ಆ್ಯಪ್ನಗರ

ಗಮನಿಸಿ: ಶಬರಿಮಲೆ ಭೇಟಿಗೆ ನಿತ್ಯ 5,000 ಭಕ್ತರಿಗೆ ಅವಕಾಶ, ಅಯ್ಯಪ್ಪ ಸ್ವಾಮಿ ದರುಶನಕ್ಕೆ ನಿಯಮಗಳೇನು?

ಸುಮಾರು ಏಳು ತಿಂಗಳ ಕಾಲ ಮುಚ್ಚಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಎರಡು ತಿಂಗಳ ವಾರ್ಷಿಕ ಮಕರವಿಳುಕ್ಕು ಉತ್ಸವಕ್ಕಾಗಿ ನವೆಂಬರ್‌ನಲ್ಲಿ ತೆರೆಯಲಾಗಿದೆ. ಈಗ ನಿತ್ಯ 2,000 ಭಕ್ತರ ಭೇಟಿಗಷ್ಟೇ ಅವಕಾಶ ನೀಡಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಿಸಲು ಕೇರಳ ಹೈಕೋರ್ಟ್‌ ಅನುಮತಿ ನೀಡಿರುವುದರಿಂದ ಈ ಸಂಖ್ಯೆಯನ್ನು 5,000ಕ್ಕೆ ಏರಿಸಲು ದೇವಸ್ಥಾನದ ಆಡಳಿತ ನಿರ್ವಹಣೆಯ ಹೊಣೆ ಹೊತ್ತಿರುವ ಟಿಡಿಬಿ ನಿರ್ಧರಿಸಿದೆ.

Vijaya Karnataka 21 Dec 2020, 7:07 am
ಶಬರಿಮಲೆ: ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ನಿತ್ಯ 5,000 ಭಕ್ತರ ಭೇಟಿಗೆ ಅವಕಾಶ ನೀಡುವುದಾಗಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ. ಆದರೆ, ಪ್ರತಿಯೊಬ್ಬರೂ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಟ್ಟು, ಕೊರೊನಾ ಸೋಂಕು ಇಲ್ಲದ ಕುರಿತು ಪ್ರಮಾಣ ಪತ್ರ ತೋರಿಸುವುದು ಕಡ್ಡಾಯವಾಗಿದೆ.
Vijaya Karnataka Web sabarimala
Sabarimala Temple (File photo)


ಸುಮಾರು ಏಳು ತಿಂಗಳ ಕಾಲ ಮುಚ್ಚಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಎರಡು ತಿಂಗಳ ವಾರ್ಷಿಕ ಮಕರವಿಳುಕ್ಕು ಉತ್ಸವಕ್ಕಾಗಿ ನವೆಂಬರ್‌ನಲ್ಲಿ ತೆರೆಯಲಾಗಿದೆ. ಈಗ ನಿತ್ಯ 2,000 ಭಕ್ತರ ಭೇಟಿಗಷ್ಟೇ ಅವಕಾಶ ನೀಡಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಿಸಲು ಕೇರಳ ಹೈಕೋರ್ಟ್‌ ಅನುಮತಿ ನೀಡಿರುವುದರಿಂದ ಈ ಸಂಖ್ಯೆಯನ್ನು 5,000ಕ್ಕೆ ಏರಿಸಲು ದೇವಸ್ಥಾನದ ಆಡಳಿತ ನಿರ್ವಹಣೆಯ ಹೊಣೆ ಹೊತ್ತಿರುವ ಟಿಡಿಬಿ ನಿರ್ಧರಿಸಿದೆ. ಡಿ.26ರ ನಂತರ ಹೊಸ ನಿಯಮಗಳು ಜಾರಿಗೆ ಬರಲಿವೆ.

ಹೊಸ ನಿಯಮಗಳೇನು?
ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು, ಕೊರೊನಾ ಸೋಂಕು ಇಲ್ಲದ ಬಗ್ಗೆ ಪ್ರಮಾಣಪತ್ರ ಹಾಜರುಪಡಿಸಿದವರಿಗೆ ಮಾತ್ರ ದೇವಸ್ಥಾನ ಭೇಟಿಗೆ ಅವಕಾಶ. ಈ ಮೊದಲು ಆ್ಯಂಟಿಜೆನ್‌ ಪರೀಕ್ಷೆಗೆ ಒಳಪಟ್ಟರೆ ಸಾಕಿತ್ತು.

ಆರ್‌ಟಿ-ಪಿಸಿಆರ್‌ ಪ್ರಮಾಣಪತ್ರವನ್ನು 48 ಗಂಟೆ ಒಳಗೆ ಪಡೆದಿರಬೇಕು. ಅದಕ್ಕೂ ಮುನ್ನ ಪಡೆದ ಪ್ರಮಾಣಪತ್ರವನ್ನು ಮಾನ್ಯ ಮಾಡುವುದಿಲ್ಲ.
ಕಾಂಗ್ರೆಸ್‌ನಲ್ಲಿ ಶುರುವಾಗಿದೆ ಬದಲಾವಣೆ ಪರ್ವ..! ಬಂಡಾಯ ನಾಯಕರ ಜತೆಗಿನ ಸಭೆ ಬಳಿಕ ಕಸರತ್ತು

ಭಕ್ತರು ಈಗಲೂ ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಸಿಕೊಳ್ಳಬೇಕು. ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಭೇಟಿಗೆ ಅನುಮತಿ ನೀಡಲಾಗುತ್ತದೆ.

ಭಕ್ತರು ಆರು ಅಡಿ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಅಲ್ಲದೇ ಸರಿಯಾಗಿ ಮಾಸ್ಕ್‌ ಧರಿಸಿದ್ದಾರೆಯೋ ಇಲ್ಲವೊ ಎಂಬ ಕುರಿತಾಗಿಯೂ ಕಣ್ಗಾವಲು ಇಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ