ಆ್ಯಪ್ನಗರ

Sabarimala LIVE: ಮಾಸ ಪೂಜೆ - ನಿಷೇಧಾಜ್ಞೆ, ಬಂದ್‌ ನಡುವೆ 2ನೇ ದಿನದ ವಿಧಿ ವಿಧಾನ ಆರಂಭ

ಅಲ್ಲಲ್ಲಿ ಪ್ರತಿಭಟನೆಯ ಕಾವು; ರಾಜ್ಯದಾದ್ಯಂತ ಬಂದ್‌ ಬಿಸಿ

Vijaya Karnataka Web 18 Oct 2018, 5:54 pm
ಶಬರಿಮಲೆ: ಎಲ್ಲ ವಯೋಮಾನದ ಸ್ತ್ರೀಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಭಾರಿ ಪ್ರತಿಭಟನೆ ಕಂಡಿದ್ದ ಶಬರಿಮಲೆಯ ಆಸುಪಾಸಿನಲ್ಲಿ ಎರಡನೇ ದಿನವೂ ಅಲ್ಲಲ್ಲಿ ಪ್ರಕ್ಷುಬ್ಧ ವಾತಾವರಣ ಕಂಡುಬಂದಿದೆ. ಈ ನಡುವೆ ಕೇರಳದ ಹಲವು ಭಾಗಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಹಲವು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್‌ ಆಗಿವೆ.
Vijaya Karnataka Web ಭಕ್ತ ಸಮೂಹ
ಭಕ್ತ ಸಮೂಹ


ಈ ನಡುವೆ ಅಕ್ಟೋಬರ್‌ ತಿಂಗಳ ಮಾಸ ಪೂಜೆ ಬುಧವಾರದಿಂದ ಆರಂಭವಾಗಿದ್ದು, ಗುರುವಾರ ಎರಡನೇ ದಿನ ಎಂದಿನಿಂತೆ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿವೆ.

ಬೆಳಗ್ಗೆ 5 ಗಂಟೆಗೆ ಅಯ್ಯಪ್ಪ ದೇಗುಲ ದ್ವಾರ ತೆರೆಯಲಾಯಿತು. 5.15ರಿಂದ ಪೂಜಾ ಕೈಂಕರ್ಯಗಳು ಆರಂಭವಾದವು ಎಂದು ಮೂಲಗಳು ತಿಳಿಸಿವೆ.


ಮಧ್ಯಾಹ್ನದವರೆಗೂ ದೇಗುಲದಲ್ಲಿ ಅಯ್ಯಪ್ಪ ದರ್ಶನ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು.

ನಂತರ ದೇಗುಲ ದ್ವಾರ ಮುಚ್ಚಲಾಗಿದ್ದು, ಸಂಜೆ ಮತ್ತೆ ತೆರೆಯಲಾಗುವುದು ಎಂದು ದೇಗುಲದ ತಂತ್ರಗಳ ತಂಡ ತಿಳಿಸಿದೆ.


ಶಬರಿಮಲೆಯ ಆಸುಪಾಸಿನ ಸ್ಥಳಗಳಲ್ಲಿ ಬುಧವಾರ ಭಾರಿ ಪ್ರತಿಭಟನೆ ಕಂಡು ಬಂದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಗುರುವಾರವೂ ಅದು ಮುಂದುವರಿದಿದೆ.

ಕೆಲವು ಕಡೆ ಪ್ರತಿಭಟನಕಾರರು ಕಾವಲು ಕಾಯುತ್ತಿದ್ದಾರೆ. ಯಾವುದೇ ವಾಹನ ಬಂದರೂ ತಪಾಸಣೆ ನಡೆಸಿ ಬಿಡುತ್ತಿರುವುದು ಸಾಮಾನ್ಯವಾಗಿದೆ.

ಆದರೆ ಇದುವರೆಗೂ ಕೆಲವು ಮಹಿಳೆಯರನ್ನು ಹೊರತುಪಡಿಸಿದರೆ 10 ರಿಂದ 50 ವರ್ಷದೊಳಗಿನ ಯಾವ ಮಹಿಳೆಯೂ ದೇಗುಲ ಪ್ರವೇಶಕ್ಕೆ ಮುಂದಾಗಿಲ್ಲ ಎಂದು ತಿಳಿದುಬಂದಿದೆ.

ಅತಿ ಹೆಚ್ಚು ಪ್ರತಿಭಟನೆ ಕಂಡುಬಂದಿದ್ದ ನೀಲಕ್ಕಲ್‌ನಲ್ಲಿ ಪೊಲೀಸ್ ಬಂದೋಬಸ್ತ್‌ ಹೆಚ್ಚು ಮಾಡಲಾಗಿದೆ.

ಕೋಯಿಕ್ಕೊಡ್‌, ಮಳಪ್ಪುರಂ, ತಿರುವನಂತಪುರಂನಲ್ಲಿ ಕೆಲ ಸಂಘಟನೆಗಳ ಕಾರ್ಯಕರ್ತರು ಕೇರಳ ರಾಜ್ಯ ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Sabarimala row: 2ನೇ ದಿನವೂ ಅದೇ ಸ್ಥಿತಿ, ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆ ಮೇಲೆ ಕಲ್ಲು ತೂರಾಟ

ಶಬರಿಮಲೆ: ಪ್ರತಿಭಟನೆ ನಡುವೆ ಅಯ್ಯಪ್ಪನ ದೇಗುಲದಲ್ಲಿ ಮಾಸ ಪೂಜೆ, ಸ್ತ್ರೀಯರಿಗೆ ಸಿಗಲಿಲ್ಲ ದರ್ಶನ ಭಾಗ್ಯ

ಭಕ್ತರು ಹಾಗೂ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿ ಕೆಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ.

ಕೊಚ್ಚಿ, ಪತ್ತನಂತ್ತಿಟ್ಟದಲ್ಲಿ ನಿಷೇಧಾಜ್ಞೆ ಮುಂದುವರಿದಿದೆ.

ಈ ನಡುವೆ ಶಬರಿಮಲೆಯತ್ತ ತೆರಳಲು ಯತ್ನಿಸಿದ ನ್ಯೂಯಾರ್ಕ್‌ ಟೈಮ್ಸ್‌ ವರದಿಗಾರ್ತಿ ಹಾಗೂ ಆಕೆಯ ಸಹೋದ್ಯೋಗಿಯನ್ನು ಪ್ರತಿಭಟನಾಕಾರರು ವಾಪಸ್ ಕಳುಹಿಸಿದ್ದಾರೆ.

ಇಬ್ಬರೂ ಪಂಪಾ ತೀರದಿಂದ ಬೆಟ್ಟ ಹತ್ತಲು ಪ್ರಯತ್ನಿಸುತ್ತಿದ್ದಾಗ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ