ಆ್ಯಪ್ನಗರ

ವಾದ್ರಾ ಭೂಹಗರಣ: ಹರಿಯಾಣಾ ಮಾಜಿ ಸಿಎಂಗೆ ಸಮನ್ಸ್‌

ವಾದ್ರಾ ಭೂ ಹಗರಣ ಸಂಬಂಧ ಹರಿಯಾಣಾದ ಮಾಜಿ ಸಿಎಂ ಭೂಪಿಂದರ್‌ ಸಿಂಗ್‌ ಹೂಡಗೆ ತನಿಖಾ ಆಯೋಗ ಸಮನ್ಸ್‌ ನೀಡಿದೆ.

ಏಜೆನ್ಸೀಸ್ 17 Mar 2016, 12:06 pm
ಗುರ್ಗಾಂವ್‌: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರ ಹಾಗೂ ರಿಯಲ್ ಎಸ್ಟೇಟ್ ಕಂಪನಿ ಡಿಎಲ್‌ಎಫ್ ನಡುವಿನ ವಿವಾದಿತ ಭೂ ಖರೀದಿ ಒಪ್ಪಂದದ ತನಿಖೆ ನಡೆಸಿರುವ ಸಮಿತಿ, ಹರಿಯಾಣಾದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡ ಅವರಿಗೆ ಬುಧವಾರ ಸಮನ್ಸ್‌ ನೀಡಿದೆ.
Vijaya Karnataka Web robert vadra land case probe panel summons ex haryana cm bhupinder singh hooda
ವಾದ್ರಾ ಭೂಹಗರಣ: ಹರಿಯಾಣಾ ಮಾಜಿ ಸಿಎಂಗೆ ಸಮನ್ಸ್‌


ವಾದ್ರಾ ಅವರ ಸ್ಕೈಲೈಟ್‌ ಹಾಸ್ಪಿಟಾಲಿಟಿ ಸೇರಿದಂತೆ ಹಲವು ಖಾಸಗಿ ಕಂಪನಿಗಳಿಗೆ ವಾಣಿಜ್ಯ ಭೂಮಿ ಪರವಾನಗಿ ನೀಡಿದ ವಿಚಾರವಾಗಿ ಸಮಿತಿ ತನಿಖೆ ನಡೆಸಿದೆ. ಹಗರಣ ಕುರಿತು ಹೇಳಿಕೆ ನೀಡಲು ಮಾರ್ಚ್‌ 23ರಂದು ಆಯೋಗದ ಎದುರು ಹಾಜರಾಗುವಂತೆ 2015ರಲ್ಲಿ ನೇಮಿಸಿದ್ದ ನ್ಯಾಯಮೂರ್ತಿ ಎಸ್‌.ಎನ್‌ ದಿಂಗ್ರಾ ಸಮಿತಿ ಹೂಡಗೆ ಸಮನ್ಸ್‌ ನೀಡಿದೆ.
ಈ ಸಂಬಂಧ ಹೇಳಿಕೆ ದಾಖಲಿಸಲು ಹರಿಯಾಣಾದ ಮುಖ್ಯ ಕಾರ್ಯದರ್ಶಿ ದೀಪಿಂದರ್‌ ಸಿಂಗ್‌ ದೇಸಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳಿಗೆ ಆಯೋಗ ಕಳೆದ ತಿಂಗಳು ಸಮನ್ಸ್‌ ನೀಡಿತ್ತು.

2015 ಮೇನಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನ್ಯಾಯಮೂರ್ತಿ ದಿಂಗ್ರಾ ಅವರ ಸಲಹೆ ಮೇರೆಗೆ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ