ಆ್ಯಪ್ನಗರ

ಶಬರಿಮಲೆ ವಿವಾದ: ಕೇರಳದಲ್ಲಿ ಕಾವೇರುತಿದೆ ಹಿಂದೂ ಸಂಘಟನೆಗಳ ಪ್ರತಿಭಟನೆ

ಪ್ರತಿಭಟನೆ ಅಂಗವಾಗಿ ರಾಜ್ಯದ 200ಕ್ಕೂ ಅಧಿಕ ಕೇಂದ್ರಗಳಲ್ಲಿ 'ರಾಮ ಜಪ ಪ್ರಾರ್ಥನಾ ಯಜ್ಞ' ಸಹ ಆಯೋಜಿಸಲಾಗಿತ್ತು.

TIMESOFINDIA.COM 11 Oct 2018, 3:25 pm
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್ ತೀರ್ಪು ಖಂಡಿಸಿ ಕೇರಳದಾದ್ಯಂತ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನೆ ಅಂಗವಾಗಿ ಬುಧವಾರ ರಾಜ್ಯದ 200ಕ್ಕೂ ಅಧಿಕ ಕೇಂದ್ರಗಳಲ್ಲಿ 'ರಾಮ ಜಪ ಪ್ರಾರ್ಥನಾ ಯಜ್ಞ' ಆಯೋಜಿಸಲಾಗಿತ್ತು.
Vijaya Karnataka Web shabari


ಕೇರಳದ ರಾಜಧಾನಿಯಲ್ಲಿರುವ ಹುತಾತ್ಮ ಯೋಧರ ವೃತ್ತದಲ್ಲಿ ನಾಯರ್ ಸರ್ವೀಸ್ ಸೊಸೈಟಿ (ಎನ್‌ಎಸ್‌ಎಸ್) ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ನಾಯರ್ ಸಮುದಾಯದ ಸಾವಿರಾರು ಜನರು ಭಾಗಿಯಾಗಿದ್ದರು.

ತಿರುವನಂತಪುರಂನ 10 ಕೇಂದ್ರಗಳಲ್ಲಿ ಬಿಜೆಪಿ ಹಾಗೂ ಹಿಂದೂ ಐಕ್ಯವೇದಿ ಸಂಘಟನೆ ವತಿಯಿಂದ ಪ್ರಾರ್ಥನಾ ಸಭೆ ಆಯೋಜಿಸಲಾಗಿದ್ದು, ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಎರ್ನಾಕುಲಂನಲ್ಲೂ ಸಹ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಪ್ರತಿಭಟನಾಕಾರರು ವೈಟಿಲಾ ಜಂಕ್ಷನ್ ರಸ್ತೆ ತಡೆದು ಪ್ರತಿಭಟಿಸಿದರು.

ತ್ರಿಶೂರ್‌‌ನ ದೇವಸ್ಥಾನದಲ್ಲಿ ಒಂದುಗೂಡಿದ ಪ್ರತಿಭಟನಾಕಾರರು, ಸ್ವರಾಜ್ ರೌಂಡ್ ಮಾರ್ಗದವರೆಗೂ ಮೆರವಣಿಗೆ ನಡೆಸಿದರು. ಬಳಿಕ ಸ್ವಾಮಿ ಪುರುಷೋತ್ತಮಾನಂದ ಸರಸ್ವತಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಕೋಳಿಕೋಡ್‌ನ ಸಾವಿರಾರು ಮಹಿಳೆಯರು ಹಾಗೂ ಮಕ್ಕಳು ಪಾಲಯಂ ಜಂಕ್ಷನ್‌ನಲ್ಲಿ ಹಿಂದೂ ಐಕ್ಯವೇದಿಕೆ ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಬುಧವಾರ ನಡೆದ ಪ್ರತಿಭಟನೆಯಲ್ಲಿ 17ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದವು.

ಜಿಲ್ಲಿಕಟ್ಟು ಮಾದರಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಹಿಂದೂ ಪರ ಸಂಘಟನೆಗಳು, ರಾಜ್ಯದ ಪ್ರತಿ ಜಿಲ್ಲೆಯಗಳಲ್ಲೂ ಪ್ರಾರ್ಥನಾ ಸಭೆ ಆಯೋಜಿಸಲು ತೀರ್ಮಾನಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ