ಆ್ಯಪ್ನಗರ

ಉತ್ತರಾಖಂಡ್‌ನಲ್ಲಿ 13 ಮಿಲಿಯನ್ ವರ್ಷಗಳ ಹಿಂದಿನ ವಾನರ ಪ್ರಭೇದದ ಪಳೆಯುಳಿಕೆ ಪತ್ತೆ!

ಉತ್ತರಾಖಂಡ್‌ದಲ್ಲಿ ಸುಮಾರು 13 ಮಿಲಿಯನ್ ವರ್ಷಗಳಷ್ಟು ಹಿಂದಿನ ವಾನರ ಪ್ರಭೇದದ ಪಳೆಯುಳಿಕೆಯಯೊಂದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಸಂಶೋಧನೆ ಜೀವ ಪ್ರಭೇದದ ಪ್ರಮುಖ ಕೊಂಡಿಯ ಅಧ್ಯಯನಕ್ಕೆ ಸಹಾಯಕಾರಿ ಎಂದು ವಿಶ್ಲೇಷಿಸಲಾಗಿದೆ.

Vijaya Karnataka Web 9 Sep 2020, 6:47 pm
ಡೆಹ್ರಾಡೂನ್: ಉತ್ತರಾಖಂಡ್‌ದಲ್ಲಿ ಸುಮಾರು 13 ಮಿಲಿಯನ್ ವರ್ಷಗಳಷ್ಟು ಹಿಂದಿನ ವಾನರ ಪ್ರಭೇದದ ಪಳೆಯುಳಿಕೆಯಯೊಂದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಸಂಶೋಧನೆ ಜೀವ ಪ್ರಭೇದದ ಪ್ರಮುಖ ಕೊಂಡಿಯ ಅಧ್ಯಯನಕ್ಕೆ ಸಹಾಯಕಾರಿ ಎಂದು ವಿಶ್ಲೇಷಿಸಲಾಗಿದೆ.
Vijaya Karnataka Web Ape Fossil
ಸಂಗ್ರಹ ಚಿತ್ರ


ಈ ಕುರಿತು 'ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ' ಜರ್ನಲ್‌ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, ಪ್ರಸ್ತುತ ಪತ್ತೆಯಾಗಿರುವ ಪಳೆಯುಳಿಕೆ ಆಧುನಿಕ ಗಿಬ್ಬನ್ ವಾನರ ಪ್ರಭೇದದ ಅತ್ಯಂತ ಸಮೀಪದ ಪೂರ್ಜಜ ಎಂದು ಹೇಳಲಾಗಿದೆ.

6 ಅಡಿ ಉದ್ದದ ಮನುಷ್ಯನ ಅಸ್ಥಿಪಂಜರ ಪತ್ತೆ: ಮಧುರೈ ಬಳಿ ಕೀಳಡಿ ನಾಗರಿಕತೆಯ ಬೆನ್ನತ್ತಿ...!

ಇಂದಿನ ಗಿಬ್ಬನ್‌ನ ಪೂರ್ವಜರು ಆಫ್ರಿಕಾದಿಂದ ಏಷ್ಯಾಕ್ಕೆ ವಲಸೆ ಬಂದ ಇತಿಹಾಸದ ಮೇಲೆ ಈ ಸಂಶೋಧನೆ ಬೆಳಕು ಚೆಲ್ಲಲಿದೆ ಎಂದು ಸಂಶೋಧಕರು ಭರವಸೆ ವ್ಯಕ್ತಪಡಿಸಿದ್ದಾರೆ.

ಉತ್ತರಾಖಂಡ್‌ನ ರಾಮನಗರದಲ್ಲಿ ಈ ಪಳೆಯುಳಿಕೆ ಪತ್ತೆಯಾಗಿದ್ದು, ಈವರೆಗೂ ಗೊತ್ತಿರುವ ಯಾವುದೇ ವಾನರ ಪ್ರಭೇದೊಂದಿಗೆ ಈ ಪಳಿಯುಳಿಕೆ ಹೋಲಿಕೆಯಾಗುವುದಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

5,000 ವರ್ಷಗಳ ಹಳೆಯ 6 ಅಡಿ ಉದ್ದದ ಮಾನವ ಅಸ್ಥಿಪಂಜರ ಪತ್ತೆ

ಈ ಕುರಿತು ಮಾಹಿತಿ ನೀಡಿರುವ ನ್ಯೂಯಾರ್ಕ್ ಸಿಟಿ ಯೂನಿವರ್ಸಿಟಿಯ ಕ್ರಿಸ್ಟೋಫರ್ ಸಿ. ಗಿಲ್ಬರ್ಟ್, ರಾಮನಗರದಲ್ಲಿ ಇದುವರೆಗೂ ಗಿಬ್ಬನ್ ವಾನರ ಪ್ರಭೇದದ ಪಳೆಯುಳಿಕೆ ಕಂಡುಬಂದಿಲ್ಲವಾದ್ದರಿಂದ ಇದು ಗಿಬ್ಬನ್ ಪ್ರಭೇದದ ಅತ್ಯಂತ ಸಮೀಪದ ಪೂರ್ವಜ ಇರಬೇಕೆಂಬ ನಮ್ಮ ಊಹೆ ನಿಜವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ