ಆ್ಯಪ್ನಗರ

ಆರುಷಿ ಮರ್ಡರ್‌: ತೀರ್ಪಿನಿಂದ ಕೊಂಚ ನೆಮ್ಮದಿ ಸಿಕ್ಕಿದೆ

ನೂಪುರ್‌- ರಾಜೇಶ್‌ ಜೈಲಿನಿಂದ ಬಿಡುಗಡೆಯಾಗುವುದನ್ನೇ ನಾನು ಎದುರು ನೋಡುತ್ತಿದ್ದೇನೆ ಎಂದು ಭಾರತೀಯ ವಾಯುಪಡೆಯ ಮಾಜಿ ಸಮೂಹ ಕ್ಯಾಪ್ಟನ್‌ ಬಿ .ಜಿ. ಚಿಟ್ನಿಸ್‌ ಹೇಳಿದ್ದಾರೆ.

TNN 12 Oct 2017, 11:01 pm
ಹೊಸದಿಲ್ಲಿ: ಒಂಭತ್ತು ವರ್ಷಗಳಿಂದ ನನ್ನ ಮಗಳು ಹಾಗೂ ಅಳಿಯ ಭಾವನಾತ್ಮಕವಾಗಿ ಬಳಲಿದ್ದು, ಈಗಲಾದರೂ ಅವರಿಗೆ ಕೊಂಚ ಮಾನಸಿಕ ನೆಮ್ಮದಿ ಸಿಕ್ಕಂತಾಗಿದೆ. ನೂಪುರ್‌- ರಾಜೇಶ್‌ ಜೈಲಿನಿಂದ ಬಿಡುಗಡೆಯಾಗುವುದನ್ನೇ ನಾನು ಎದುರು ನೋಡುತ್ತಿದ್ದೇನೆ ಎಂದು ಭಾರತೀಯ ವಾಯುಪಡೆಯ ಮಾಜಿ ಸಮೂಹ ಕ್ಯಾಪ್ಟನ್‌ ಬಿ .ಜಿ. ಚಿಟ್ನಿಸ್‌ ಹೇಳಿದ್ದಾರೆ.
Vijaya Karnataka Web relieved over verdict we went through trying times talwar family
ಆರುಷಿ ಮರ್ಡರ್‌: ತೀರ್ಪಿನಿಂದ ಕೊಂಚ ನೆಮ್ಮದಿ ಸಿಕ್ಕಿದೆ


ತೀರ್ಪಿನ ಕುರಿತು ನನಗೆ ನಿಜಕ್ಕೂ ಸಂತಸವಾಗಿದೆ, ದಂಪತಿಗಳಿಬ್ಬರೂ ಹೆಚ್ಚು ನೊಂದಿದ್ದಾರೆ. ಪ್ರಕರಣದ ಬಳಿಕ ಇಬ್ಬರೂ ಮಾನಸಿಕವಾಗಿ ಕುಗ್ಗಿದ್ದಾರೆ, ಅಲ್ಲದೆ ಈ ವಯಸ್ಸಿನಲ್ಲಿ ನನ್ನ ಮಗಳು ಕಂಬಿ ಹಿಂದೆಯಿರುವುದನ್ನು ಕಂಡು ನನಗೆ ನಿಜಕ್ಕೂ ತಡೆದುಕೊಳ್ಳಲಾಗುತ್ತಿರಲಿಲ್ಲ ಎಂದು ಚಿಟ್ನಿಸ್‌ ಹೇಳಿದ್ದಾರೆ.

ಈ ಪ್ರಕರಣದಲ್ಲಿ ನಮ್ಮ ಕುಟುಂಬಕ್ಕೆ ಭೌತಿಕವಾಗಿ, ಭಾವನಾತ್ಮಕವಾಗಿ, ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಆಸರೆಯಾಗಿ ನಿಂತ ಎಲ್ಲರಿಗೂ ನಾನು ಚಿರಋುಣಿ. ಈ ತೀರ್ಪಿನಿಂದ ತಲ್ವಾರ್‌ ದಂಪತಿಗೆ ಹೊಸ ಬದುಕು ದೊರೆತಿದೆ ಕುಟುಂಬದ ಸಂಬಂಧಿಕರಾದ ವಂದನಾ ತಲ್ವಾರ್‌ ಹೇಳಿದ್ದಾರೆ.

2008ರಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಕೋರ್ಟ್‌ 2013ರಲ್ಲಿ ರಾಜೇಶ್‌ ತಲ್ವಾರ್‌ ಮತ್ತು ನೂಪುರ್‌ ತಲ್ವಾರ್‌ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. . ಇದರ ವಿರುದ್ಧ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಂಡು ಪೊಲೀಸರು ಮತ್ತು ಸಿಬಿಐ ನಡೆಸಿದ ತನಿಖೆಯಲ್ಲಿ ತಲ್ವಾರ್‌ ದಂಪತಿ ಅವರೇ ಕೊಲೆ ಮಾಡಿದ ಬಗ್ಗೆ ಸೂಕ್ತ ಪುರಾವೆಗಳಿಲ್ಲ ಎಂದು ಹೇಳಿ ಇಬ್ಬರನ್ನೂ ದೋಷಮುಕ್ತಗೊಳಿಸಿದೆ.

ಸುದೀರ್ಘ ಕಾನೂನು ಹೋರಾಟದಲ್ಲಿ ತಲ್ವಾರ್‌ ದಂಪತಿ ಪರ ವಾದ ಮಂಡಿಸುತ್ತಾ ಬಂದ ವಕೀಲರಾದ ರೆಬಾಕಾ ಜಾನ್‌ ಅವರು ಕೂಡ, ''ಈ ಪ್ರಕರಣದಲ್ಲಿ ಸಿಬಿಐ ಕೇವಲ ಕಾಲ್ಪನಿಕ ಸಾಕ್ಷ್ಯಾಧಾರಗಳನ್ನು ಮುಂದಿರಿಸಿಕೊಂಡು ವಾದ ಮಂಡಿಸಿತೇ ಹೊರತು, ಕೊಲೆಯನ್ನು ದೃಢೀಕರಿಸುವ ದಾಖಲೆಗಳನ್ನು ಕಲೆಹಾಕುವ ಪ್ರಯತ್ನ ಮಾಡಲಿಲ್ಲ. ಇಲ್ಲಿ ಆರೋಪಿಗಳಿಗೆ ಸಂದೇಹದ ಲಾಭ ದೊರಕಬೇಕು,'' ಎಂದು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

relieved over verdict, we went through trying times: talwar family

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ