ಆ್ಯಪ್ನಗರ

ಬಂಗಾಳದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ, 8 ತಿಂಗಳ ಗರ್ಭಿಣಿ ಪತ್ನಿ ಮತ್ತು 6 ವರ್ಷದ ಮಗನ ಬರ್ಬರ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ನಡೆದ 8 ತಿಂಗಳ ಗರ್ಭಿಣಿ, 6 ವರ್ಷದ ಪುಟಾಣಿ ಬಾಲಕ ಮತ್ತು ಆರ್‌ಎಸ್ಎಸ್‌ ಕಾರ್ಯಕರ್ತನ ಹತ್ಯೆ ಮುಂಜಾನೆ ವೇಳೆಯೇ ನಡೆದಿದ್ದು ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಉದ್ಭವವಾಗಿವೆ.

Times Now 10 Oct 2019, 5:43 pm
ಕೋಲ್ಕತ: ರಾಷ್ಟ್ರವೇ ಬೆಚ್ಚಿ ಬೀಳಿಸುವಂತಹ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಕಾರ್ಯಕರ್ತ, ಆತನ ಗರ್ಭಿಣಿ ಪತ್ನಿ ಮತ್ತು 6 ವರ್ಷದ ಮಗನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮುರ್ಷಿರಬಾದ್‌ನ ಜಿಯಾಗಂಜ್‌ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ದುಷ್ಕರ್ಮಿಗಳು 8 ತಿಂಗಳ ಗರ್ಭಿಣಿ ಎಂಬುದನ್ನು ಲೆಕ್ಕಿಸದೆ, 6 ವರ್ಷದ ಬಾಲಕ ಎಂಬ ಕರುಣೆಯನ್ನು ತೋರದೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.
Vijaya Karnataka Web Bengal Murder


ಹತ್ಯೆಗೊಳಗಾದ ಆರ್‌ಎಸ್‌ಎಸ್‌ ಕಾರ್ಯಕರ್ತ ಬಂಧು ಪ್ರಕಾಶ್‌ ಪಾಲ್‌ (35), ಅವರ ಪತ್ನಿ ಬ್ಯೂಟಿ ಮಂಡಲ್‌ ಪಾಲ್‌ (30) ಮತ್ತು ಆರು ವರ್ಷದ ಮಗ ಅಂಗನ್‌ ಬಂಧು ಪಾಲ್‌ ಎಂದು ಪೊಲೀಸರು ತಿಳಿಸಿದ್ದಾರೆ. ಮಂಡಲ್‌ ಪಾಲ್‌ ಗರ್ಭಿಣಿಯಾಗಿದ್ದು, ಮಗುವಿಗೆ 8 ತಿಂಗಳಾಗಿತ್ತು ಎಂಬ ಮಾಹಿತಿಯನ್ನು ನೀಡಿದ್ದಾರೆ.

ರಕ್ತಸಿಕ್ತ ಮೃತದೇಹಗಳ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ. ಆರ್‌ಎಸ್ಎಸ್‌ ಕಾರ್ಯಕರ್ತನ ಕುಟುಂಬದ ಸಾಮೂಹಿಕ ಹತ್ಯೆ ಕುರಿತು ರಾಷ್ಟ್ರಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳಲ್ಲಿ ಚಿತ್ರಗಳು ವೈರಲ್‌ ಆದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ, ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಯಾವುದೇ ಉದಾರವಾದಿಗಳು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಸೆಲೆಕ್ಟಿವಿಸಮ್‌ ವಾಕರಿಕೆ ತರಿಸುವಂತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಸಂಕಷ್ಟ ಇದ್ದರೆ ‘ದೀದಿಗೆ ಹೇಳಿ‘!

ಬಿಜೆಪಿ ನಾಯಕ ಬಾಬುಲ್‌ ಸುಪ್ರಿಯೋ ಮಮತಾ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ಮಾ, ಮಾತಿ, ಮನುಷ್ಯ ಎಂದರೆ ಏನು ಬೇಕಿದ್ದರೂ ಆಗುತ್ತದೆಯೇ? ಎಂದು ಸಿಎಂ ಮಮತಾ ಅವರನ್ನು ಪ್ರಶ್ನಿಸಿದ್ದಾರೆ. ಒಂದು ಕಡೆ ದುರ್ಗಾ, ಕಾಳಿ ಮತೆಯನ್ನು ಪೂಜಿಸಲಾಗುತ್ತದೆ. ಮತ್ತೊಂದು ಕಡೆ ತಾಯಿ ಮತ್ತು ಆಕೆಯ ಮಕ್ಕಳನ್ನು ಹತ್ಯೆ ಮಾಡಲಾಗುತ್ತದೆ. ಇಂತಹ ಬಂಗಾಳ ನಮಗೆ ಬೇಕೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ತ್ರಿವಳಿ ಹತ್ಯೆ ಕುರಿತು ಉನ್ನತ ತನಿಖೆ ನಡೆಸಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಅವರಿಗೆ ಬಿಜೆಪಿ ಶಾಸಕ ರಾಜಾ ಸಿಂಗ್‌ ಮನವಿ ಮಾಡಿದ್ದಾರೆ. ಜಾತ್ಯಾತೀತ ನಾಯಕರು ಮತ್ತು ಉದಾರವಾದಿಗಳು ಈಗ ಎಲ್ಲಿ ಅಡಗಿದ್ದಾರೆ? ಎಂದು ರಾಜಾ ಸಿಂಗ್‌ ಪ್ರಶ್ನೆ ಮಾಡಿದ್ದಾರೆ.

'ಮಮತಾ ಬ್ಯಾನರ್ಜಿ ಜಿಂದಾಬಾದ್' ಎನ್ನದ ವಿದ್ಯಾರ್ಥಿನಿಯರ ಮೇಲೆ ಟಿಎಂಸಿ ಗೂಂಡಾಗಳ ದಾಳಿ

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಗುಂಪು ಘರ್ಷಣೆಗಳು ಭಾರಿ ಸದ್ದು ಮಾಡಿದ್ದವು. ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆದಾಗ ಟಿಎಂಸಿ ಕಾರ್ಯಕರ್ತರ ವಿರುದ್ಧ ಆಪಾದನೆ ಮಾಡಲಾಗಿತ್ತು. ಅದರಂತೆ ಟಿಎಂಸಿ ಕಾರ್ಯಕರ್ತರು ಹತ್ಯೆಗೊಳಗಾದಾಗ ಬಿಜೆಪಿ ಕಾರ್ಯಕರ್ತರನ್ನು ದೂಷಿಸಲಾಗಿತ್ತು.

ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಪಶ್ಚಿಮ ಬಂಗಾಳದಲ್ಲಿ ಭಾಷಣ ಮಾಡುವ ಸಂದರ್ಭ ರಾಜ್ಯವು ಜಂಗಲ್‌ ರಾಜ್‌ ಮತ್ತು ರಾಜ್ಯ ಉಗ್ರರ ಕಪಿಮುಷ್ಠಿಯಲ್ಲಿದೆ. ರಾಜಕೀಯ ವಿರೋಧಿಗಳ ಮೇಲೆ ದೈಹಿಕ ದಾಳಿ ನಡೆಸಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಆರೋಪ ಮಾಡಿದ್ದರು.

ನಟಿ, ಸಂಸದೆ ನುಸ್ರತ್ ಜಹಾನ್ ಮದುವೆ ಆರತಕ್ಷತೆ ಫೋಟೋಗಳು ವೈರಲ್

ಯಾರು ತೃಣಮೂಲ ಕಾಂಗ್ರೆಸ್‌ ಸಿದ್ಧಾಂತವನ್ನು ವಿರೋಧಿಸುತ್ತಾರೋ ಅವರನ್ನು ಹತ್ಯೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪನ್ನು ಜೆಪಿ ನಡ್ಡಾ ಮಾಡಿದ್ದರು. ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ಜೆಪಿ ನಡ್ಡಾ, ಪೊಲೀಸರು ಸರಿಯಾಗಿ ದೂರನ್ನು ದಾಖಲಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರು.

ಸಿಂಧೂರ, ಮಂಗಳಸೂತ್ರ ಧರಿಸಿ ಧರ್ಮಾಂಧರಿಗೆ ಸಡ್ಡು ಹೊಡೆದ ಸಂಸದೆ ನುಸ್ರತ್‌ ಜಹಾನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ