ಆ್ಯಪ್ನಗರ

ನವರಾತ್ರಿ ವೇಳೆ ಮಾಂಸದಂಗಡಿ ಮುಚ್ಚುವಂತೆ ಹಾಕಿ ಬ್ಯಾಟ್‌ ಹಿಡಿದ ಗುಂಪೊಂದರ ದಾಂಧಲೆ

ಕೇಸರಿ ಶಾಲು ಧರಿಸಿದ್ದ ಯುವಕರ ಗುಂಪು ಗುರುಗ್ರಾಮದಲ್ಲಿ ದಾಂಧಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗುರುಗ್ರಾಮ ಪಶ್ಚಿಮದ ಡಿಸಿಪಿ ಯಾವುದೇ ದೂರುಗಳು ಬಂದಿಲ್ಲ ಎಂದಿದ್ದಾರೆ.

Indiatimes 7 Apr 2019, 2:22 pm
ಗುರುಗ್ರಾಮ: ನವರಾತ್ರಿ ಆರಂಭವಾಗಿದ್ದು, ಹರಿಯಾಣದ ಗುರುಗ್ರಾಮದಲ್ಲಿ ಮಾಂಸದ ಅಂಗಡಿಗಳ ಮೇಲೆ ದಾಳಿ ನಡೆಸಿದ ಹಿಂದೂ ಸೇನೆ ಕಾರ್ಯಕರ್ತರು ಎಂದು ಹೇಳಿಕೊಂಡ ಗುಂಪೊಂದು ಅಂಗಡಿಗಳನ್ನು ಮುಚ್ಚುವಂತೆ ಬೆದರಿಕೆ ಹಾಕಿದ್ದಾರೆ. ಹಾಕಿ ಬ್ಯಾಟ್‌ ಮತ್ತಿತರ ಮಾರಕ ಅಸ್ತ್ರಗಳನ್ನು ಹಿಡಿದ ಗುಂಪು ನವರಾತ್ರಿ ವೇಳೆ ಮಾಂಸದಂಗಡಿ ಮುಚ್ಚುವಂತೆ ಅಣತಿ ಮಾಡಿದ್ದಾರೆ.
Vijaya Karnataka Web Navratri


ಕೇಸರಿ ಶಾಲು ಧರಿಸಿದ್ದ ಯುವಕರ ಗುಂಪು ಗುರುಗ್ರಾಮದಲ್ಲಿ ದಾಂಧಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗುರುಗ್ರಾಮ ಪಶ್ಚಿಮದ ಡಿಸಿಪಿ ಯಾವುದೇ ದೂರುಗಳು ಬಂದಿಲ್ಲ ಎಂದಿದ್ದಾರೆ. ವೈರಲ್‌ ಆಗಿರುವ ವೀಡಿಯೋದಲ್ಲಿ ಹಿಂದೂ ಸೇನೆಯ ಕಾರ್ಯಕರ್ತರು ಅಂಗಡಿ ಮಾಲೀಕರನ್ನು ಅಂಗಡಿ ಮುಚ್ಚುವಂತೆ ಹೇಳುತ್ತಿರುವುದು ದಾಖಲಾಗಿದೆ. ಆದರೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ವೀಡಿಯೋ ಆಧರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಎನ್‌ಐಗೆ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷವು ಇಂತಹದ್ದೇ ವರದಿಗಳು ಗುರುಗ್ರಾಮದಲ್ಲಿ ಕೇಳಿಬಂದಿದ್ದವು. ನವರಾತ್ರಿ ದಿನಗಳಂದು ಮಾಂಸದಂಗಡಿಗಳನ್ನು ಮುಚ್ಚುವಂತೆ ಮಾರಕಾಸ್ತ್ರಗಳನ್ನು ಹಿಡಿದ ಗುಂಪು ಬೆದರಿಕೆ ಹಾಕಿದ್ದು, ಕೆಲವು ಮಾಲೀಕರ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ವರದಿಗಳಾಗಿದ್ದವು. ಅಕ್ಟೋಬರ್‌ 2018ರಲ್ಲಿ ಸಂಯುಕ್ತ ಹಿಂದೂ ಸಂಘರ್ಷ ಸಮಿತಿ ಎಂಬ ಬ್ಯಾನರ್‌ ಹಿಡಿದ 22 ಮಂದಿಯಿದ್ದ ಗುಂಪೊಂದು ನವರಾತ್ರಿ ಸಂದರ್ಭ ಎಲ್ಲ ಮಾಂಸದಂಗಡಿಗಳನ್ನು ಮುಚ್ಚಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.

ಗುರುಗ್ರಾಮದ ಹಿಂದೂ ಸೇನಾದ ಮುಖ್ಯಸ್ಥ ರಿತು ರಾಜ್‌, ನಗರದಲ್ಲಿ 250 ಮಾಂಸದ ಅಂಗಡಿಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪಿಟಿಐಗೆ ತಿಳಿಸಿರುವುದಾಗಿ ಇಂಡಿಯಾಟೈಮ್ಸ್‌ ವರದಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ