ಆ್ಯಪ್ನಗರ

ರಾಜಸ್ಥಾನ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷ ಸಾಲಿನ ಪಕ್ಕ ಕುಳಿತ ಸಚಿನ್ ಪೈಲಟ್: ಕಾರಣವೇನು?

ಬಂಡಾಯಗಾರ ಸಚಿನ್ ಪೈಲಟ್ ರಾಜಸ್ಥಾನ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷದ ಸಾಲಿನ ಪಕ್ಕದಲ್ಲೇ ಕಳಿತುಕೊಂಡಿದ್ದು ಗಮನಸೆಳೆಯಿತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ದೂರದಲ್ಲಿರುವ ಪ್ರತಿಪಕ್ಷದವರಿಗೆ ಮೀಸಲಾದ ಆಸನಗಳ ಪಕ್ಕದಲ್ಲಿ ಪೈಲಟ್ ಆಸೀನರಾಗಿದ್ದರು.

Vijaya Karnataka Web 14 Aug 2020, 3:13 pm
ಜೈಪುರ್: ರಾಜಸ್ಥಾನ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
Vijaya Karnataka Web Sachin Pilot1
ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷ ಸಾಲಿನ ಪಕ್ಕದಲ್ಲಿ ಕುಳಿತ ಸಚಿನ್ ಪೈಲಟ್


ಈ ಮಧ್ಯೆ ಬಂಡಾಯಗಾರ ಸಚಿನ್ ಪೈಲಟ್ ವಿಧಾನಸಭೆಯಲ್ಲಿ ಪ್ರತಿಪಕ್ಷದ ಸಾಲಿನ ಪಕ್ಕದಲ್ಲೇ ಕಳಿತುಕೊಂಡಿದ್ದು ಗಮನಸೆಳೆಯಿತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ದೂರದಲ್ಲಿರುವ ಪ್ರತಿಪಕ್ಷದವರಿಗೆ ಮೀಸಲಾದ ಆಸನಗಳ ಪಕ್ಕದಲ್ಲಿ ಪೈಲಟ್ ಆಸೀನರಾಗಿದ್ದರು.

ಬಿಜೆಪಿಯಿಂದ ಅವಿಶ್ವಾಸ, ಕಾಂಗ್ರೆಸ್‌ನಿಂದ ಬಹುಮತ ಸಾಬೀತು: ರೋಚಕ ರಾಜಸ್ಥಾನ ಅಧಿವೇಶನ!

ಇದಕ್ಕೆ ಕಾರಣವನ್ನೂ ನೀಡಿದ ಸಚಿನ್ ಪೈಲಟ್, ಪ್ರತಿಪಕ್ಷದ ಸಾಲು ಎಂದರೆ ಆಡಳಿತ ಪಕ್ಷದ ಗಡಿ, ಇದಕ್ಕೆಂದೇ ಕಾಂಗ್ರೆಸ್ ತನ್ನ ಅತ್ಯಂತ ಧೀರ ಯೋಧನನ್ನು ಗಡಿಗೆಕಳುಹಿಸಿದೆ ಎಂದು ಮಾರ್ಮಿಕವಾಗಿ ನುಡಿದರು.

ಸೇನೆ ಹೇಗೆ ತನ್ನ ಧೀರ ಯೋಧರನ್ನು ಗಡಿ ರಕ್ಷಣೆಗೆ ಕಳಿಸುತ್ತದೆಯೋ ಅದೇ ರೀತಿ ಕಾಂಗ್ರೆಸ್ ತನ್ನ ಅತ್ಯಂತ ಸಮರ್ಥ ಯೋಧನನ್ನು ಪ್ರತಿಪಕ್ಷಗಳ ಸಾಲಿನ ಗಡಿಗೆ ಕಳುಹಿಸಿದೆ ಎಂದು ಗೆಹ್ಲೋಟ್ ಹೇಳಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸುವಂತೆ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದ ಬಿಎಸ್‌ಪಿ!

ತಾವು ಕಾಂಗ್ರೆಸ್‌ ಪಕ್ಷದ ಅತ್ಯಂತ ನಿಷ್ಠಾವಂತ ಕಟ್ಟಾಳು ಎಂದಿರುವ ಪೈಲಟ್, ಆಡಳಿತ ಪಕ್ಷವನ್ನು ಪ್ರತಿಪಕ್ಷಗಳ ವಾಗ್ದಾಳಿಯಿಂದ ರಕ್ಷಿಸಲೆಂದೇ ಕೊನೆಯ ಸಾಲಿನಲ್ಲಿ ಕುಳಿತುಕೊಂಡಿರುವುದಾಗಿ ಸ್ಪಷ್ಟಪಡಿಸಿದರು.

ಆದರೆ ಅಶೋಕ್ ಗೆಹ್ಲೋಟ್ ಅವರಿಂದ ದೂರ ಕೂರಬೇಕು ಎಂಬ ಉದ್ದೇಶದಿಂದಲೇ ಪೈಲಟ್ ಪ್ರತಿಪಕ್ಷಗಳ ಸಾಲಿನ ಪಕ್ಕದಲ್ಲಿ ಕೂತಿದ್ದರು ಎಂಬ ಮಾತುಗಳೂ ಕೇಳಿ ಬಂದವು.

ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಿರುವ ಬಿಜೆಪಿ!

ಸದ್ಯ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಪರೀಕ್ಷೆಗೆ ಗುರಿಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ