ಆ್ಯಪ್ನಗರ

ಉತ್ತರಾಖಂಡದಲ್ಲಿ ಮದರಸಾ ಆರಂಭಿಸಲಿರುವ ಆರ್‌ಎಸ್ಎಸ್

ಧಾರ್ಮಿಕ ಶಿಕ್ಷಣ, ಶಾಲಾ ಶಿಕ್ಷಣ, ಕಂಪ್ಯೂಟರ್ ಶಿಕ್ಷಣವನ್ನೊಳಗೊಂಡಂತೆ ಡೆಹ್ರಾಡೂನ್‌ನಲ್ಲಿ ಮದರಸಾ ಸ್ಥಾಪಿಸುವ ಇರಾದೆ ಸಂಘದ ಅಂಗಸಂಸ್ಥೆಯಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್‌ನದ್ದು.

TIMESOFINDIA.COM 21 May 2019, 1:02 pm
ಡೆಹ್ರಾಡೂನ್/ಹರಿದ್ವಾರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸದ್ಯದಲ್ಲಿಯೇ ಉತ್ತರಾಖಂಡದಲ್ಲಿ ಮದರಸಾವನ್ನು ಆರಂಭಿಸಲಿದೆ.
Vijaya Karnataka Web Madarasa


ಧಾರ್ಮಿಕ ಶಿಕ್ಷಣ, ಶಾಲಾ ಶಿಕ್ಷಣ, ಕಂಪ್ಯೂಟರ್ ಶಿಕ್ಷಣವನ್ನೊಳಗೊಂಡಂತೆ ಡೆಹ್ರಾಡೂನ್‌ನಲ್ಲಿ ಮದರಸಾ ಸ್ಥಾಪಿಸುವ ಇರಾದೆ ಸಂಘದ ಅಂಗಸಂಸ್ಥೆಯಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್‌ನದ್ದು.

ಎಲ್ಲವು ಅಂದುಕೊಂಡಂತೆ ಆದರೆ ಮುಸ್ಲಿಂ ರಾಷ್ಟ್ರೀಯ ಮಂಚ್‌ನಿಂದ ನಡೆಸಲ್ಪಡುವ 6ನೇ ಮದರಸಾ ಇದಾಗಲಿದೆ. ಈಗಾಗಲೇ ಉತ್ತರ ಪ್ರದೇಶದ ಮೊರಾದಾಬಾದ್, ಬುಲಂದ್‌ಶಹರ್, ಹಾಪುರದಲ್ಲಿ ತಲಾ ಒಂದು ಮತ್ತು ಮುಝಪ್ಫರ್‌ನಗರದಲ್ಲಿ ಎರಡು ಮದರಸಾಗಳನ್ನು ಸಂಘದ ಅಡಿಯಲ್ಲಿ ನಡೆಸಲಾಗುತ್ತಿದೆ.

ನಿವೇಶನವನ್ನು ಈಗಾಗಲೇ ಖರೀದಿಸಲಾಗಿದ್ದು, 6 ತಿಂಗಳೊಳಗೆ ಮದರಸಾ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳಿಂದ ಅತ್ಯಲ್ಪ ಶುಲ್ಕಗಳನ್ನು ಪಡೆದುಕೊಳ್ಳಲಾಗುವುದು . ಆರಂಭದಲ್ಲಿ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ. ಬಳಿಕ ತರಗತಿಗಳನ್ನು ವಿಸ್ತರಿಸಲಾಗುವುದು ಎಂದು ಸಂಘದ ಮೂಲಗಳು ತಿಳಿಸಿವೆ.

"ನಮ್ಮ ಮದರಸಾದಲ್ಲಿ ಓದುವ ವಿದ್ಯಾರ್ಥಿಗಳು ಕೇವಲ ಖಾಜಿ (ಷರಿಯಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು), ಕಾರಿಸ್ ( ಮದರಸಾದ ಧಾರ್ಮಿಕ ಶಿಕ್ಷಕ) ಇಮಾಂ (ಸಾಮುದಾಯಿಕ ನಮಾಜ್ ನಾಯಕ), ಮೌಲಾನಾಸ್ ಮತ್ತು ಮುಫ್ತಿ (ಫತ್ವಾ ಹೊರಡಿಸುವವರು) ಆಗುವುದಿಲ್ಲ . ಎಂಜಿನಿಯರುಗಳು, ವೈದ್ಯರು, ವಿಜ್ಞಾನಿಗಳು ಮತ್ತು ಇತರ ವೃತ್ತಿಪರ ಪದವೀಧರರಾಗಿಯೂ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಗುರಿ ನಮ್ಮದು, ಎಂದು ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಂ.ಆರ್.ಎಂ.ನ ರಾಷ್ಟ್ರೀಯ ಉಪಸಂಸ್ಥೆ ಪ್ರಧಾನ ಕಾರ್ಯದರ್ಶಿ ತುಷಾರ್ ಕಾಂತ್ ಹಿಂದೂಸ್ತಾನಿ ಹೇಳುತ್ತಾರೆ.

ಮಾನವತಾವಾದ ಮತ್ತು ರಾಷ್ಟ್ರೀಯತಾವಾದವನ್ನು ಬೆಳೆಸುವುದೇ, ಹಿಂದೂಸ್ತಾನಿ ಮದರಸಾದ ಗುರಿ. ಎಲ್ಲ ಧರ್ಮದ ಜನರು, ಬಡವ, ಶ್ರೀಮಂತ ಎಂಬ ವರ್ಗೀಕರಣವಿಲ್ಲದೆ ಎಲ್ಲ ವರ್ಗದ ಜನರು ಇಲ್ಲಿ ಪ್ರವೇಶಾತಿ ಪಡೆಯಬಹುದೆಂದು, ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ