ಚೆನ್ನೈ: ತಮಿಳುನಾಡಿನ ಬಡ ಕುಟುಂಬಗಳಿಗೆ ಈ ಬಾರಿಯ ಪೊಂಗಲ್ (ಸಂಕ್ರಾತಿ) ಉಡುಗೊರೆಯಾಗಿ 1 ಸಾವಿರ ರೂ. ನಗದು ಹಾಗೂ 'ಗಿಫ್ಟ್ ಹ್ಯಾಂಪರ್' ದೊರೆಯಲಿದೆ. ತಮಿಳುನಾಡು ಸರಕಾರದ ಈ ಹೊಸ ಯೋಜನೆಯನ್ನು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಬುಧವಾರ ವಿಧಾನಮಂಡಲ ಅಧಿವೇಶನದ ವೇಳೆ ಘೋಷಿಸಿದ್ದಾರೆ. ಗಜ ಚಂಡಮಾರುತದಿಂದ ತತ್ತರಿಸಿರುವ ಜನತೆಗೆ ಸರಕಾರ ನೆರವಿನ ಹಸ್ತ ಚಾಚಿದ್ದು, ಕಾವೇರಿ ಜಲಾನಯನ ಪ್ರದೇಶ ಹಾಗೂ ರಾಜ್ಯದ ಬರಪೀಡಿತ ಜಿಲ್ಲೆಗಳ ಜನತೆಗೆ ಹಬ್ಬ ಆಚರಿಸಲು ಇದರಿಂದ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ. 1 ಸಾವಿರ ರೂ. ನಗದಿನ ಜತೆಗೆ ಅಕ್ಕಿ, ಸಕ್ಕರೆ, ಗೋಡಂಬಿ, ಏಲಕ್ಕಿ ಹಾಗೂ ಕಬ್ಬನ್ನು ಒಳಗೊಂಡ ಬುಟ್ಟಿಯನ್ನು ಪಡಿತರ ಕಾರ್ಡ್ದಾರರಿಗೆ ವಿತರಿಸಲಾಗುವುದು.
ತಮಿಳುನಾಡು ಜನತೆಗೆ ಪೊಂಗಲ್ ಉಡುಗೊರೆ
1 ಸಾವಿರ ರೂ. ನಗದಿನ ಜತೆಗೆ ಅಕ್ಕಿ, ಸಕ್ಕರೆ, ಗೋಡಂಬಿ, ಏಲಕ್ಕಿ ಹಾಗೂ ಕಬ್ಬನ್ನು ಒಳಗೊಂಡ ಬುಟ್ಟಿಯನ್ನು ಪಡಿತರ ಕಾರ್ಡ್ದಾರರಿಗೆ ವಿತರಿಸಲಾಗುವುದು.
Vijaya Karnataka 3 Jan 2019, 5:00 am