾಣ ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಅವರನ್ನು ರಾಹುಲ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಬಳಿಕ ಆಜಾದ್ ಅವರು ಸೋನಿಯಾ ಜತೆಗೆ ಮಾತುಕತೆ ನಡೆಸಿದ್ದರು.