ಮುಂಬಯಿ: ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರಕ್ಕೆ ನೀಡುತ್ತಿರುವ ಬೆಂಬಲ ಹಿಂತೆಗೆತದ ಬಗ್ಗೆ ಪದೇ ಪದೇ ಬೆದರಿಕೆಯೊಡ್ಡುತ್ತಿರುವ ಶಿವಸೇನೆಗೆ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಕಾಲೆಳೆದಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಪಕ್ಷ ಶಿವಸೇನೆಯನ್ನು ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಗೊಳಿಸುವಂತೆ ಗಿನ್ನೆಸ್ ವಿಶ್ವದಾಖಲೆ ಸಮಿತಿ ನಿರ್ದೇಶಕರಿಗೆ ಬರೆದಿರುವ ಪತ್ರವೊಂದರಲ್ಲಿ ಕೇಳಿಕೊಂಡಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.
Shiv Sena truly deserves..hope they get it @world_guiness pic.twitter.com/AcNcPP9GlS — nitesh rane (@NiteshNRane) 14 June 2017 ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯ ಪರವಾಗಿ ಈ ಪತ್ರ ಬರೆಯುತ್ತಿದ್ದೇವೆ. ಮಹಾರಾಷ್ಟ್ರ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುತ್ತೇವೆ ಎಂದು ನೂರಾರು ಸಲ ಘೋಷಣೆ ಮಾಡಿದ್ದಾರೆ. ಇದು ಗಿನ್ನೆಸ್ ದಾಖಲೆಯಲ್ಲಿ ಇದುವರೆಗೆ ಇಲ್ಲದ ಕೆಟಗರಿ, ದಯವಿಟ್ಟು ಪರಿಗಣಿಸಿ ಎಂದು ಕನಕಾವಳಿ ಕ್ಷೇತ್ರದ ಶಾಸಕ ನಿತೀಶ್ ರಾಣೆ ವ್ಯಂಗ್ಯವಾಡಿದ್ದಾರೆ.
ಸರಕಾರವು ರೈತರ ಸಾಲ ಮನ್ನಾ ಮಾಡದಿದ್ದರೆ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಶಿವಸೇನೆ ಇತ್ತೀಚೆಗಷ್ಟೇ ಬೆದರಿಕೆಯೊಡ್ಡಿತ್ತು. ಬಳಿಕ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಾಲ ಮನ್ನಾ ಘೋಷಣೆ ಮಾಡಿದ್ದರು.
ನಿತೀಶ್ ರಾಣೆ ಅವರು ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆಯವರ ಪುತ್ರನಾಗಿದ್ದು, ಶಿವಸೇನೆಯ ಮೂಲಕವೇ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಈಗ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಪಕ್ಷ ಶಿವಸೇನೆಯನ್ನು ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಗೊಳಿಸುವಂತೆ ಗಿನ್ನೆಸ್ ವಿಶ್ವದಾಖಲೆ ಸಮಿತಿ ನಿರ್ದೇಶಕರಿಗೆ ಬರೆದಿರುವ ಪತ್ರವೊಂದರಲ್ಲಿ ಕೇಳಿಕೊಂಡಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.
Shiv Sena truly deserves..hope they get it @world_guiness pic.twitter.com/AcNcPP9GlS — nitesh rane (@NiteshNRane) 14 June 2017 ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯ ಪರವಾಗಿ ಈ ಪತ್ರ ಬರೆಯುತ್ತಿದ್ದೇವೆ. ಮಹಾರಾಷ್ಟ್ರ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುತ್ತೇವೆ ಎಂದು ನೂರಾರು ಸಲ ಘೋಷಣೆ ಮಾಡಿದ್ದಾರೆ. ಇದು ಗಿನ್ನೆಸ್ ದಾಖಲೆಯಲ್ಲಿ ಇದುವರೆಗೆ ಇಲ್ಲದ ಕೆಟಗರಿ, ದಯವಿಟ್ಟು ಪರಿಗಣಿಸಿ ಎಂದು ಕನಕಾವಳಿ ಕ್ಷೇತ್ರದ ಶಾಸಕ ನಿತೀಶ್ ರಾಣೆ ವ್ಯಂಗ್ಯವಾಡಿದ್ದಾರೆ.
ಸರಕಾರವು ರೈತರ ಸಾಲ ಮನ್ನಾ ಮಾಡದಿದ್ದರೆ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಶಿವಸೇನೆ ಇತ್ತೀಚೆಗಷ್ಟೇ ಬೆದರಿಕೆಯೊಡ್ಡಿತ್ತು. ಬಳಿಕ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಾಲ ಮನ್ನಾ ಘೋಷಣೆ ಮಾಡಿದ್ದರು.
ನಿತೀಶ್ ರಾಣೆ ಅವರು ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆಯವರ ಪುತ್ರನಾಗಿದ್ದು, ಶಿವಸೇನೆಯ ಮೂಲಕವೇ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಈಗ ಕಾಂಗ್ರೆಸ್ ಶಾಸಕರಾಗಿದ್ದಾರೆ.