ಆ್ಯಪ್ನಗರ

ತಮ್ಮ ಪುತ್ರನ ಸೋಲಿಗೆ ಪೈಲಟ್‌ ಕಾರಣ ಎಂದ ಗೆಹ್ಲೋಟ್‌

ಜೋಧಪುರ ಲೋಕಸಭಾ ವ್ಯಾಪ್ತಿಯ ಆರು ವಿಧಾನಸಭೆಗಳಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ. ನಮಗೆ ನಿರಾಯಾಸ ಗೆಲುವು ದಕ್ಕಲಿದೆ ಎಂದು ಸಚಿನ್‌ ಪೈಲಟ್‌ ಹೇಳಿದ್ದರು. ಆದರೂ ಫಲಿತಾಂಶ ತದ್ವಿರುದ್ಧವಾಯಿತು. ಇದರ ಸಂಪೂರ್ಣ ಹೊಣೆಯನ್ನು ಪೈಟಲ್‌ ಹೊತ್ತುಕೊಳ್ಳಬೇಕಿದೆ ಎಂದು ಸಿಎಂ ಗೆಹ್ಲೋಟ್‌ ಪ್ರತಿಪಾದಿಸಿದರು.

PTI 5 Jun 2019, 5:00 am
ಜೈಪುರ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್‌ನಲ್ಲಿ ಬಹಿರಂಗ ಕೆಸರೆರಚಾಟ ಜೋರಾಗಿದೆ. ರಾಜಸ್ಥಾನದ ಜೋಧಪುರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ತಮ್ಮ ಪುತ್ರ ವೈಭವ್‌ ಗೆಹ್ಲೋಟ್‌ ಸೋಲಿಗೆ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಕಾರಣ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇರ ಆರೋಪ ಮಾಡಿದ್ದಾರೆ.
Vijaya Karnataka Web sachin pilot should take responsibility for my sons defeat ashok gehlot
ತಮ್ಮ ಪುತ್ರನ ಸೋಲಿಗೆ ಪೈಲಟ್‌ ಕಾರಣ ಎಂದ ಗೆಹ್ಲೋಟ್‌

ವೈಭವ್‌ ಅವರು ಜೋಧಪುರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖವತ್‌ ವಿರುದ್ಧ 3 ಲಕ್ಷ ಮತಗಳ ಅಂತರದಿಂದ ಮುಖಭಂಗ ಅನುವಭವಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದ ಹೊರತಾಗಿಯೂ ಒಂದೇ ಒಂದು ಲೋಕಸಭೆ ಕ್ಷೇತ್ರ ಗೆಲ್ಲಲು ಸಾಧ್ಯವಾಗಿಲ್ಲ. ಈ ಕಳಪೆ ಸಾಧನೆಗೆ ಏನು ಕಾರಣ ಎನ್ನುವ ಕುರಿತು ಪರಾಮರ್ಶೆ ನಡೆಸಲಾಗುವುದು ಎಂದು ಗೆಹ್ಲೋಟ್‌ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
''ಜೋಧಪುರ ಲೋಕಸಭಾ ವ್ಯಾಪ್ತಿಯ ಆರು ವಿಧಾನಸಭೆಗಳಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ. ನಮಗೆ ನಿರಾಯಾಸ ಗೆಲುವು ದಕ್ಕಲಿದೆ ಎಂದು ಸಚಿನ್‌ ಪೈಲಟ್‌ ಹೇಳಿದ್ದರು. ಆದರೂ ಫಲಿತಾಂಶ ತದ್ವಿರುದ್ಧವಾಯಿತು. ಇದರ ಸಂಪೂರ್ಣ ಹೊಣೆಯನ್ನು ಪೈಟಲ್‌ ಹೊತ್ತುಕೊಳ್ಳಬೇಕಿದೆ,'' ಎಂದು ಸಿಎಂ ಗೆಹ್ಲೋಟ್‌ ಪ್ರತಿಪಾದಿಸಿದರು.
ಆರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ಗೆದ್ದು ಸರಕಾರ ರಚಿಸಿದ ಕಾಂಗ್ರೆಸ್‌, ರಾಜ್ಯದ 25 ಲೋಕಸಭೆ ಸ್ಥಾನಗಳಲ್ಲಿ ಒಂದನ್ನೂ ಗೆಲ್ಲದೇ ಮತ್ತೊಮ್ಮೆ ತನ್ನ ಅಸಹಾಯಕತೆಯನ್ನು ಒಪ್ಪಿಕೊಂಡಿಸಿದೆ.
ಸರಕಾರ ರಚನೆ ಸಂದರ್ಭದಲ್ಲಿಯೇ ಗೆಹ್ಲೋಟ್‌- ಪೈಟಲ್‌ ಬಣಗಳ ನಡುವೆ ಭಿನಾÜ್ನಭಿಪ್ರಾಯ ಇತ್ತು. ಹೈಕಮಾಂಡ್‌ ಅದನ್ನು ಮೇಲ್ಮಟ್ಟದ ತೇಪೆ ಮೂಲಕ ಸರಿಪಡಿಸಿತ್ತು. ಚುನಾವಣೆ ವೇಳೆ ಅದು ಪುನಃ ಕಿತ್ತುಕೊಂಡಿತು ಎಂದು ಪಕ್ಷದ ಆಪ್ತ ಮೂಲಗಳು ವಿಶ್ಲೇಷಿಸಿವೆ.
ಪಕ್ಷದ ಹಿತ ಕಡೆಗಣಿಸಿ ಪುತ್ರನಿಗೆ ಟಿಕೆಟ್‌ ಕೊಡಿಸಿಯೂ ಗೆಲ್ಲಲಾಗದೇ ಮಂಡಿಯೂರಿದ್ದಕ್ಕೆ ಅಶೋಕ್‌ ಪೈಲಟ್‌ ವಿರುದ್ಧ ರಾಹುಲ್‌ ಗಾಂಧಿ ಸಿಡಬ್ಲ್ಯುಸಿ ಸಭೆಯಲ್ಲಿಯೇ ಕಿಡಿಕಾರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ