ಆ್ಯಪ್ನಗರ

ಆರ್‌ಎಸ್‌ಎಸ್‌ ಮುಖಂಡನ ಮೇಲೆ ದಾಳಿ: ಕಠಿಣ ಕ್ರಮಕ್ಕೆ ಬಿಜೆಪಿ ಒತ್ತಾಯ

ಪಂಜಾಬ್‌ ರಾಜ್ಯದ ಆರೆಸ್ಸೆಸ್‌ ಸಹ ಸಂಘಚಾಲಕ ಜಗದೀಶ್‌ ಗಗ್ನೇಜಾ ಮೇಲೆ ಶನಿವಾರ ಜಲಂಧರ್‌ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಪಂಜಾಬ್‌ ಸರಕಾರವನ್ನು ಭಾನುವಾರ ಒತ್ತಾಯಿಸಿದೆ.

ಏಜೆನ್ಸೀಸ್ 8 Aug 2016, 4:00 am

ಚಂಡೀಗಢ: ಪಂಜಾಬ್‌ ರಾಜ್ಯದ ಆರೆಸ್ಸೆಸ್‌ ಸಹ ಸಂಘಚಾಲಕ ಜಗದೀಶ್‌ ಗಗ್ನೇಜಾ ಮೇಲೆ ಶನಿವಾರ ಜಲಂಧರ್‌ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಪಂಜಾಬ್‌ ಸರಕಾರವನ್ನು ಭಾನುವಾರ ಒತ್ತಾಯಿಸಿದೆ.

'ಆರ್‌ಎಸ್‌ಎಸ್‌ ನಾಯಕರ ಮೇಲೆ ನಡೆದ ದಾಳಿ ಕುರಿತಂತೆ ನಾವು ಸರಕಾರದೊಂದಿಗೆ ಮಾತನಾಡಿದ್ದೇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ದಾಳಿ ಹಿಂದೆ ಇರುವ ವ್ಯಕ್ತಿಗಳು ಯಾರೆಂಬುದನ್ನು ಬಯಲು ಮಾಡಬೇಕು,' ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್‌ ಚುಗ್‌ ಒತ್ತಾಯಿಸಿದ್ದಾರೆ.

ಆರ್‌ಎಸ್‌ಎಸ್‌ ಪಂಜಾಬ್‌ ಘಟಕದ ಉಪಾಧ್ಯಕ್ಷರಾಗಿರುವ ಗಗ್ನೇಜಾ ಮೇಲೆ ಜಲಂಧರ್‌ನಲ್ಲಿ ಶನಿವಾರ ಸಂಜೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂರು ಗುಂಡುಗಳು ಗಗ್ನೇಜಾ ದೇಹ ಹೊಕ್ಕಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಎಂ ಖಂಡನೆ:

Vijaya Karnataka Web rss leader shot at in jalandhar critical with bullet injuries in abdomen
ಆರ್‌ಎಸ್‌ಎಸ್‌ ಮುಖಂಡನ ಮೇಲೆ ದಾಳಿ: ಕಠಿಣ ಕ್ರಮಕ್ಕೆ ಬಿಜೆಪಿ ಒತ್ತಾಯ


ಈ ನಡುವೆ ಆರ್‌ಎಸ್‌ಎಸ್‌ ನಾಯಕನ ಮೇಲಿನ ದಾಳಿಯನ್ನು ಪಂಜಾಬ್‌ ಸಿಎಂ ಪ್ರಕಾಶ್‌ ಸಿಂಗ್‌ ಬಾದಲ್‌ ಖಂಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನಡೆಯುವ ಸಮಾಜ ವಿರೋಧಿ ಕೃತ್ಯಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ