ಆ್ಯಪ್ನಗರ

ಕಾರು ಕೊಡಲಿಲ್ಲವೆಂದು ಮದುವೆಯಾಗಿ ಎರಡು ಗಂಟೆಗೆ ತಲಾಖ್‌ ನೀಡಿದ

ಕಾರು ಕೊಡದ್ದಕ್ಕೆ ಮದುವೆಯಾದ ಎರಡೇ ಗಂಟೆಗಳಲ್ಲಿ ಮೂರು ಬಾರಿ ತಲಾಖ್‌ ಹೇಳಿದ ಘಟನೆ ಬಘ್ಪತ್‌ನ ದಹಾ ಗ್ರಾಮದಲ್ಲಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 29 Jul 2016, 7:14 pm
ಮೀರತ್‌: ಕಾರು ಕೊಡಬೇಕು ಎಂಬ ವರನ ಬೇಡಿಕೆಯನ್ನು ವಧುವಿನ ಕುಟುಂಬ ತಿರಸ್ಕರಿಸಿದ್ದಕ್ಕೆ ಮದುವೆಯಾದ ಎರಡೇ ಗಂಟೆಗಳಲ್ಲಿ ಮೂರು ಬಾರಿ ತಲಾಖ್‌ ಹೇಳಿ ಸಂಬಂಧ ಮುರಿದುಕೊಂಡ ಘಟನೆ ಬಘ್ಪತ್‌ನ ದಹಾ ಗ್ರಾಮದಲ್ಲಿ ನಡೆದಿದೆ.
Vijaya Karnataka Web refused car man calls out triple talaq ends nikah two hours after marriage
ಕಾರು ಕೊಡಲಿಲ್ಲವೆಂದು ಮದುವೆಯಾಗಿ ಎರಡು ಗಂಟೆಗೆ ತಲಾಖ್‌ ನೀಡಿದ


ಪ್ರಕರಣ ಹಳ್ಳಿಯ ಪಂಚಾಯತ್‌ನ ಮುಂದಿದ್ದು, ವರನು ವಧುವಿಗೆ 2.25 ಲಕ್ಷ ರೂ. ನೀಡಬೇಕು ಎಂದು ದಂಡ ವಿಧಿಸಿರುವ ಪಂಚಾಯತ್‌ ಆತ ಇನ್ನು ಮೂರು ವರ್ಷ ಮದುವೆಯಾಗದಂತೆ ನಿಷೇಧ ಹೇರಿದೆ.

ಮೊಹ್‌ಸಿನಾ ಮತ್ತು ಮೊಹಮ್ಮದ್‌ ಆರಿಫ್‌ ಅವರ ಮದುವೆ ಭಗ್ವಾನ್‌ಪುರದಲ್ಲಿ ಆಯೋಜಿಸಲಾಗಿತ್ತು. ವರನ ಕುಟುಂಬದ ಕೋರಿಕೆಯಂತೆ ಮನೆಗೆ ಬೇಕಾಗಿದ್ದ ವಸ್ತುಗಳನ್ನು ವಧು ಕುಟುಂಬ ನೀಡಿದೆ. ಆದರೆ ವರದಕ್ಷಿಣೆಯಾಗಿ ಕಾರು ಕೊಡುತ್ತಿಲ್ಲ ಎಂದು ತಿಳಿದ ವರ ಕಾರ್ಯಕ್ರಮದುದ್ದಕ್ಕೂ ವಧುವನ್ನು ಅಪಹಾಸ್ಯ ಮಾಡುತ್ತಲೇ ಇದ್ದ. ಇದರಿಂದ ನೊಂದ ವಧು ಕಣ್ಣೀರು ಹಾಕುತ್ತಿದ್ದಳು.

ಕೊನೆಗೆ ಪ್ರಕರಣ ಹಳ್ಳಿಯ ಪಂಚಾಯತ್‌ ಎದುರು ಬಂತು, ಆದರೆ ವರ ಮತ್ರ ಕಾರಿನ ಬೇಡಿಕೆಗೆ ಅಂಟಿಕೊಂಡಿದ್ದ. ಎಲ್ಲರ ಒತ್ತಾಯದ ಬಳಿಕ ವಧುವನ್ನು ಕರೆದುಕೊಂಡು ಹೋಗಲು ಸಮ್ಮತಿಸಿದ. ಆದರೆ ಆಕೆ ನಿರಾಕರಿಸಿದಳು, ಮನೆಗೆ ಹೋದಾತ ಫೋನ್‌ನಲ್ಲೇ ಮೂರು ಬಾರಿ ತಲಾಖ್‌ ಹೇಳಿದ್ದಾನೆ.

ದೇಶಾದ್ಯಂತ ಈಗ ಖುರಾನ್‌ ಸಮ್ಮತವಲ್ಲದ ಮೂರು ತಲಾಖ್‌ನ ಸಿಂಧುತ್ವದ ಬಗ್ಗೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದನ್ನು ನಿಷೇಧಿಸಲು 50 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಮತ್ತು ಪುರುಷರು ಸಹಿ ಅಭಿಯಾನ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಮಧ್ಯೆ ಪ್ರವೇಶಿಸಬೇಕು ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಕೋರಿದೆ.

ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಕೇರಳ ಮತ್ತು ಉತ್ತರಪ್ರದೇಶಗಳಲ್ಲಿ ಮೂರು ತಲಾಖ್‌ ವಿರುದ್ಧ ಸಹಿ ಆಂದೋಲನ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ