ಆ್ಯಪ್ನಗರ

ಜಯಲಲಿತಾ ಕ್ಷೇತ್ರದಲ್ಲಿ ದಿನಕರನ್‌ಗೆ ಜಯ; ಆರ್‌ಕೆ ನಗರ ಮರು ಚುನಾವಣೆ ಮತಗಟ್ಟೆ ಸಮೀಕ್ಷೆ ವರದಿ

ಎಐಡಿಎಂಕೆ, ಡಿಎಂಕೆ ಹಿನ್ನಡೆ ಸಾಧ್ಯತೆ

Vijaya Karnataka Web 22 Dec 2017, 5:50 pm
ಚೆನ್ನೈ: ಭಾರಿ ಕುತೂಹಲ ಕೆರಳಿಸಿರುವ ಆರ್‌ಕೆ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಮೀಕ್ಷೆ ವರದಿಗಳು ಹೊರಬಿದ್ದಿದೆ.
Vijaya Karnataka Web rk nagar by election exit poll survey
ಜಯಲಲಿತಾ ಕ್ಷೇತ್ರದಲ್ಲಿ ದಿನಕರನ್‌ಗೆ ಜಯ; ಆರ್‌ಕೆ ನಗರ ಮರು ಚುನಾವಣೆ ಮತಗಟ್ಟೆ ಸಮೀಕ್ಷೆ ವರದಿ


ಜಯಲಲಿತಾ ನಿಧನದಿಂದ ತೆರವಾಗಿದ್ದ ಸ್ಥಾನಕ್ಕಾಗಿ ನಡೆದ ಉಪ ಚುನಾವಣೆಯಲ್ಲಿ ಟಿಟಿವಿ ದಿನಕರನ್‌ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮುನ್ನಡೆ ಸಾಧಿಸಲಿದ್ದಾರೆ ಎಂದು ಸಮೀಕ್ಷೆಗಳು ವರದಿ ನೀಡಿವೆ.

ಆರ್‌ಕೆ ನಗರ ವಿಧಾನಸಭೆ ಕ್ಷೇತ್ರದ ಮರು ಚುನಾವಣೆಯಲ್ಲಿ ಎಐಎಡಿಎಂಕೆಯ ಮಧುಸೂದನನ್ ಹಾಗೂ ಡಿಎಂಕೆಯ ಮರುಥು ಗಣೇಶ್‌ ಅವರನ್ನು ಹಿಂದಿಕ್ಕಿ ದಿನಕರನ್‌ ಗೆಲುವಿನ ದಡ ಸೇರಲಿದ್ದಾರೆ ಎಂದು ಸ್ಥಳೀಯ ವಾಹಿನಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಚುನಾವಣೆಗೆ ಮುನ್ನ ಜಯಲಲಿತಾ ವಿಡಿಯೋ ಬಿಡುಗಡೆಯಾಗಿದ್ದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶೇಕಡ 95 ಮಂದಿ ತಿಳಿಸಿದ್ದಾರೆ.

ಶೇಕಡ 90 ಮಂದಿ ಮತದಾನಕ್ಕೆ ಮುನ್ನ ಯಾವುದೇ ಹಣ ಸ್ವೀಕರಿಸಿಲ್ಲ ಎಂದು ತಿಳಿಸಿದ್ದರೆ, ಉಳಿದವರು ಹಣ ತೆಗೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಹಲವಾರು ಮಂದಿ ಆರ್‌ಕೆ ನಗರ ಕ್ಷೇತ್ರದಲ್ಲಿರುವ ನೀರಿನ ಸಮಸ್ಯೆ (ಶೇ.39), ನೈರ್ಮಲ್ಯ (ಶೇ.29), ಹದಗೆಟ್ಟ ರಸ್ತೆ (ಶೇ.14)ಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಡಿಸೆಂಬರ್‌ 24ರಂದು ಮತ ಎಣಿಕೆ ನಡೆಯಲಿದೆ.

Read This in Tamil

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ