ಆ್ಯಪ್ನಗರ

ಇಂದು ಮತ್ತೆ ತೆರೆಯಲಿದೆ ಶಬರಿಮಲೆ ಬಾಗಿಲು: ನಡೆಯಲಿದೆಯೇ ಸಂಘರ್ಷ

ಆಯಕಟ್ಟಿನ ಸ್ಥಳಗಳಲ್ಲಿ ಭಾರೀ ಪೊಲೀಸ್‌ ಬಿಗಿಭದ್ರತೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆಯೂ ಜಾರಿ ಮಾಡಲಾಗಿದೆ.

Vijaya Karnataka 5 Nov 2018, 6:30 am
ಶಬರಿಮಲೆ: ಸ್ವಾಮಿ ಅಯ್ಯಪ್ಪನ ವಿಶೇಷ ಪೂಜೆಗಾಗಿ ಸೋಮವಾರ ಒಂದು ದಿನದ ಮಟ್ಟಿಗೆ ದೇಗುಲದ ಬಾಗಿಲು ಭಕ್ತರಿಗೆ ತೆರೆಯಲಿದ್ದು, ಮತ್ತೊಂದು ಸುತ್ತಿನ 'ಸಮಾನತೆ' ಸಂಘರ್ಷದ ಭೀತಿ ಎದುರಾಗಿದೆ.
Vijaya Karnataka Web shabarimala


ಆಯಕಟ್ಟಿನ ಸ್ಥಳಗಳಲ್ಲಿ ಭಾರೀ ಪೊಲೀಸ್‌ ಬಿಗಿಭದ್ರತೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆಯೂ ಜಾರಿ ಮಾಡಲಾಗಿದೆ. ಎಲ್ಲ ವಯೋಮಾನದ ಮಹಿಳೆಯರ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳು ಐದು ದಿನಗಳ ತುಲಾ ಮಾಸ ಪೂಜೆ ವೇಳೆ ಪರ-ವಿರೋಧದ ಮೊದಲ ಸಂಘರ್ಷ ಏರ್ಪಟ್ಟಿತ್ತು. ನಿಷೇಧಿತ ವಯಸ್ಸಿನ ಕೆಲವು ಮಹಿಳೆಯರು ಸೋಮವಾರದ ಪೂಜೆಗೆ ದೇಗುಲ ಪ್ರವೇಶಿಸಲು ಸಜ್ಜಾಗಿದ್ದು, ಯಥಾಪ್ರಕಾರ ಅವರನ್ನು ತಡೆಯುವ ಪಣ ತೊಟ್ಟಿರುವ ಅಯ್ಯಪ್ಪನ ಭಕ್ತರ ಪಡೆಗಳೂ ಅಲ್ಲಲ್ಲಿ ಬೀಡುಬಿಟ್ಟಿವೆ. ಇದರಿಂದ ಭಾನುವಾರದಿಂದಲೇ ಶಬರಿಮಲೆ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

2300 ಪೊಲೀಸರ ಕಾವಲು

ಕಳೆದ ಬಾರಿಯ ಸಂಘರ್ಷದಿಂದ ಎಚ್ಚೆತ್ತಿರುವ ರಾಜ್ಯ ಸರಕಾರ ಈ ಬಾರಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಿರಲು ನಿರ್ಧರಿಸಿದ್ದು, ವ್ಯಾಪಕ ಭದ್ರತೆ ಕೈಗೊಂಡಿದೆ. 20 ಸದಸ್ಯರ ಕಮಾಂಡೊ ಪಡೆ, 100 ಮಹಿಳಾ ಸಿಬ್ಬಂದಿ ಸೇರಿದಂತೆ 2300 ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿದೆ. ಅಗತ್ಯ ಬಿದ್ದರೆ, 50 ವರ್ಷ ಮೇಲ್ಪಟ್ಟ ಇನ್ನೂ 30 ಮಹಿಳಾ ಅಧಿಕಾರಿಗಳನ್ನು ಸನ್ನಿಧಾನಂ ಭದ್ರತೆಗೆ ನಿಯೋಜಿಸಲು ನಿರ್ಧರಿಸಲಾಗಿದೆ.

ವರದಿಗಾರಿಕೆಗೆ ಮಹಿಳೆಯರು ಬೇಡ

ದೇವಳ ಪೂಜೆಯ ವರದಿಗಾರಿಕೆಗೆ ಋುತುಸ್ರಾವ ವಯಸ್ಸಿನ ಮಹಿಳೆಯರನ್ನು ಕಳಿಸಿಕೊಡಬೇಡಿ ಎಂದು ಶಬರಿಮಲೆ ಕರ್ಮ ಸಮಿತಿ, ವಿಎಚ್‌ಪಿ ಒಳಗೊಂಡ ಬಲಪಂಥೀಯ ಸಂಘಟನೆಗಳ ಒಕ್ಕೂಟ ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿದೆ.

ಒಂದು ದಿನದ ಪೂಜೆ: ತಯಾರಿ ಹತ್ತಾರು

*'ಶ್ರೀ ಚಿತಿರ ಅಟ್ಟ' ವಿಶೇಷ ಪೂಜೆಗಾಗಿ ದೇಗುಲ ಭಕ್ತರಿಗೆ ಮುಕ್ತ.

*ಸೋಮವಾರ ರಾತ್ರಿ 10 ಗಂಟೆಗೆ ಬಾಗಿಲು ಮುಚ್ಚುತ್ತದೆ.

*ಪಂಪಾ, ನಿಲಕ್ಕಲ್‌ ಮತ್ತು ಸನ್ನಿಧಾನಂನಲ್ಲಿ ನಿಷೇಧಾಜ್ಞೆ ಜಾರಿ

* ಸುಪ್ರೀಂ ತೀರ್ಪಿನ ವಿರುದ್ಧ ಪಂದಳಂ ಕುಟುಂಬದ ಪ್ರಾರ್ಥನಾ ಯಜ್ಞ

* ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಆಕ್ರೋಶ

* ನವೆಂಬರ್‌ 13ಕ್ಕೆ ಸುಪ್ರೀಂಕೋರ್ಟಲ್ಲಿ ಮುಂದಿನ ವಿಚಾರಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ