ಆ್ಯಪ್ನಗರ

ಜಾರ್ಖಂಡ್‌ನಲ್ಲಿ ತಲೆಗೆ ಗನ್‌ ಇಟ್ಟು ಸಾಧ್ವಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

ಆಶ್ರಮದಲ್ಲಿಯೇ ಸಾಧ್ವಿಯೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ 2 ಗಂಟೆಗೆ ಘಟನೆ ನಡೆದಿದ್ದು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

TNN 9 Sep 2020, 5:48 pm
ರಾಂಚಿ: ತಡರಾತ್ರಿ ಆಶ್ರಮಕ್ಕೆ ನುಗ್ಗಿ ಆಶ್ರಮದಲ್ಲಿಯೇ ಸಾಧ್ವಿಯೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ರಾಂಚಿಯಿಂದ 325 ಕಿಮೀ ದೂರದಲ್ಲಿರುವ ಗೊಡ್ಡಾ ಜಿಲ್ಲೆಯ ಪಥ್ವಾರಾ ಗ್ರಾಮದಲ್ಲಿ ಘಟನೆ ನಡೆದಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Vijaya Karnataka Web sadhvi gang raped at gunpoint in godda ashram
ಜಾರ್ಖಂಡ್‌ನಲ್ಲಿ ತಲೆಗೆ ಗನ್‌ ಇಟ್ಟು ಸಾಧ್ವಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ


ನಾಲ್ವರು ಆರೋಪಿಗಳು ಸ್ಥಳೀಯರೇ ಎನ್ನಲಾಗಿದೆ. ಭೂ ವಿವಾದ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಬಂಧಿತನನ್ನು ರೌಡಿ ಶೀಟರ್‌ ದೀಪಕ್‌ ರಾಣಾ ಎಂದು ಗುರುತಿಸಲಾಗಿದ್ದು, ಆತನ ಸಹಚರ ಆಶಿಶ್‌ ರಾಣಾಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಮಂಗಳವಾರ ಬೆಳಗ್ಗೆ 2 ಗಂಟೆಗೆ ಮಹಿಳಾ ಸತ್ಸಂಗ್‌ ಆಶ್ರಮಕ್ಕೆ ಶಸ್ತ್ರಸಜ್ಜಿತರಾಗಿ ನುಗ್ಗಿದ ನಾಲ್ವರು ಆಶ್ರಮದಲ್ಲಿರುವ ಉಳಿದವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿ ಹಾಕಿ 38 ವರ್ಷದ ಸಾಧ್ವಿಗೆ ಗನ್‌ ತೋರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಸಾಧ್ವಿ ಮೇಲಿನ ಅತ್ಯಾಚಾರವನ್ನು ತಡೆಯಲು ಬಂದ ಸಾಧುವೊಬ್ಬರನ್ನು ಆರೋಪಿಗಳು ಥಳಿಸಿದ್ದಾರೆ.

ಕೊರೊನಾ ಸೋಂಕಿತೆಯನ್ನೂ ಬಿಡದ ಕಾಮುಕರು: ಆ್ಯಂಬುಲೆನ್ಸ್ ಚಾಲಕನಿಂದಲೇ ಅತ್ಯಾಚಾರ

ಗೊಡ್ಡಾ ಎಸ್‌ಪಿ ವೈ.ಎಸ್‌.ರಮೇಶ್‌ ಮತ್ತು ಪೊಲೀಸ್‌ ತಂಡ ಆಶ್ರಮಕ್ಕೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿದ್ದು, ಸಾಕ್ಷಾಧಾರಗಳನ್ನು ಸಂಗ್ರಹಿಸಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಎಲ್ಲಾ ಕೋನಗಳಿಂದ ಘಟನೆಯ ವಿಚಾರಣೆ ನಡೆಸಲಾಗುವುದು ಎಂದು ಎಸ್‌ಪಿ ರಮೇಶ್‌ ಹೇಳಿದ್ದಾರೆ.

139 ಜನರ ಮೇಲೆ ರೇಪ್‌ ಆರೋಪ ಮಾಡಿದ್ದ ಮಹಿಳೆ ಯುಟರ್ನ್‌‌..! ಡಾಲರ್‌ ಭಾಯ್‌ ಬೆದರಿಕೆಯಿಂದ ದೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ