ಆ್ಯಪ್ನಗರ

ಸರವಣ ಭವನದ ರಾಜಗೋಪಾಲ್‌ ನಿಧನ

73 ವರ್ಷದ ರಾಜಗೋಪಾಲ್‌ ಅವರನ್ನು ಮಂಗಳವಾರವಷ್ಟೇ ಸರಕಾರದ ಸ್ಟ್ಯಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆಂದು ವಿಜಯ್‌ ಹೆಲ್ತ್‌ ಸೆಂಟರ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

PTI 19 Jul 2019, 5:00 am
ಚೆನ್ನೈ: ಕೊಲೆ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 'ದೋಸೆ ಕಿಂಗ್‌' ಖ್ಯಾತಿಯ ಹೋಟೆಲ್‌ ಉದ್ಯಮಿ ಪಿ.ರಾಜಗೋಪಾಲ್‌ ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಚೆನ್ನೈ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 73 ವರ್ಷದ ರಾಜಗೋಪಾಲ್‌ ಅವರನ್ನು ಮಂಗಳವಾರವಷ್ಟೇ ಸರಕಾರದ ಸ್ಟ್ಯಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆಂದು ವಿಜಯ್‌ ಹೆಲ್ತ್‌ ಸೆಂಟರ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ ಅಸುನೀಗಿದ್ದಾರೆ. ತಮ್ಮ ಹೋಟೆಲ್‌ ನೌಕರನ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಳಗಾಗಿದ್ದರು. ಜುಲೈ 9ರಂದು ಪೊಲೀಸರಿಗೆ ಶರಣಾಗಿದ್ದ ಉದ್ಯಮಿ, ಪುಳಲ್‌ ಕೇಂದ್ರ ಕಾರಾಗೃಹ ಸೇರುತ್ತಿದ್ದಂತೆಯೇ ತೀವ್ರವಾಗಿ ಅಸ್ವಸ್ಥರಾಗಿದ್ದರು. ಸಣ್ಣ ಕಿರಾಣಿ ಅಂಗಡಿಯಿಂದ ಬದುಕು ಆರಂಭಿಸಿದ ರಾಜಗೋಪಾಲ್‌ ಮುಂದೆ 'ಸರವಣ ಭವನ' ಸಮೂಹ ರೆಸ್ಟೋರೆಂಟ್‌ಗಳನ್ನು ತಮಿಳುನಾಡು ಸೇರಿ ವಿಶ್ವದ ನಾನಾ ಕಡೆ ಸ್ಥಾಪಿಸಿದ್ದರು. ರುಚಿಕರ ಇಡ್ಲಿ ಹಾಗೂ ದೋಸೆ ಮೂಲಕವೇ ಸರವಣ ಭವನ ಹೋಟೆಲ್‌ಗಳು ಹೆಸರುವಾಸಿಯಾಗಿವೆ.
Vijaya Karnataka Web rajgopal

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ