ಆ್ಯಪ್ನಗರ

ಛೇ..90 ವರ್ಷದ ತಾಯಿಗೆ ಮಗನೇ ಶತ್ರುವಾದ!

90 ವರ್ಷದ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದ ಮಗನೇ, ತನ್ನ ಮನೆಯ ಬಾಲ್ಕನಿಯಲ್ಲಿ ಆಕೆಯನ್ನು ಬೆತ್ತಲೆಯಾಗಿ ಮಲಗಿಸಿದ ಕರುಣಾಜನಕ ಘಟನೆಯೊಂದು ಬೆಳಕಿಗೆ ಬಂದಿದೆ.

TNN 12 Apr 2017, 3:49 pm
ಕರೀಂನಗರ: ಒಂಭತ್ತು ತಿಂಗಳು ಹೊತ್ತು-ಹೆತ್ತು ತನ್ನ ಮಕ್ಕಳನ್ನು ಜೋಪಾನ ಮಾಡುವ ತಾಯಿಗೆ, ಮುಂದೊಂದು ದಿನ ಚಿಂತಾಜನಕ ಪರಿಸ್ಥಿತಿಯೊಂದು ಮಕ್ಕಳಿಂದಲೇ ಎದುರಾಗುತ್ತದೆ ಎಂದರೆ ಅದಕ್ಕಿಂತ ದುರದೃಷ್ಟ ಇನ್ಯಾವುದಿದೆ ಹೇಳಿ? 90 ವರ್ಷದ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದ ಮಗನೇ, ತನ್ನ ಮನೆಯ ಬಾಲ್ಕನಿಯಲ್ಲಿ ಆಕೆಯನ್ನು ಬೆತ್ತಲೆಯಾಗಿ ಮಲಗಿಸಿದ ಕರುಣಾಜನಕ ಘಟನೆಯೊಂದು ಬೆಳಕಿಗೆ ಬಂದಿದೆ.
Vijaya Karnataka Web retired headmaster left his 90 year old mother in a pathetic condition
ಛೇ..90 ವರ್ಷದ ತಾಯಿಗೆ ಮಗನೇ ಶತ್ರುವಾದ!


ನಿವೃತ್ತ ಹೆಡ್‌ಮಾಸ್ಟರ್‌ ರಾಮ್‌ ವೆಂಕಟ್‌ ನರ್ಸಯ್ಯಾ ತನ್ನ 90 ವರ್ಷದ ತಾಯಿಯನ್ನು ಒಂದೊಳ್ಳೆಯ ಬಟ್ಟೆಯನ್ನೂ ನೀಡದೇ ಬಿರುಬಿಸಿಲಿನಲ್ಲಿ ಬಾಲ್ಕನಿಯಲ್ಲೇ ಜೀವನ ಸವೆಸುವ ಕಠಿಣ ಶಿಕ್ಷೆಯನ್ನು ನೀಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವೃದ್ಧೆಯ ಚಿಂತಾಜನಕ ಫೋಟೋಗಳು ವೈರಲ್‌ ಆದ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.


ನಂತರ ಕರೀಂನಗರ್‌ ಜಿಲ್ಲೆಯ ಮಂಚೆರಿಯಲ್‌ ಪಟ್ಟಣದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ರಾಮ್‌ ವೆಂಕಟ್‌ ನಿವಾಸಕ್ಕೆ ತೆರಳಿದ ವಿಭಾಗೀಯ ಕಂದಾಯ ಅಧಿಕಾರಿಗೆ, ಪ್ರಾರಂಭದಲ್ಲಿ ಆತನಿಂದ ಪ್ರಬಲ ತಡೆ ಎದುರಾಯಿತು. ಆರ್‌ಡಿಓ ಜತೆಗೆ ಪೊಲೀಸ್‌ ಸಿಬ್ಬಂದಿಗಳೂ ಸೇರಿ, ಬಲವಂತವಾಗಿ ಬಾಗಿಲನ್ನು ತೆಗೆದು, ಚಿಂತಾಜನಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಮಗನ ಕಪಿಮುಷ್ಟಿಯಿಂದ ರಕ್ಷಿಸುವಲ್ಲಿ ಯಶಸ್ವಿಯಾಯಿತು.


ನಂತರ ಆ ವೃದ್ಧೆಯನ್ನು ಚಿಕಿತ್ಸೆಗಾಗಿ ಮಂಚೆರಿಯಲ್‌ ಸರಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ನಿರ್ವಹಣೆ ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯಿದೆ 2007ರ ಅಡಿಯಲ್ಲಿ ರಾಮ್‌ ವೆಂಕಟ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಇಡೀ ಕುಟುಂಬವನ್ನು ವಿಚಾರಣೆಗೆ ಒಳಪಡಿಸುವುದರ ಜತೆಗೆ 90 ವರ್ಷದ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಲಾಗುವುದು, ವೃದ್ಧಾಶ್ರಮದ ಖರ್ಚು ವೆಚ್ಚವನ್ನು ರಾಮ್‌ ವೆಂಕಟ್‌ ಪಿಂಚಣಿಯಿಂದಲೇ ಭರಿಸಲಾಗುವುದು' ಎಂದು ಮಂಚೆರಿಯಲ್‌ನ ವಿಭಾಗೀಯ ಕಂದಾಯ ಅಧಿಕಾರಿ (ಆರ್‌ಡಿಓ) ಪ್ರತಾಪ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ