ಅನರ್ಹತೆ ಭೀತಿ: ಸ್ಪೀಕರ್ ನೋಟಿಸ್ ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ ಸಚಿನ್ ಪೈಲಟ್!
ವಿಧಾನಸಭೆ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ ಸಚಿನ್ ಪೈಲಟ್ ಹಾಗೂ ಅವರೊಂದಿಗಿರುವ ಹದಿನೆಂಟು ಶಾಸಕರು ರಾಜಸ್ಥಾನದ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ಮೂರು ಗಂಟೆಗೆ ಈ ಬಗ್ಗೆ ವಿಚಾರಣೆ ನಡೆಯಲಿದೆ. ಈಗಾಗಲೇ ಸಚಿನ್ ಪೈಲೆಟ್ ಅರ್ಜಿ ಸಲ್ಲಿಸಿದ್ದು, ಸ್ಪೀಕರ್ ಒತ್ತಡದ ಹಿನ್ನೆಲೆ ಅನರ್ಹತೆಯ ನೋಟಿಸ್ ಕಳುಹಿಸಿರುವುದಾಗಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.
TIMESOFINDIA.COM 16 Jul 2020, 4:24 pm
ಜೈಪುರ್: ರಾಜಸ್ಥಾನದಲ್ಲಿ ರಾಜಕೀಯ ಜಟಾಪಟಿ ಮುಂದುವರಿದಿದೆ. ಇದೀಗ ಸಚಿನ್ ಪೈಲಟ್ ಹಾಗೂ ಅವರೊಂದಿಗಿರುವ ಹದಿನೆಂಟು ಶಾಸಕರು , ವಿಧಾನಸಭೆ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ ರಾಜಸ್ಥಾನದ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ಮೂರು ಗಂಟೆಗೆ ಈ ಬಗ್ಗೆ ವಿಚಾರಣೆ ನಡೆಯಲಿದೆ. ಈಗಾಗಲೇ ಸಚಿನ್ ಪೈಲೆಟ್ ಅರ್ಜಿ ಸಲ್ಲಿಸಿದ್ದು, ಸ್ಪೀಕರ್ ಒತ್ತಡದ ಹಿನ್ನೆಲೆ ಅನರ್ಹತೆಯ ನೋಟಿಸ್ ಕಳುಹಿಸಿರುವುದಾಗಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇನ್ನು ಪೈಲಟ್ ಬಣದಲ್ಲಿರುವ ಮಾಜಿ ಸಚಿವ ಪೃಥ್ವಿರಾಜ್ ಮೀನಾ ಕೂಡ ಸ್ಪೀಕರ್ ನಡೆ ಪ್ರಶ್ನಿಸಿ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಅರ್ಜಿಗಳ ವಿಚಾರಣೆ ಇಂದು ನಡೆಯಲಿದ್ದು, ವಕೀಲರಾದ ಹರೀಶ್ ಸಾಳ್ವೆ ಹಾಗೂ ಮುಕುಲ್ ರೊಹ್ಟಗಿ ಇವರ ಪರ ವಾದ ಮಂಡಿಸಲಿದ್ದಾರೆ. ಮೂಲಗಳ ಪ್ರಕಾರ ಎಲ್ಲದರೂ ಕೋರ್ಟ್ ಸ್ಪೀಕರ್ ಅನರ್ಹತೆಯ ನೋಟಿಸ್ಗೆ ಸ್ಟೇ ತಂದಿಲ್ಲ ಅಂತಾದರೆ ಸಚಿನ್ ಪೈಲಟ್ ಪೇಚಿಗೆ ಸಿಲುಕುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿದೆ.
ವಜಾದ ಅಗತ್ಯವಿಲ್ಲ!
ಸಚಿನ್ ಅವರನ್ನ ವಜಾ ಮಾಡುವ ಅಗತ್ಯವಿಲ್ಲ ಕೋರ್ಟ್ನಲ್ಲಿ ಸ್ಪೀಕರ್ ನೋಟಿಸ್ ಅಂಗೀಕಾರವಾಗಲಿದೆ. ಎಲ್ಲಾದರೂ ಸ್ಟೇ ತರುವಲ್ಲಿ ಸಚಿನ್ಗೆ ಹಿನ್ನಡೆಯಾದರೆ ಅಥವಾ ಅವರು ಸ್ಪೀಕರ್ ಮುಂದೆ ಹಾಜರಾಗಿಲ್ಲ ಎಂದಾದರೆ ಅವರ ಕಾಂಗ್ರೆಸ್ ಸದಸ್ಯತ್ವ ನಷ್ಟವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ವಿಪ್ ಜಾರಿಯಲ್ಲಿದ್ದರು ಶಾಸಕಾಂಗ ಸಭೆಗೆ ಹಾಜರಾಗದ ಹಿನ್ನೆಲೆ ಸಚಿನ್ ಪೈಲಟ್ ಸೇರಿ ಅವರ ಬಣದಲ್ಲಿದ್ದ ಹತ್ತೊಂಬತ್ತು ಮಂದಿ ಶಾಸಕರಿಗೆ ವಿಧಾನಸಭೆ ಸ್ಪೀಕರ್ ನೋಟಿಸ್ ಜಾರಿಗೊಳಿಸಿದ್ದರು.
ಪಕ್ಷ ಒಡೆಯುತ್ತಿರುವ ಹಿರಿತಲೆ-ಕಿರಿತಲೆ ಸಂಘರ್ಷ, ಕಾಂಗ್ರೆಸ್ಗೆ ಕಿರಿಯರ ಬೈ
ಇನ್ನು ಪೈಲಟ್ ಬಣದಲ್ಲಿರುವ ಮಾಜಿ ಸಚಿವ ಪೃಥ್ವಿರಾಜ್ ಮೀನಾ ಕೂಡ ಸ್ಪೀಕರ್ ನಡೆ ಪ್ರಶ್ನಿಸಿ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಅರ್ಜಿಗಳ ವಿಚಾರಣೆ ಇಂದು ನಡೆಯಲಿದ್ದು, ವಕೀಲರಾದ ಹರೀಶ್ ಸಾಳ್ವೆ ಹಾಗೂ ಮುಕುಲ್ ರೊಹ್ಟಗಿ ಇವರ ಪರ ವಾದ ಮಂಡಿಸಲಿದ್ದಾರೆ. ಮೂಲಗಳ ಪ್ರಕಾರ ಎಲ್ಲದರೂ ಕೋರ್ಟ್ ಸ್ಪೀಕರ್ ಅನರ್ಹತೆಯ ನೋಟಿಸ್ಗೆ ಸ್ಟೇ ತಂದಿಲ್ಲ ಅಂತಾದರೆ ಸಚಿನ್ ಪೈಲಟ್ ಪೇಚಿಗೆ ಸಿಲುಕುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿದೆ.
ವಜಾದ ಅಗತ್ಯವಿಲ್ಲ!
ಸಚಿನ್ ಅವರನ್ನ ವಜಾ ಮಾಡುವ ಅಗತ್ಯವಿಲ್ಲ ಕೋರ್ಟ್ನಲ್ಲಿ ಸ್ಪೀಕರ್ ನೋಟಿಸ್ ಅಂಗೀಕಾರವಾಗಲಿದೆ. ಎಲ್ಲಾದರೂ ಸ್ಟೇ ತರುವಲ್ಲಿ ಸಚಿನ್ಗೆ ಹಿನ್ನಡೆಯಾದರೆ ಅಥವಾ ಅವರು ಸ್ಪೀಕರ್ ಮುಂದೆ ಹಾಜರಾಗಿಲ್ಲ ಎಂದಾದರೆ ಅವರ ಕಾಂಗ್ರೆಸ್ ಸದಸ್ಯತ್ವ ನಷ್ಟವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ವಿಪ್ ಜಾರಿಯಲ್ಲಿದ್ದರು ಶಾಸಕಾಂಗ ಸಭೆಗೆ ಹಾಜರಾಗದ ಹಿನ್ನೆಲೆ ಸಚಿನ್ ಪೈಲಟ್ ಸೇರಿ ಅವರ ಬಣದಲ್ಲಿದ್ದ ಹತ್ತೊಂಬತ್ತು ಮಂದಿ ಶಾಸಕರಿಗೆ ವಿಧಾನಸಭೆ ಸ್ಪೀಕರ್ ನೋಟಿಸ್ ಜಾರಿಗೊಳಿಸಿದ್ದರು.
ಪಕ್ಷ ಒಡೆಯುತ್ತಿರುವ ಹಿರಿತಲೆ-ಕಿರಿತಲೆ ಸಂಘರ್ಷ, ಕಾಂಗ್ರೆಸ್ಗೆ ಕಿರಿಯರ ಬೈ