ಆ್ಯಪ್ನಗರ

ಪತ್ನಿಯಿಂದಲೇ ರೋಹಿತ್‌ ಕೊಲೆ

. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅಪೂರ್ವಾ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರಂಭದಲ್ಲಿ ತನಿಖೆಯ ದಿಕ್ಕುತಪ್ಪಿಸಲು ಆಕೆ ಪ್ರಯತ್ನಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯು, ಇದು ಕೊಲೆ ಎಂಬುದನ್ನು ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ.

Vijaya Karnataka 25 Apr 2019, 5:00 am
ಹೊಸದಿಲ್ಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಎನ್‌.ಡಿ.ತಿವಾರಿ ಪುತ್ರ ರೋಹಿತ್‌ ಶೇಖರ್‌ ಕೊಲೆ ಪ್ರಕರಣ ಭೇದಿಸಿರುವ ದಿಲ್ಲಿ ಪೊಲೀಸರು, ರೋಹಿತ್‌ ಪತ್ನಿ ಅಪೂರ್ವಾ ಶುಕ್ಲಾ ಅವರನ್ನು ಬಂಧಿಸಿದ್ದಾರೆ.
Vijaya Karnataka Web rohit


ಎಂಟು ದಿನದ ಹಿಂದೆ ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ ರೋಹಿತ್‌ ನಿಗೂಢವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅಪೂರ್ವಾ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರಂಭದಲ್ಲಿ ತನಿಖೆಯ ದಿಕ್ಕುತಪ್ಪಿಸಲು ಆಕೆ ಪ್ರಯತ್ನಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯು, ಇದು ಕೊಲೆ ಎಂಬುದನ್ನು ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ.

''ಕೊಲೆಯನ್ನು ಮನೆಯವರೇ ನಡೆಸಿದ್ದಾರೆ ಎನ್ನುವುದು ನಮ್ಮ ನಂಬಿಕೆಯಾಗಿತ್ತು. ಏಕೆಂದರೆ ಕೊಲೆ ನಡೆದ ದಿನ ಹೊರಗಿನವರಾರೂ ಮನೆಗೆ ಬಂದಿರಲಿಲ್ಲ. ಏ.16ರಂದು ರೋಹಿತ್‌ ಅವರ ತಾಯಿ ನಿಯಮಿತ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅದೇದಿನ ಸಂಜೆ ರೋಹಿತ್‌ ಕೊಠಡಿ ಪ್ರವೇಶಿಸಿದ ಅಪೂರ್ವಾ, ಮದ್ಯಪಾನ ಮಾಡುತ್ತಿದ್ದ ರೋಹಿತ್‌ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸಾಕ್ಷ್ಯಗಳನ್ನೂ ನಾಶಪಡಿಸಿದ್ದಾರೆ. ಇದೆಲ್ಲಾ ಕೇವಲ ಒಂದೂವರೆ ಗಂಟೆಯಲ್ಲಿ ನಡೆದುಹೋಗಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ. ಅಪೂರ್ವಾ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

''ಅಪೂರ್ವಾ ಹಾಗೂ ರೋಹಿತ್‌ ವೈವಾಹಿಕ ಜೀವನ ಸ್ವಲ್ಪವೂ ಚೆನ್ನಾಗಿರಲಿಲ್ಲ. ಮದುವೆಯಾದ ಮೊದಲ ದಿನದಿಂದಲೇ ಇಬ್ಬರೂ ಕಿತ್ತಾಡುತ್ತಿದ್ದರು. ಸೊಸೆ ಮತ್ತು ಆಕೆಯ ತವರು ಮನೆಯವರು ಧನದಾಹಿಗಳಾಗಿದ್ದು, ಮಗನ ಆಸ್ತಿ ಲಪಟಾಯಿಸಲು ಸಂಚು ರೂಪಿಸುತ್ತಿದ್ದರು,'' ಎಂದು ರೋಹಿತ್‌ ತಾಯಿ ಹೇಳಿಕೆ ನೀಡಿದ್ದರು. ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಮನೆಗೆಲಸದಾಳು ಭೋಲು ಮಂಡಲ್‌, ಕೊಲೆ ನಡೆದ ದಿನ ರಾತ್ರಿ ತಾವು ರೋಹಿತ್‌ ಅವರನ್ನು ನೋಡಿದಾಗ ಅವರ ಮೂಗಿನಿಂದ ರಕ್ತ ಒಸರುತ್ತಿತ್ತು ಎಂದು ತಿಳಿಸಿದ್ದಾರೆ.


ಆರೋಪಿ ಅಪೂರ್ವಾ ಶುಕ್ಲಾ ಬಂಧನ


- ಆರಂಭದಲ್ಲಿ ತನಿಖೆ ದಿಕ್ಕುತಪ್ಪಿಸಲು ಯತ್ನಿಸಿದ್ದ ಅಪೂರ್ವಾ ಶುಕ್ಲಾ

- ಕೃತ್ಯ ನಡೆಸಿ 90 ನಿಮಿಷದಲ್ಲಿ ಸಾಕ್ಷ್ಯ ನಾಶಪಡಿಸಿದ್ದ ಚಾಲಾಕಿ

- ವೈವಾಹಿಕ ಜೀವನದ ಅತೃಪ್ತಿಯೇ ಕೊಲೆಗೆ ಕಾರಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ