ಆ್ಯಪ್ನಗರ

ಕೃಷ್ಣಮೃಗ ಬೇಟೆ: ಸಲ್ಮಾನ್‌ ಅರ್ಜಿ ವಿಚಾರಣೆ ಜು.17ಕ್ಕೆ ಮುಂದೂಡಿಕೆ

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ 5 ವರ್ಷಗಳ ಜೈಲುಶಿಕ್ಷೆ ವಜಾ ಮಾಡುವಂತೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯ ಜು.17ಕ್ಕೆ ಮುಂದೂಡಿದೆ.

Vijaya Karnataka 8 May 2018, 10:39 am
ಜೋಧಪುರ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ 5 ವರ್ಷಗಳ ಜೈಲುಶಿಕ್ಷೆ ವಜಾ ಮಾಡುವಂತೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯ ಜು.17ಕ್ಕೆ ಮುಂದೂಡಿದೆ.
Vijaya Karnataka Web Salman Khan


ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಚಂದ್ರಕುಮಾರ್‌ ಸೊಂಗರ ಅವರು ಪ್ರಕರಣವನ್ನು ಸೋಮವಾರ ಕೈಗೆತ್ತಿಕೊಂಡಾಗ, ಸಲ್ಮಾನ್‌ ಪರ ವಕೀಲರು ಸಮಯಾವಕಾಶ ಕೋರಿ ಮನವಿ ಸಲ್ಲಿಸಿದರು. ಅದನ್ನು ಸ್ವೀಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಾದ ದೇವ್‌ ಕುಮಾರ್‌ ಖಾತ್ರಿ ಅವರು ಏ.5ರಂದು ಸಲ್ಮಾನ್‌ ಖಾನ್‌ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದ್ದರು. ಸಲ್ಮಾನ್‌ ಜಾಮೀನು ಪಡೆದು ಏ.7ರಂದು ಜೈಲಿನಿಂದ ಹೊರಬಂದಿದ್ದರು.

ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ಹೊರತುಪಡಿಸಿ ಇತರ ಆರೋಪಿಗಳನ್ನು ಈಗಾಗಲೇ ಖುಲಾಸೆಗೊಳಿಸಲಾಗಿದೆ. ನಟರಾದ ಸೈಫ್‌ ಅಲಿ ಖಾನ್‌, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರನ್ನು ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.

ಏನಿದು ಪ್ರಕರಣ?: 1998ರಲ್ಲಿ 'ಹಮ್‌ ಸಾಥ್‌ ಸಾಥ್‌ ಹೈ' ಸಿನಿಮಾ ಶೂಟಿಂಗ್‌ ವೇಳೆ ಜೋಧಪುರ ಸಮೀಪದ ಕಂಕಣಿ ಗ್ರಾಮದಲ್ಲಿ ಸಲ್ಮಾನ್‌ ಖಾನ್‌ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಈ ಬೇಟೆಗೆ ಪರವಾನಗಿ ಇಲ್ಲದ ಬಂದೂಕು ಬಳಕೆ ಮಾಡಲಾಗಿತ್ತು. ರಕ್ಷಿತಾರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್‌ ಖಾನ್‌ ವಿರುದ್ಧ ವನ್ಯಜೀವಿ ಸಂರಕ್ಷ ಣಾ ಕಾಯ್ದೆಯ ಸೆಕ್ಷ ನ್‌ 9/51 ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ