ಆ್ಯಪ್ನಗರ

ಸುಖಾಂತ್ಯ ಕಂಡಿತು ಓಡಿ ಹೋಗಿದ್ದ ಜೋಡಿಯ ಕಥೆ

ಮನೆ ಬಿಟ್ಟು ಹೋಗಿದ್ದ ಯುವ ಜೋಡಿಯೊಂದು ರಾತ್ರಿ ರಕ್ಷಣೆ ಮತ್ತು ಆಶ್ರಯ ಕೋರಿ ತ್ರಿಕ್ಕಕರ ಪೊಲೀಸರ ಮೊರೆ ಹೋಗಿದೆ.

TIMESOFINDIA.COM 1 Jun 2018, 3:10 pm
ಕೊಚ್ಚಿ/ಕಣ್ಣೂರು: ಮನೆ ಬಿಟ್ಟು ಹೋಗಿದ್ದ ಯುವ ಜೋಡಿಯೊಂದು ರಾತ್ರಿ ರಕ್ಷಣೆ ಮತ್ತು ಆಶ್ರಯ ಕೋರಿ ತ್ರಿಕ್ಕಕರ ಪೊಲೀಸರ ಮೊರೆ ಹೋಗಿದೆ.
Vijaya Karnataka Web lovers


ಸಾಜನ ಕೆ. ಸಲೀಂ ಮತ್ತು ಅನಸ್‌ ಯೂಸುಫ್‌ ಜೋಡಿ ಶನಿವಾರ ಕೊಚ್ಚಿಗೆ ಬಂದಿದ್ದು, ವಜ್ಹಕಲದಲ್ಲಿರುವ ಸಂಬಂಧಿಯ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಸಾಜನ ಪೋಷಕರು ಮಗಳು ಕಾಣೆಯಾಗಿರುವುದಾಗಿ ದೂರು ನೀಡಿರುವುದನ್ನು ತಿಳಿದ ಜೋಡಿ ಪೊಲೀಸರ ಎದುರು ಹಾಜರಾಗಲು ನಿರ್ಧರಿಸಿತು. ಅದೇ ರೀತಿ ಪೊಲೀಸರೆದುರು ರಾತ್ರಿ ಹಾಜರಾಗಿದ್ದು, ಸಾಜನ ಅವರನ್ನು ಪೊಲೀಸರು ಕೇರ್‌ ಹೋಂಗೆ ಕರೆದೊಯ್ದರು.

ಬಳಿಕ ಪೊಲೀಸರ ರಕ್ಷಣೆಯೊಂದಿಗೆ ಆಕೆಯನ್ನು ಕಣ್ಣೂರಿಗೆ ಕರೆದೊಯ್ದು ಅಲ್ಲಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಎದುರು ಹಾಜರುಪಡಿಸಲಾಗಿದೆ.
ಅನಸ್‌ ಎರುಮೇಲಿ ನಿವಾಸಿಯಾಗಿದ್ದು, ಕಣ್ಣುರಿನ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಜನ್‌ ಮನೆಯವರು ಇವರಿಬ್ಬರ ಸಂಬಂಧವನ್ನು ವಿರೋಧಿಸುತ್ತಿದ್ದಾರೆ. ಆದರೆ ಈ ಜೋಡಿ ಪ್ರಾಪ್ತ ವಯಸ್ಕರಾಗಿದ್ದು, ಮದುವೆಯಾಗಲು ಕಾನೂನಿನ ಅಡಚಣೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಜನ ಮತ್ತು ತಾನು ಸಂಬಂಧಿಗಳಾಗಿದ್ದು ಕಳೆದ ಆರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ತಲಶ್ಯೇರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯನ್ನು ಪೋಷಕರು ಮನೆಯೊಳಗೆ ಕೂಡಿ ಹಾಕಿದ ಬಳಿಕ ನಾವು ಓಡಿ ಹೋಗಲು ನಿರ್ಧರಿಸಿರುವುದಾಗಿ ಅನಸ್‌ ಪೊಲೀಸರಿಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ