ಆ್ಯಪ್ನಗರ

ಕಣ್ಣೂರು ಬಿಜೆಪಿ ಕಚೇರಿಗೆ ಬಾಂಬ್‌, ಆರೆಸ್ಸೆಸ್‌ ಕಾರ್ಯಕರ್ತನ ಮೇಲೆ ದಾಳಿ

ಭಾರತೀಯ ಜನತಾಪಕ್ಷವು ಕೇರಳದಲ್ಲಿ ತನ್ನ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ 'ಜನರಕ್ಷಾ ಯಾತ್ರೆ' ನಡೆಸುತ್ತಿರುವ ನಡುವೆಯೇ ರಾಜ್ಯದಲ್ಲಿ ...

PTI 12 Oct 2017, 5:01 am

ಕಣ್ಣೂರು: ಭಾರತೀಯ ಜನತಾಪಕ್ಷವು ಕೇರಳದಲ್ಲಿ ತನ್ನ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ 'ಜನರಕ್ಷಾ ಯಾತ್ರೆ' ನಡೆಸುತ್ತಿರುವ ನಡುವೆಯೇ ರಾಜ್ಯದಲ್ಲಿ ಹಿಂಸಾ ಕೃತ್ಯಗಳು ಮುಂದುವರಿಯುತ್ತಿವೆ. ಕಣ್ಣೂರಿನ ಬಿಜೆಪಿ ಕಚೇರಿಗೆ ದುಷ್ಕರ್ಮಿಗಳು ಬಾಂಬ್‌ ದಾಳಿ ನಡೆಸಲಾಗಿದ್ದು, ತಲಶ್ಶೇರಿಯಲ್ಲಿ 36 ವರ್ಷದ ಆರೆಸ್ಸೆಸ್‌ ಕಾರ್ಯಕರ್ತನ ಮೇಲೆ ದಾಳಿ ನಡೆಸಲಾಗಿದೆ.

Vijaya Karnataka Web rss worker attacked bombs hurled at bjp office in kannur district
ಕಣ್ಣೂರು ಬಿಜೆಪಿ ಕಚೇರಿಗೆ ಬಾಂಬ್‌, ಆರೆಸ್ಸೆಸ್‌ ಕಾರ್ಯಕರ್ತನ ಮೇಲೆ ದಾಳಿ


ತಲ ರಿಯಲ್ಲಿ ಮಂಗಳವಾರ ಸಂಜೆ ರಿಕ್ಷಾ ಚಾಲಕರಾಗಿರುವ ಕೆ.ಎಂ. ಸುರೇಸ್‌ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಇದೊಂದು ರಾಜಕೀಯ ವೈಷಮ್ಯದ ದಾಳಿ ಎನ್ನಲಾಗುತ್ತಿದೆ. ಮಂಗಳವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ತಲವಾರು, ಚೂರಿ ಮತ್ತು ಕಬ್ಬಿಣದ ರಾಡ್‌ಗಳು ಪತ್ತೆಯಾಗಿದ್ದವು.

ಬುಧವಾರ ಮಧ್ಯಾಹ್ನ 12.30ರ ಹೊತ್ತಿಗೆ ಕಣ್ಣೂರಿನ ಪಾಟ್ಯಂನಲ್ಲಿರುವ ಬಿಜೆಪಿ ಕಚೇರಿಗೆ ಬಾಂಬ್‌ಗಳನ್ನು ಎಸೆಯಲಾಗಿದೆ. ಇದರಿಂದ ಪೀಠೋಪಕರಣಗಳು ಧ್ವಂಸಗೊಂಡಿದ್ದು ಯಾರಿಗೂ ಗಾಯಗಳಾಗಿಲ್ಲ.

ಅಕ್ಟೋಬರ್‌ 9ರಂದು ಸಿಪಿಎಂ ಕಾರ್ಯಕರ್ತರ ಮೇಲೆ ಆರೆಸ್ಸೆಸ್‌ ಕಾರ್ಯಕರ್ತರು ಕಚ್ಚಾ ಬಾಂಬ್‌ ಎಸೆದಿರುವುದನ್ನು ಪ್ರತಿಭಟಿಸಿ ಪಕ್ಷವು ಹರತಾಳ ನಡೆಸಿದ ಬೆನ್ನಿಗೇ ಈ ದಾಳಿ ನಡೆದಿದೆ.

ರಾಜ್ಯದಲ್ಲಿ 'ಎಡರಂಗದ ದೌರ್ಜನ್ಯ'ದ ಬಗ್ಗೆ ರಾಷ್ಟ್ರದ ಗಮನ ಸೆಳೆಯಲು ಬಿಜೆಪಿ ಅಕ್ಟೋಬರ್‌ 3ರಿಂದ ಜನರಕ್ಷಾ ಯಾತ್ರೆ ನಡೆಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ