ಆ್ಯಪ್ನಗರ

ಕೇರಳ ಪ್ರವಾಹದ ಸಂದರ್ಭ ಮುಚ್ಚಿದ್ದ ಶಬರಿಮಲೆ ಪ್ರವೇಶ ಮುಕ್ತ

ಮಹಾ ಪ್ರವಾಹದ ಸಂದರ್ಭ ಮುಚ್ಚಿದ್ದ ಶಬರಿಮಲೆ ದೇವಸ್ಥಾನವನ್ನು ಭಾನುವಾರ ಕನ್ನಿಮಾಸ ಪೂಜೆ ನೆರವೇರಿಸುವುದರೊಂದಿಗೆ ತೆರೆಯಲಾಯಿತು.

TOI.in 17 Sep 2018, 3:21 pm
ತಿರುವನಂತಪುರ: ಕೇರಳದ ಮಹಾ ಪ್ರವಾಹದ ಸಂದರ್ಭ ಮುಚ್ಚಿದ್ದ ಶಬರಿಮಲೆ ದೇವಸ್ಥಾನವನ್ನು ಭಾನುವಾರ ಕನ್ನಿಮಾಸ ಪೂಜೆ ನೆರವೇರಿಸುವುದರೊಂದಿಗೆ ತೆರೆಯಲಾಯಿತು.
Vijaya Karnataka Web Sabarimala Temple


ಭಾನುವಾರ ಸಂಜೆ 4.55ಕ್ಕೆ ಮೆಲ್ಶಾಂತಿ ಉನ್ನಿಕೃಷ್ಣನ್‌ ನಂಬೂದಿರಿ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆದರು. ತಂತ್ರಿ ಕಂದರಾರು ರಾಜೀವರಾರು ಪೂಜೆಯ ನಂತರ ನೆರೆದಿದ್ದ ಭಕ್ತ ಸಮೂಹಕ್ಕೆ ಪ್ರಸಾದ ವಿತರಿಸಿದರು. ಸೆಪ್ಟಂಬರ್‌ 21ರ ವರೆಗೆ ದೇವಸ್ಥಾನ ತೆರೆದಿರುತ್ತದೆ.

ನೀಲಕ್ಕಲ್‌ ಪ್ರದೇಶದಲ್ಲಿ ಖಾಸಗಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಹಾಗಾಗಿ ಭಕ್ತರು ನಿಲಕ್ಕಲ್‌ ಮತ್ತು ಪಂಬಾ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ.

ಪಂಬಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ಕಾರಣ ಶಬರಿಮಲೆ ದರ್ಶನಕ್ಕೆ ಬರುವವರನ್ನು ತಡೆಯಲಾಗುತ್ತಿತ್ತು. ಓಣಂ ಪೂಜೆಯ ಸಂದರ್ಭದಲ್ಲೂ ಶಬರಿಮನೆ ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ