ಆ್ಯಪ್ನಗರ

15ನೇ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ ಹೋದವ 42 ವರ್ಷಗಳ ಬಳಿಕ ವಾಪಸ್ ಬಂದ

15 ವರ್ಷದ ವಯಸ್ಸಿನ ಮುರಳೀಧರ ಎಂಬಾತನೇ ಈ ರೀತಿ ಮನೆ ಬಿಟ್ಟು ಓಡಿಹೋದ ಹುಡುಗನಾಗಿದ್ದು, ಕೋಟಾದಲ್ಲಿ ಪತ್ತೆಯಾಗಿದ್ದಾನೆ. ಆಪರೇಶನ್ ಮುಸ್ಕಾನ್ ಕಾರ್ಯಾಚರಣೆಯಲ್ಲಿ ಈತನನ್ನು ಪತ್ತೆಮಾಡಿದ ಪೊಲೀಸರು ಕುಟುಂಬದ ವಶಕ್ಕೆ ಒಪ್ಪಿಸಿದ್ದಾರೆ. ಇಷ್ಟು ವರ್ಷಗಳ ಬಳಿಕ ಮನೆಗೆ ಮರಳಿದ ಮಗನನ್ನು ಕಂಡು ತಾಯಿ ಬಹಳ ಸಂತಸಪಡುತ್ತಿದ್ದಾರೆ. ಆದರೆ ಈತನ ತಂದೆ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ.

Navbharat Times 11 Feb 2019, 4:35 pm
[This story originally published in Navbharat Times on Feb 10, 2019]
Vijaya Karnataka Web Muralidhar


ವಾರಾಣಸಿ: ಪರೀಕ್ಷೆಯಲ್ಲಿ ಫೇಲಾದರೆ ಅಪ್ಪ ಬೈತಾರೆ ಎಂಬ ಭೀತಿಯಲ್ಲಿ ಫಲಿತಾಂಶದ ಮುನ್ನಾದಿನವೇ ಮನೆ ಬಿಟ್ಟು ಓಡಿಹೋಗಿದ್ದ ವ್ಯಕ್ತಿ 42 ವರ್ಷಗಳ ಬಳಿಕ ಮನೆಗೆ ವಾಪಸಾಗಿದ್ದಾನೆ.

15 ವರ್ಷದ ವಯಸ್ಸಿನ ಮುರಳೀಧರ ಎಂಬಾತನೇ ಈ ರೀತಿ ಮನೆ ಬಿಟ್ಟು ಓಡಿಹೋದ ಹುಡುಗನಾಗಿದ್ದು, ಕೋಟಾದಲ್ಲಿ ಪತ್ತೆಯಾಗಿದ್ದಾನೆ. ಆಪರೇಶನ್ ಮುಸ್ಕಾನ್ ಕಾರ್ಯಾಚರಣೆಯಲ್ಲಿ ಈತನನ್ನು ಪತ್ತೆಮಾಡಿದ ಪೊಲೀಸರು ಕುಟುಂಬದ ವಶಕ್ಕೆ ಒಪ್ಪಿಸಿದ್ದಾರೆ.

ಇಷ್ಟು ವರ್ಷಗಳ ಬಳಿಕ ಮನೆಗೆ ಮರಳಿದ ಮಗನನ್ನು ಕಂಡು ತಾಯಿ ಬಹಳ ಸಂತಸಪಡುತ್ತಿದ್ದಾರೆ. ಆದರೆ ಈತನ ತಂದೆ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ.

ನಾಪತ್ತೆಯಾದ ಮಕ್ಕಳನ್ನು ಹುಡುಕಕಿ ಕೊಡಲು ಪೊಲೀಸ್ ಇಲಾಖೆ ಆಪರೇಶನ್ ಮುಸ್ಕಾನ್ ಕಾರ್ಯಾಚರಣೆ ನಡೆಸುತ್ತದೆ. ಬಧೋಯಿ ಠಾಣೆಯ ಮುಖ್ಯಸ್ಥ ಸುನಿಲ್ ದತ್ ದುಬೆ ಕೆಲವು ಎನ್‌ಜಿಓಗಳ ನೆರವಿನೊಂದಿಗೆ ಮುರಳೀಧರನನ್ನು ಪತ್ತೆ ಮಾಡಿದ್ದಾರೆ.

ಆಪರೇಶನ್ ಮುಸ್ಕಾನ್ ಮೂಲಕ ಇದುವರೆಗೆ ಮನೆ ಬಿಟ್ಟು ಪರಾರಿಯಾದ 120ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಮಾಡಿ ಪಾಲಕರ ವಶಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಗಾಗಿ ಸುನಿಲ್ ದತ್ ತಮ್ಮದೇ ಹಣ ಖರ್ಚು ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ