ಆ್ಯಪ್ನಗರ

ಬಿಹಾರದಲ್ಲಿ ಅಮಿತ್ ಶಾ ವರ್ಚುವಲ್ ರ‍್ಯಾಲಿ ವಿರೋಧಿಸಿ ಆರ್‌ಜೆಡಿಯಿಂದ ಪ್ರತಿಭಟನೆ!

ಬಿಹಾರ ವಿಧಾನಸಭೆ ಚುನಾವಣೆ ನಿಮಿತ್ತ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್ ರ‍್ಯಾ​ಲಿ ಉದ್ದೇಶಿಸಿ ಮಾತನಾಡಲಿದ್ದಾರ. ಅಮಿತ್ ಶಾ ಅವರ ಈ ವರ್ಚುವಲ್ ರ‍್ಯಾ​ಲಿ ವಿರೋಧಿಸಿ ಪ್ರತಿಪಕ್ಷ ಆರ್‌ಜೆಡಿ ಪ್ರತಿಭಟನೆ ನಡೆಸಿದೆ.

Vijaya Karnataka Web 7 Jun 2020, 3:11 pm
ಪಾಟ್ನಾ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಯು ಮೈತ್ರಿಕೂಟ, ತಂತ್ರಜ್ಞಾನ ಆಧಾರಿತ ಪ್ರಚಾರಕ್ಕೆ ಮೊರೆ ಹೋಗಿದೆ.
Vijaya Karnataka Web RJD
ಆರ್‌ಜೆಡಿ ನಾಯಕರ ಪ್ರತಿಭಟನೆ


ಅದರಂತೆ ಬಿಹಾರದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದು, ಈ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಆದರೆ ಅಮಿತ್ ಶಾ ವರ್ಚುವಲ್ ರ‍್ಯಾಲಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಆರ್‌ಜೆಡಿ, ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದೆ.


ರಾಜಧಾನಿ ಪಾಟ್ನಾದಲ್ಲಿ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರರಾದ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಹಾಗೂ ಲಾಲೂ ಪತ್ನಿ ರಾಬ್ಡಿ ದೇವಿ ಸೇರಿದಂತೆ ಆರ್‌ಜೆಡಿ ಕಾರ್ಯಕರ್ತರು ತಟ್ಟೆಗಳನ್ನುಬಾರಿಸುವ ಮೂಲಕ ಶಾ ಅವರ ವರ್ಚುವಲ್ ರ‍್ಯಾಲಿಗೆ ವಿರೋಧ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ಇದೆ. ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಆದರೆ ಅಧಿಕಾರಕ್ಕಾಗಿ ಬಿಜೆಪಿ ಹಾಗೂ ಜೆಡಿಯು ಅಮಿತ್ ಶಾ ಅವರ ವರ್ಚುವಲ್ ರ‍್ಯಾಲಿ ಆಯೋಜಸಿದೆ ಎಂದು ಈ ವೆಳೆ ತೇಜಸ್ವಿ ಪ್ರತಾಪ್ ಹರಿಹಾಯ್ದರು.

ಒಟ್ಟಿನಲ್ಲಿ ಇದೇ ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಈಗಿನಿಂದಲೇ ಕಾವು ಪಡೆದುಕೊಂಡಿದ್ದು, ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಜ್ಜಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ