ಆ್ಯಪ್ನಗರ

ತಮಿಳುನಾಡು ಮತ್ತೆ ಕ್ಯಾತೆ: ಮೇಕೆದಾಟು ಯೋಜನೆ ತಿರಸ್ಕರಿಸಲು ಕೇಂದ್ರಕ್ಕೆ ಪಳನಿಸ್ವಾಮಿ ಒತ್ತಾಯ

ಕಾವೇರಿ ವಿಚಾರದಲ್ಲಿ ತಮಿಳುನಾಡು ಮತ್ತೆ ಕ್ಯಾತೆ ತೆಗೆಯುತ್ತಿದೆ. ಮೇಕೆದಾಟು ಬಳಿ ಕುಡಿಯುವ ನೀರು ಯೋಜನೆ ಕೈಗೊಳ್ಳಲು ಮುಂದಾಗಿರುವ ಕರ್ನಾಟಕಕ್ಕೆ ಅನುಮತಿ ನೀಡಬಾರದು ಎಂದು ತಮಿಳುನಾಡು ಒತ್ತಾಯಿಸಿದೆ.

Vijaya Karnataka Web 10 Oct 2019, 10:28 pm
ಚೆನ್ನೈ: ಮೇಕೆದಾಟು ಯೋಜನೆಗೆ ಅನುಮತಿ ಕೋರಿ ಕೇಂದ್ರ ಸರಕಾರಕ್ಕೆ ಕರ್ನಾಟಕ ಪುನಃ ಮನವಿ ಸಲ್ಲಿಸಿದೆ. ಇದು ಒಪ್ಪುವಂಥದ್ದಲ್ಲ, ಜತೆಗೆ ಯೋಜನೆಗೆ ಅನುಮತಿ ನೀಡದೆ ಖಡಾಖಂಡಿತವಾಗಿ ತಿರಸ್ಕರಿಸಬೇಕು ಎಂದು ತಮಿಳುನಾಡು ಸರಕಾರ ಒತ್ತಾಯಿಸಿದೆ.
Vijaya Karnataka Web ಪಳನಿಸ್ವಾಮಿ
ಪಳನಿಸ್ವಾಮಿ


ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹಾಗೂ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಈ ಕುರಿತು ಪತ್ರ ಬರೆದಿರುವ ತಮಿಳುನಾಡು ಸಿಎಂ ಎ.ಕೆ.ಪಳನಿಸ್ವಾಮಿ, ಯೋಜನೆ ಸಂಬಂಧ ಈಗಾಗಲೇ ಕೋರ್ಟ್‌ನಲ್ಲಿಹಲವು ಆಕ್ಷೇಪಗಳ ವಿಚಾರಣೆ ನಡೆಯುತ್ತಿದೆ.

ಕಾವೇರಿ ಹರಿವಿನ ಪ್ರದೇಶಗಳಲ್ಲಿಕರ್ನಾಟಕದಲ್ಲಿಸದ್ಯ ಇರುವ ಅಣೆಕಟ್ಟೆಗಳು ಹಾಗೂ ಸಂಗ್ರಹ ವ್ಯವಸ್ಥೆಗಳು ತೃಪ್ತಿದಾಯಕವಾಗಿದೆ ಎಂದು ಕಾವೇರಿ ನದಿ ನೀರು ವ್ಯಾಜ್ಯ ನಿರ್ವಹಣಾ ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿವೆ. ಹಾಗಾಗಿ ಮತ್ತೊಂದು ಯೋಜನೆಗೆ ಅವಕಾಶ ನೀಡಬಾರದು ಎಂದಿದ್ದಾರೆ.

ಪರಿಸರ ಸಚಿವಾಲಯದಿಂದಲೂ ಯೋಜನೆಗೆ ಅನುಮತಿ ಕೊಡಬಾರದು . ಜತೆಗೆ ನೆರೆ ರಾಜ್ಯಗಳಿಂದ ಕರ್ನಾಟಕ ಯೋಜನೆ ಬಗ್ಗೆ ಅಭಿಪ್ರಾಯ ಪಡೆದಿಲ್ಲ ಎಂದು ಸಿಎಂ ಪಳನಿಸ್ವಾಮಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ